ಹೈದ್ರಾಬಾದ್ ಕರ್ನಾಟಕದ ಪ್ರಮುಖ ಕಾದಂಬರಿಕಾರರು

Author : ಸುರೇಂದ್ರಕುಮಾರ ಕೆರಮಗಿ

Pages 122

₹ 100.00




Year of Publication: 2017
Published by: ಸೃಷ್ಟಿ ಸೌರಭ ಪ್ರಕಾಶನ
Address: ಕಲಬುರಗಿ

Synopsys

ಲೇಖಕ ಡಾ. ಸುರೇಂದ್ರಕುಮಾರ ಕೆರಮಗಿ ಅವರ ‘ಹೈದರಾಬಾದ್ ಕರ್ನಾಟಕದ ಪ್ರಮುಖ ಕಾದಂಬರಿಕಾರರು’ ಕೃತಿಯು ಹೈದರಾಬಾದ್-ಕರ್ನಾಟಕ ಭಾಗದ 35 ಜನ ಕಾದಂಬರಿಕಾರರು, ಅವರ ಇತಿವೃತ್ತ ಹಾಗೂ ಕಾದಂಬರಿಗಳ ವಿಮರ್ಶಾತ್ಮಕ ಒಳನೋಟಗಳನ್ನು ಸಂಕಲಿಸಲಾಗಿದೆ. ರಾಯಚೂರು ಜಿಲ್ಲೆಯಿಂದ ಸಿದ್ಧಯ್ಯಪುರಾಣಿಕ, ಶಾಂತರಸರು, ಜಂಬಣ್ಣ ಅಮರಚಿಂತ ಸೇರಿದಂತೆ ಒಂಬತ್ತು ಜನ ಕಾದಂಬರಿಕಾರರು.ಕಲಬುರ್ಗಿ ಜಿಲ್ಲೆಯಿಂದ ಚಂದ್ರಕಾಂತ ಕುಸನೂರು,ಗೀತಾನಾಗಭೂಷಣ, ಚೆನ್ನಣ್ಣ ವಾಲಿಕಾರ್,ಸೇರಿದಂತೆ ಹದಿನೈದು ಜನ ಕಾದಂಬರಿಕಾರರು. ಬೀದರ್ ಜಿಲ್ಲೆಯಿಂದ ಯಶೋದಮ್ಮ ಸಿದ್ದಬಟ್ಟೆ, ಜಯದೇವಿ ಗಾಯಕವಾಡ, ಸೇರಿದಂತೆ ಆರು ಜನ ಕಾದಂಬರಿಕಾರರು. ಯಾದಗಿರಿ ಜಿಲ್ಲೆಯಿಂದ ಚಂದ್ರಕಾಂತ ಕರದಳ್ಳಿ ರಂಗರಾಜ ವನದುರ್ಗ ಸೇರಿದಂತೆ ಮೂವರು ಕಾದಂಬರಿಕಾರರ ಜೀವನ ಹಾಗೂ ಕಾದಂಬರಿ ಕುರಿತು ಚಿಂತನೆ ಕೃತಿ ಇದು.

About the Author

ಸುರೇಂದ್ರಕುಮಾರ ಕೆರಮಗಿ

ಡಾ. ಸುರೇಂದ್ರಕುಮಾರ್ ಕೆರಮಗಿ ಅವರು ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನವರು. ಸ್ವಾಯತ್ತ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರು. "ಡಾ.ಹಾ.ಮಾ ನಾಯಕ ಅವರ ಅಂಕಣ ಸಾಹಿತ್ಯ ಒಂದು ಅಧ್ಯಯನ" ವಿಷಯವಾಗಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯವು ಇವರಿಗೆ ಪಿಎಚ್ ಡಿ ಪ್ರದಾನ ಮಾಡಿದೆ. ಹಳೆಗನ್ನಡ ಸಾಹಿತ್ಯದಲ್ಲೂ ಇವರಿಗೆ ಆಸಕ್ತಿ. ರಾಷ್ಟ್ರೀಯ,ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕೃತಿಗಳು: ಆಯ್ದ ವೈಚಾರಿಕ ಪ್ರಬಂಧಗಳ ಸಂಗ್ರಹ, ಹಾ.ಮಾ ನಾಯಕ,ಕನ್ನಡದಲ್ಲಿ ಅಂಕಣ ಸಾಹಿತ್ಯ, ಸೃಷ್ಟಿ ಸೌರಭ, ಮಾತು ಮಥಿ ಸಿದಾಗ, ಸಾಹಿತ್ಯ ಸುಧೆ, ಸಾಹಿತ್ಯ ಸಂಜೀವಿನಿ, ಹೈದರಾಬಾದ ಕರ್ನಾಟಕದ ಪ್ರಮುಖ ಕಾದಂಬರಿಕಾರರು, ಮಡಿವಾಳ ...

READ MORE

Related Books