ಸ್ವಾಮಿ ವಿವೇಕಾನಂದ

Author : ಹ.ಚ. ನಟೇಶ ಬಾಬು

Pages 40

₹ 70.00




Year of Publication: 2011
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

‘ಸ್ವಾಮಿ ವಿವೇಕಾನಂದ’ ಭಾರತದ ದಿವ್ಯ ಸಂದೇಶದ ಸಾಕಾರ ರೂಪ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ. ಡಾ. ಮಹೇಂದ್ರ ಮಿಟ್ಟಲ್ ಅವರ ಕೃತಿಯನ್ನು ಹ.ಚ. ನಟೇಶ್ ಬಾಬು ಕನ್ನಡಕ್ಕೆ ಅನುವಾದಿಸಿದ್ದಾರೆ. ವಸಂತ ಪ್ರಕಾಶನದ ಮಕ್ಕಳಿಗಾಗಿ ದೇಶ ವಿದೇಶಗಳ ಸ್ವಾರಸ್ಯ ಕಥೆಗಳು ಮಾಲಿಕೆಯಲ್ಲಿ ಪ್ರಕಟವಾದ ಕೃತಿ ಇದು. ಮಕ್ಕಳಲ್ಲಿ ತಿಳಿವಳಿಕೆ, ಬುದ್ಧಿ ಶಕ್ತಿ, ಜಾಣತನ, ಸಾಂದರ್ಭಿಕ ಚಿತ್ತಸ್ಥೈರ್ಯ, ಮಾನವೀಯ ಮೌಲ್ಯಗಳನ್ನು ತುಂಬುವ ಸಲುವಾಗಿ ಪ್ರಕಟವಾದ ಮಹತ್ತರರ ಕೃತಿಗಳಲ್ಲಿ ಸ್ವಾಮಿ ವಿವೇಕಾನಂದರ ಜೀವನಚರಿತ್ರೆಯಿರುವ ಈ ಕೃತಿಯೂ ಒಂದು.

About the Author

ಹ.ಚ. ನಟೇಶ ಬಾಬು

ಹ.ಚ. ನಟೇಶ ಬಾಬು ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹರಳಾಪುರದವರು. ಓದಿದ್ದು ಕನ್ನಡ ಎಂ.ಎ, ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವೀಧರರು. ಪ್ರಸ್ತುತ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ತನಕ ‘ಸಿರಿ’ (ತುಮಕೂರು ಜಿಲ್ಲಾ ಕವಿಗಳ ಕವನ ಸಂಕಲನ ಸಂಪಾದನೆ), ಬ್ರಿಟನ್ ವ್ಯಂಗ್ಯಚಿತ್ರಕಾರರು, ಅಮೆರಿಕ ವ್ಯಂಗ್ಯಚಿತ್ರಕಾರರು, ಭಾರತದ ವ್ಯಂಗ್ಯಚಿತ್ರಕಾರರು(ಖ್ಯಾತ ಕಾರ್ಟೂನ್ ಕಿಂಗ್ ಗಳಿಗೆ ಸಂಬಂಧಿಸಿದ ಮೂರು ಪುಸ್ತಕಗಳು), ಅಮಿತಾಭ್ ಬಚ್ಚನ್(ವಿಶ್ವವಿಖ್ಯಾತರ ವ್ಯಕ್ತಿಚಿತ್ರ ಮಾಲೆಗಾಗಿ ಕಿರು ಪುಸ್ತಕ), ಸಿಂಗ್ ಈಸ್ ಕಿಂಗ್(ಡಾ.ಮನಮೋಹನ್ ಸಿಂಗ್ ಜೀವನ-ಸಾಧನೆ), ಗಿಫ್ಟೆಡ್(ವಿಶೇಷ ಚೇತನರ ಸ್ಫೂರ್ತಿದಾಯಕ ಕತೆಗಳ ಅನುವಾದ), ಸೇರಿದಂತೆ 7 ಪುಸ್ತಕಗಳನ್ನು ...

READ MORE

Related Books