ಲೇಖಕಿ ಎ.ಪಿ. ಮಾಲತಿ ಅವರು ಮಹಿಳೆಯರ ಜಾಗೃತಿಗಾಗಿ ಬರೆದ ಕೃತಿ-ದಿವ್ಯಪಥ. ಸಮಸ್ಯಾತ್ಮಕ ಬದುಕನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಮಹಿಳೆಯರನ್ನು ಕೇಂದ್ರವಾಗಿರಿಸಿ ಬರೆದ ಕೃತಿ.
ಮಂಜುವಾಣಿ ಪತ್ರಿಕೆಯ ಜೀವನಧನ್ಯ ಅಂಕಣದಡಿ ಇಲ್ಲಿಯ ಬರೆಹಗಳು ಪ್ರಕಟವಾಗಿದ್ದವು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಕೃತಿಯ ಮುನ್ನುಡಿಯಲ್ಲಿ ‘ಗಂಡಸರು ಮಹಿಳೆಯರಿಗೆ ನೀವು ಹೀಗೆ ಬರೆಯಬೇಕು, ಹೀಗೆ ಸಮಸ್ಯೆಗಳನ್ನು ಎದುರಿಸಬೇಕು ಎಂದು ಉಪದೇಶ ನೀಡುವ ಬದಲು ಮಹಿಳೆಯ ದೃಷ್ಟಿಯಿಂದ ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಈ ಕೃತಿಯಲ್ಲಿದೆ. ಇದು ಹೆಚ್ಚು ಪ್ರಭಾವಕಾರಿ ಎಂದು ಅಭಿಪ್ರಾಯಪಟ್ಟು, ಲೇಖಕಿಯ ಕಳಕಳಿ ಪ್ರಶಂಸಿಸಿದ್ದಾರೆ.
©2025 Book Brahma Private Limited.