ಎಂ.ವಿ. ಸೀತಾರಾಮಯ್ಯ ರವರು ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು. ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ವ್ಯಾಕರಣ ಕ್ಷೇತ್ರಕ್ಕೆ ಹಾಗೂ ಹಸ್ತಲಿಪಿ ಶಾಸ್ತ್ರಕ್ಕೆ ಅವರ ಅಪಾರ ಕೊಡುಗೆಯನ್ನು ನೀಡಿದ ಇವರು ಪ್ರಮುಖ ಚಿತ್ರಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ನವೋದಯ ಸಾಹಿತ್ಯ ಕಾಲದ ಪ್ರಮುಖರಾದ ಇವರು ‘ರಾಘವ’ ಕಾವ್ಯನಾಮದಿಂದಲೇ ಪ್ರಸಿದ್ದಿಯಾದವರು. ಸ್ವತಃ ಚಿತ್ರ ಕಲಾವಿದರೂ, ಕವಿಗಳೂ, ಸಾಹಿತ್ಯಿಕ ವಿಧ್ವಾಂಸರೂ ಆದ ರಾಘವರು ರಚಿಸಿದ ಹಲವು ಕಾವ್ಯಗಳಲ್ಲಿ ಗೇಯ ಪ್ರಕಾರಕ್ಕೆ ಸೇರಿದ ಕೃತಿಗಳನ್ನು ಆಯ್ಕೆ ಮಾಡಿ ಸಂಪಾದಿಸಿ ಹಿರಿಯ ಸಾಹಿತಿ ದೊಡ್ಡರಂಗೇ ಗೌಡರು ಈ ಕೃತಿಯನ್ನು ರಚಿಸಿದ್ದಾರೆ.
©2025 Book Brahma Private Limited.