ಜನಪದ ಕಾವ್ಯ ಮೀಮಾಂಸೆ

Author : ಎಸ್.ಎಂ. ಹಿರೇಮಠ

Pages 256

₹ 140.00




Year of Publication: 2003
Published by: ವಿದ್ಯಾನಿಧಿ ಪ್ರಕಾಶನ

Synopsys

ಜಾನಪದ ವಿಸ್ತಾರದಷ್ಟೇ ಜನಪದ ಸಾಹಿತ್ಯದ ಹರವು ವ್ಯಾಪಿಸಿಕೊಂಡಿದೆ.ಶಿಷ್ಟ ಸಾಹಿತ್ಯ ಹೂ- ಫಲದ ಬೇರು- ಬೊಡ್ಡೆಯಷ್ಟೇ ಅಲ್ಲ ಇದು.ಒಟ್ಟು ಜೀವನದ ಮೂಲವು ಆದಂತೆ,ಅದರೊಂದಿಗೆ ಹಾಸುಹೊಕ್ಕಾಗಿ ಬೆರೆತುಕೊಂಡಿದೆ.ಶಿಷ್ಟ ಸಾಹಿತ್ಯವೇನಿದ್ದರೂ ಕೃತಕವಾದುದು.ಆದರೆ ಜನಪದ ಸಾಹಿತ್ಯಕ್ಕೆ ಕೃತಿಮವೆಂಬುದೆ ತಿಳಿದಿಲ್ಲವೆಂದರೆ ಅತಿಶಯದ ಹೇಳಿಕೆಯೆನ್ನಿಸಲಾರದು. ನಿಸರ್ಗದಂತೆ ಸಹಜ ಸುಂದರವಾದ ಜನಪದ ಸಾಹಿತ್ಯವು ಒಟ್ಟು ಜನ ಬದುಕಿನ ಪ್ರತಿಬಿಂಬವಾಗಿ ಗೋಚರಿಸುವಂತೆ ,ಅವರ ಮಡಿಲಿನಿಂದಲೇ ಉದ್ಬವಗೊಂಡು ಆಗಿರುತ್ತದೆ. ಆದುದರಿಂದ ಬದುಕಿನ ಶಕ್ತಿಉಷ್ಟೇ ಜನಪದ ಸಾಹಿತ್ಯಕ್ಕೆ ಸತ್ವವಿದೆ,ಸಾಮರ್ಥ್ಯವಿದೆ.ಅದರಲೂ ಜನಪದ ಕಾವ್ಯ ಕ್ರಿಯೆಯು ಒಂದು ಅರ್ಥದಲ್ಲಿ ಜನಪದರು ಸಹಜವಾಗಿ ಬದುಕಿದ್ದ,ಬದುಕಿತ್ತಿರುವ ಬದುಕಿನ ಪಾಡಿಗೆ ಕಲಾತ್ಮಕ ರೂಪವು ನೀಡಿದೆ.ಶಿಷ್ಟಸಾಹಿತ್ಯ -ಶಿಷ್ಟ ಜನಪರಂಪರೆಯಲ್ಲಿ ಇದರ ಬಗೆಗೆ ಅವಹೇಳನದ ದೃಷ್ಟಿಕೋನವಿದ್ದಿತೆಂಬ ಬಾವನೆ ವಿದ್ವಾಂಸರಲ್ಲಿದೆ.

About the Author

ಎಸ್.ಎಂ. ಹಿರೇಮಠ

ಎಂ. ಎಸ್. ಹಿರೇಮಠ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರಗಿಯಲ್ಲಿ 1956 ಜುಲೈ 22 ಜನಿಸಿದರು. ತಂದೆ ಪುರಾಣರತ್ನ ಮಹಾಂತಸ್ವಾಮಿ. ತಾಯಿ ನೀಲಮ್ಮ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತಮ್ಮ ಹುಟ್ಟಿದೂರಿನಲ್ಲೇ ಪೂರೈಸಿದ ಅವರು ಬಿ. ಎ. ಪದವಿಯನ್ನು ಕಲಬುರಗಿಯ ಶ್ರೀ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಪಡೆದರು. ಕಲಬುರಗಿಯ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ‘ಶರಣಬಸವೇಶ್ವರರು ಹಾಗೂ ಅವರ ಪರಿಸರದ ಸಾಹಿತ್ಯ’ ಇವರ ಪಿಎಚ್‌.ಡಿ ಮಹಾಪ್ರಬಂಧ. ರಂಗಭೂಮಿಯಲ್ಲೂ ಆಸಕ್ತಿ ಹೊಂದಿದ್ದ ಹಿರೇಮಠರು ಬೆಂಗಳೂರಿನ ಆದರ್ಶ ಫಿಲಂ ಚಲನಚಿತ್ರ ...

READ MORE

Related Books