30ನೇ ವಯಸ್ಸಿನಲ್ಲಿಯೇ ಸಂಸಾರ ತೊರೆದು ಸನ್ಯಾಸ ದೀಕ್ಷ ಪಡೆದ ಮಹಾವೀರನ ಬಗ್ಗೆ ವಿಮಲ ಸುಮತಿ ಕುಮಾರ್ ರುನಿರೂಪಣೆಯನ್ನು ನೀಡಿದ್ದಾರೆ. 30 ನೇ ವಯಸ್ಸಿನಲ್ಲಿ , ಯವ್ವನದಲ್ಲಿ ಕುಟುಂಬ , ಸಂಸಾರ ಎಲ್ಲವನ್ನು ತೊರೆದು ಸನ್ಯಾಸಿ ಆಗಬೇಕೆಂದು ಪಣತೊಟ್ಟು ಕೊನೆಗೆ ಸನ್ಯಾಸಿ ದೀಕ್ಷೆ ಪಡೆದ ಮಹಾವೀರನು, ಜನ ಭಾಷೆಯಾದ ಪಾಕೃತದಲ್ಲಿ ತನ್ನ ಪ್ರವಚನನ್ನು ನೀಡಿದವರು.ಇವರ ಬೋಧನೆಯ ಆಚಾರಾಂಗ, ಉತ್ತರಾಧ್ಯಯನ, ಸೂತ್ರ, ಮೂಲಾರಾಧನಾ, ಸಮಯಸಾರಾ, ಪ್ರವಚನಸಾರ, ಕಾರ್ತಿಕೇಯಾನುಪ್ರೇಕ್ಷೆ, ಜೈನ ಪವಿತ್ರ ಗ್ರಂಥವಾದ ಸವಣಸುತ್ತಂ ಮೊದಲಾದ ಪ್ರಾಚೀನ ಪ್ರಾಕೃತ ಗ್ರಂಥಗಳನ್ನು ಇಲ್ಲಿ ಸಾಮಾನ್ಯರಿಗು ಅರ್ಥವಾಗುವ ಶೈಲಿಯಲ್ಲಿ ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.