ಭಗವಾನ್ ಬುದ್ಧ

Author : ಹ.ಚ. ನಟೇಶ ಬಾಬು

Pages 48

₹ 70.00




Year of Publication: 2011
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

‘ಭಗವಾನ್ ಬುದ್ಧ’ ಡಾ. ಮಹೇಂದ್ರ ಮಿತ್ತಲ್ ಅವರ ಕೃತಿಯನ್ನು ಹ.ಚ. ನಟೇಶ್ ಬಾಬು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮನುಜ ಕುಲಕ್ಕೆ ಸತ್ಯ, ಅಹಿಂಸೆ, ಕರುಣೆ, ದಯೆ, ಭ್ರಾತೃತ್ವದ ಸಂದೇಶ ಸಾರಿದ ಮಹಾವಿಮೋಚಕ ಬುದ್ಧನ ಜೀವನಚರಿತ್ರೆಯನ್ನು ಸರಳ ಕನ್ನಡದಲ್ಲಿ ನೀಡಲಾಗಿದೆ. ವಸಂತ ಪ್ರಕಾಶನ ಮಕ್ಕಳಿಗಾಗಿ ದೇಶ ವಿದೇಶಗಳ ಸ್ವಾರಸ್ಯ ಕಥೆಗಳು ಮಾಲೆಯಲ್ಲಿ ಪ್ರಕಟಿಸಿದ ಮಹಾತ್ಮರ ಜೀವನ ಚರಿತ್ರೆಗಳಲ್ಲಿ ಈ ಕೃತಿಯೂ ಒಂದು. ಮಕ್ಕಳಲ್ಲಿ ಅಹಿಂಸೆ, ಸತ್ಯ, ಸಮಾನತೆಯ ಭಾವನೆಗಳನ್ನು ತುಂಬುವ ಸಲುವಾಗಿ ಮಕ್ಕಳಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಭಗವಾನ್ ಬುದ್ಧನ ಜೀವನಚರಿತ್ರೆಯನ್ನು ನೀಡಲಾಗಿದೆ.

About the Author

ಹ.ಚ. ನಟೇಶ ಬಾಬು

ಹ.ಚ. ನಟೇಶ ಬಾಬು ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹರಳಾಪುರದವರು. ಓದಿದ್ದು ಕನ್ನಡ ಎಂ.ಎ, ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವೀಧರರು. ಪ್ರಸ್ತುತ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ತನಕ ‘ಸಿರಿ’ (ತುಮಕೂರು ಜಿಲ್ಲಾ ಕವಿಗಳ ಕವನ ಸಂಕಲನ ಸಂಪಾದನೆ), ಬ್ರಿಟನ್ ವ್ಯಂಗ್ಯಚಿತ್ರಕಾರರು, ಅಮೆರಿಕ ವ್ಯಂಗ್ಯಚಿತ್ರಕಾರರು, ಭಾರತದ ವ್ಯಂಗ್ಯಚಿತ್ರಕಾರರು(ಖ್ಯಾತ ಕಾರ್ಟೂನ್ ಕಿಂಗ್ ಗಳಿಗೆ ಸಂಬಂಧಿಸಿದ ಮೂರು ಪುಸ್ತಕಗಳು), ಅಮಿತಾಭ್ ಬಚ್ಚನ್(ವಿಶ್ವವಿಖ್ಯಾತರ ವ್ಯಕ್ತಿಚಿತ್ರ ಮಾಲೆಗಾಗಿ ಕಿರು ಪುಸ್ತಕ), ಸಿಂಗ್ ಈಸ್ ಕಿಂಗ್(ಡಾ.ಮನಮೋಹನ್ ಸಿಂಗ್ ಜೀವನ-ಸಾಧನೆ), ಗಿಫ್ಟೆಡ್(ವಿಶೇಷ ಚೇತನರ ಸ್ಫೂರ್ತಿದಾಯಕ ಕತೆಗಳ ಅನುವಾದ), ಸೇರಿದಂತೆ 7 ಪುಸ್ತಕಗಳನ್ನು ...

READ MORE

Related Books