1975ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದನ್ನು ಪ್ರತಿಭಟಿಸಿ ಸಮಾಜವಾದಿ ನೆಲೆಯಲ್ಲಿ ಚಿಂತನೆಯು ಚಿಗುರೊಡೆದಿದ್ದೇ ಬಂಡಾಯ ಸಾಹಿತ್ಯ. ಅದು ಸಂಘಟನೆಯ ರೂಪು ತಳೆದು ಅಭಿವ್ಯಕ್ತಿ ಸ್ವಾತಂತ್ಯ್ರ ಶಕ್ತಿ ನೀಡಿತ್ತು. ವ್ಯವಸ್ಥೆಯನ್ನು ವಿರೋಧಿಸುವ ನಡೆಗೆ ನುಡಿಯ ರೂಪ ನೀಡಿ ಬಂಡಾಯ ಸಾಹಿತ್ಯ ಸೃಷ್ಟಿಯಾಗುತ್ತಾ ಹೋಯಿತು. 1979ರ ಮಾರ್ಚ್ 10ರಂದು ಬೆಂಗಳೂರಿನ ದೇವಾಂಗ ಹಾಸ್ಟೆಲ್ ನಲ್ಲಿ ಮೊದಲ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು. ಇಂದಿಗೆ ಆ ಚಳವಳಿಯು ತನ್ನ ಚಿಂತನೆಯ 40ನೇ ವರ್ಷ ಆಚರಿಸಿಕೊಳ್ಳುತ್ತಿದೆ. ಚಳವಳಿ ನಡೆದು ಬಂದ ದಾರಿ, ಸಾಧಿಸಿದ ಅಂಶಗಳು ಹೀಗೆ ಆತ್ಮಾವಲೋಕನವನ್ನು ಕಟ್ಟಿಕೊಡುವ ಉದ್ದೇಶದೊಂದಿಗೆ ಮೂಡಿ ಬಂದಿದ್ದೇ “ಬಂಡಾಯ ಸಾಹಿತ್ಯ: ಅರಿವು-ಅಂತರಂಗ.
©2025 Book Brahma Private Limited.