"ಕನ್ನಡಕ್ಕೆ ಕಿಟೆಲ್ಲರ ಕೊಡುಗೆ" ಇದು ಆರ್.ಸಿ.ಹಿರೇಮಠ ಲೇಖಕರ ಸಂಕಲನದ ಕೃತಿ. ಮುಖ್ಯವಾಗಿ ಈ ಸಂಪುಟದಲ್ಲಿ ಮೂರು ದರ್ಶನಗಳಿವೆ. ಮೊದಲನೆಯದಾದ ಜೀವನ ದರ್ಶನ ಕಿಟೆಲ್ಲರ ಜೀವನ ಚರಿತ್ರೆ, ತತ್-ಪೂರ್ವದ ಕನ್ನಡ ಸಾಹಿತ್ಯ ಮುಂತಾದವುಗಳಿಗೆ ಸಂಬಂಧಪಟ್ಟ ಲೇಖನಗಳನ್ನೊಳಗೊಂಡಿದೆ. ಚಾರಿತ್ರಿಕ ದೃಷ್ಟಿಯಿಂದ ಇಲ್ಲಿಯ ಲೇಖನಗಳು ಅನೇಕ ಹೊಸ ವಿಷಯಗಳನ್ನು ಬೆಳಕಿಗೆ ತರುತ್ತವೆ.
ಭಾಷಾವಿಜ್ಞಾನ, ವಚನಗಳಿಗೆ ಸಂಬಂಧಿಸಿದಂತೆ ಪ್ರಮುಖ ಕೆಲಸ ಮಾಡಿದ ರುದ್ರಯ್ಯ ಚಂದ್ರಯ್ಯ ಹಿರೇಮಠ ಕನ್ನಡದ ಪ್ರಮುಖ ಸಂಶೋಧಕ ಆಗಿದ್ದರು. ರೋಣ ತಾಲ್ಲೂಕಿನ ಕುರುಡಗಿಯಲ್ಲಿ 1920ರ ಜನೆವರಿ 15ರಂದು ಜನಿಸಿದರು. ತಂದೆ ಚಂದ್ರಯ್ಯ- ತಾಯಿ ವೀರಮ್ಮ. ತಮ್ಮ ವಿದ್ಯಾಭ್ಯಾಸವನ್ನು ಧಾರವಾಡ, ಬೆಳಗಾವಿಯಲ್ಲಿ ಪೂರೈಸಿದರು. ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ.ಪದವಿ (1940) ಗಳಿಸಿದರು. ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಅವರು ಪಿಎಚ್.ಡಿ ಪದವಿ (1951) ಗಳಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮುಖ್ಯಸ್ಥರಾಗಿ, ಕುಲಪತಿ (1975-1980)ಗಳಾಗಿದ್ದರು. ಕನ್ನಡ ವಿಭಾಗ ಇವರ ಕಾಲದಲ್ಲಿ ಕನ್ನಡ ಅಧ್ಯಯನ ಪೀಠವಾಯಿತು. ...
READ MORE