ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ

Author : ನಾ. ಡಿಸೋಜ

Pages 176

₹ 100.00




Year of Publication: 2017
Published by: ಸಾಹಿತ್ಯ ನಂದನ
Address: ನಂ.9, 4ನೇ ‘ಇ’ ವಿಭಾಗ, 10 ‘ಎ’ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560010
Phone: 08023354619

Synopsys

ಇದು ಉತ್ತರ ಕನ್ನಡ ಜಿಲ್ಲೆಯ ಒಂದು ಸ್ಥಳದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಕತೆಯಾಗಿದೆ. ಹುಟ್ಟಿನಿಂದ ಭಾರತೀಯನಾದರೂ, ಇಲ್ಲಿಯ ಧರ್ಮ, ವರ್ಗಗಳಿಗೆ ಸೇರಿಕೊಂಡಿದ್ದರೂ ಸಹ ಕ್ರೈಸ್ತ ಧರ್ಮಕ್ಕೆ ಪರಿವರ್ತಿವಾಗಿ, ಅದರ ಕಟ್ಟು ಪಾಡು, ನೀತಿ ನಿಯಮಗಳಿಗೆ ಒಳಗಾಗಿ ಜೀವನ ಸಾಗಿಸುವ ಸಂಸಾರದಲ್ಲಿ, ಲೋಕಾಚಾರ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ, ವ್ಯಕ್ತಿಯು ತನ್ನ ಸುತ್ತಲಿನ ವಾತಾವರಣದ ಪ್ರಭಾವಕ್ಕೆ ಒಳಗಾಗಿ, ತನಗೆ ಗೊತ್ತಿಲ್ಲದೇ ಸ್ವಾತಂತ್ರ ಹೋರಾಟದಲ್ಲಿ ತೊಡಗುತ್ತಾನೆ. ಈ ಪ್ರಕ್ರಿಯೆಯಲ್ಲಿ ಅವನ ವಿಚಾರ, ಆಲೋಚನಾ ಕ್ರಮ ಮತ್ತೊಂದು ಸ್ಥರವನ್ನು ಮುಟ್ಟುತ್ತದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ವರ್ಗದವರು ಭಾಗವಹಿಸಿದ್ದರೆಂಬುದು  ತಿಳಿದಿರುವ ಸಂಗತಿ. ಆದರೆ ಎಲ್ಲ ಧರ್ಮೀಯರ ಪಾತ್ರವಿತ್ತೇ? ಭಾರತೀಯ ಕ್ರಿಶ್ಚಿಯನ್ನರು ಸಹ ಬ್ರಿಟಿಷರ ವಿರುದ್ಧಹೋರಾಟ ನಡೆಸಿದ್ದರೆ ಎಂಬ ಪ್ರಶ್ನೆಯೊಂದಿಗೆ ಹೊರಟ ವಸ್ಯತುವೇ ಇಲ್ಲಿ ಕಾದಂಬರಿ ರೂಪ ತಳೆದಿದೆ. 

About the Author

ನಾ. ಡಿಸೋಜ
(06 June 1937 - 05 January 2025)

ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ.  ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಅವರು 2025 ಜ. 05 ಭಾನುವಾರದಂದು ನಿಧನರಾದರು.  ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ...

READ MORE

Related Books