ನಿನ್ನ ಧ್ಯಾನದ ನೂರೊಂದು ಹಣತೆ

Author : ವಾಸುದೇವ ನಾಡಿಗ್

Pages 146

₹ 170.00




Year of Publication: 2023
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

'ನಿನ್ನ ಧ್ಯಾನದ ನೂರೊಂದು ಹಣತೆ’ ವಾಸುದೇವ ನಾಡಿಗ್‌ ಅವರ ರಚನೆಯ ಕವನಸಂಕಲನವಾಗಿದೆ. ಸಖಿ ಇಲ್ಲದೆ ಕಾಲವು ಚಲಿಸುತ್ತಿಲ್ಲ ಎಂದೆನ್ನು ಹಣತೆ, “ಧ್ಯಾನವೆಂದರೆ ದೇಹವನ್ನು ತ್ಯಜಿಸಿ ಬಂದ ಆತ್ಮದ ತೇರ ಎಳೆತ” ಪ್ರೇಮವೆಂಬುದು ದೇಹಾತೀತವಾದುದು, ಆತ್ಮಗಳ ಒಡನಾಟದ ಚೆಲುವು ಎಂಬುದಾಗಿ ಅರ್ಥೈಸುತ್ತದೆ. ಹೌದಲ್ಲವೇ? ಪ್ರೇಮಕ್ಕೆ ಕಣ್ಣಿಲ್ಲ ಎಂಬು ಕವಿ ಈ ಮೂಲಕ ಇದನ್ನು ನಿರೂಪಿಸುತ್ತಾರೆ. ಪ್ರತಿ ಹಣತೆಯು ಪ್ರೇಮದ ಹೊಸ ವ್ಯಾಖ್ಯಾನದ ಬೆಳಕು ಹೊರ ಸೂಸುತ್ತದೆ. ಪ್ರೇಮವಿಲ್ಲದೆ ಬದುಕಿಲ್ಲ, ಜಗವಿಲ್ಲ ಎಂದು ಗಟ್ಟಿಯಾಗಿ ನಂಬಿರುವ ಒಲವ ಕವಿ ವಾಸುದೇವ ನಾಡಿಗರ “ನಿನ್ನ ಧ್ಯಾನದ ನೂರೊಂದು ಹಣತೆ”ಯ ಮೂಲಕ ನೂರೊಂದು ಅಷ್ಟೇ ಅಲ್ಲ, ಇನ್ನೂ ಅಗಣಿತ ಹಣತೆಗಳ ಬೆಳಗುವ ಕವಿ ಎಂಬುದನ್ನು ಕನ್ನಡ ಸಾಹಿತ್ಯಕ್ಕೆ ತೋರಿದ್ದಾರೆ. ಈ ಹಣತೆಗಳು ಹೀಗೆ ಮತ್ತೆ ಮತ್ತೆ ಬೆಳಗುತ್ತಲಿರಲಿ, ಆ ಬೆಳಕಿನಲ್ಲಿ ನಾವು ಉಸಿರಾಡುತ್ತೇವೆ, ಪ್ರೀತಿಸುತ್ತೇವೆ, ಬದುಕಿನ ಗಮ್ಯತೆಗೊಂದು ದಿವ್ಯತೆಯನು ಆರೋಪಿಸಿಕೊಳ್ಳುತ್ತೇವೆ- ಶ್ರೀನಿವಾಸ ಪಾ ನಾಯ್ಡು.

About the Author

ವಾಸುದೇವ ನಾಡಿಗ್

ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. 20 ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ...

READ MORE

Related Books