ಕಥೆಯೆಂಬ ಕನ್ನಡಿಯಲ್ಲಿ

Author : ಸೌಜನ್ಯ ದತ್ತರಾಜ

Pages 88

₹ 200.00




Year of Publication: 2022
Published by: ಅದಮ್ಯಾ ಪ್ರಕಾಶನ
Address: ಜಿ-6, ಗುಲ್ ಮೊಹರ್ ಬ್ಲಾಕ್, ಹರವಿಜಯ ವ್ಯಾಲಿ ವ್ಯೂ ಅಪಾರ್ಟ್ಮೆಂಟ್ಸ್, ರವಿ ಹಿಲ್ ವ್ಯೂ ಲೇಔಟ್, ಇಟ್ಟಮಡು, ಬನಶಂಕರಿ, 3ನೆಯ ಸ್ಟೇಜ್, ಬೆಂಗಳೂರು - 560085
Phone: 9986806272

Synopsys

"ಕಥೆಯೆಂಬ ಕನ್ನಡಿಯಲ್ಲಿ" ಸೌಜನ್ಯ ದತ್ತರಾಜ ಅವರ ಕಥಾಸಂಕಲನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಅಪೂರ್ವ ಅಜ್ಜಂಪುರ ಅವರು, ಸೌಜನ್ಯ ದತ್ತರಾಜ ಅವರ ಕಥಾಸಂಕಲನವು ನಗರಜೀವನದ ಹೆಣ್ಣುಮಕ್ಕಳ ಬದುಕಿನ ಹೊಸತೊಂದು ಲೋಕವನ್ನು ನಮಗೆ ಪರಿಚಯಿಸುತ್ತದೆ. ಲೇಖಕಿಯ ದೃಷ್ಟಿಕೋನ, ಭಾವನೆಗಳು, ಸಮಸ್ಯೆಯ ಬುಡದಲ್ಲೇ ಕಂಡುಕೊಳ್ಳುವ ಪರಿಹಾರಗಳು ವಿಶಿಷ್ಟವೆನಿಸುತ್ತವೆ. ಇಲ್ಲಿನ ಪಾತ್ರಗಳ ಮೂಲಕ ಆಧುನಿಕ ಸ್ತ್ರೀಯರ ಅನೇಕ ಸಮಸ್ಯೆ, ಸಂಕೀರ್ಣತೆ ಮತ್ತು ನಿರೀಕ್ಷೆಗಳಿಗೆ ಈ ಕೃತಿಯಲ್ಲಿ ಸೌಜನ್ಯ ಕಥಾರೂಪ ಕೊಟ್ಟಿದ್ದಾರೆ. "ಅರುಣೋದಯ", "ಜಡೆ", "ಮಂಥನ", "?....!", "ಆಯ್ಕೆ" ಕಥೆಗಳಲ್ಲಿ ಲೇಖಕಿಯ ನವೀನ ಚಿಂತನೆಯ ಹೊಳಹು ಮಿಂಚುವುದನ್ನು ಕಾಣಬಹುದು ಎಂದಿದ್ದಾರೆ.

About the Author

ಸೌಜನ್ಯ ದತ್ತರಾಜ

ಲೇಖಕಿ ಸೌಜನ್ಯ ದತ್ತರಾಜ ಅವರು ಹದಿನೇಳು ವರ್ಷಗಳ ಕಾಲ ವೃತ್ತಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆಪ್ತ ಸಮಾಲೋಚನಾ ತರಬೇತಿಯನ್ನೂ ಪಡೆದಿರುತ್ತಾರೆ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಫ್ರಿಲಾನ್ಸರ್ ಬರಹಗಾರರೂ ಆಗಿದ್ದಾರೆ. ಸಿನಿಮಾ, ನಾಟಕ ಮತ್ತು ಪುಸ್ತಕಗಳ ಕುರಿತು ಪರಿಚಯಾತ್ಮಕ ಲೇಖನಗಳನ್ನು ಬರೆಯುತ್ತಿರುತ್ತಾರೆ. ಇವರು ಬರೆದ ಕಥೆಗಳು 'ತರಂಗ', 'ಮಂಗಳ', 'ವಿಶ್ವವಾಣಿ' ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 2014ರ 'ಕನ್ನಡಪ್ರಭ' ದೀಪಾವಳಿ ವಿಶೇಷಾಂಕದ ಸಣ್ಣ ಕಥಾ ಸ್ಪರ್ಧೆಯಲ್ಲಿ ಬಹುಮಾನವನ್ನೂ ಗಳಿಸಿದ್ದಾರೆ. ಕಥೆ, ಕವಿತೆ, ಮಕ್ಕಳಿಗಾಗಿ ನಾಟಕಗಳನ್ನೂ ಬರೆದಿರುವ ಇವರು, ಇತ್ತೀಚಿನ ದಿನಗಳಲ್ಲಿ ವಿಷುವಲ್ ಮೀಡಿಯಾದಲ್ಲಿ ಚಿತ್ರಕಥೆ, ಸಂಭಾಷಣೆಗಳನ್ನು ...

READ MORE

Excerpt / E-Books

 

 

Related Books