ಜಾನಪದ ತಜ್ಞ ಡಾ. ಜೀ.ಶಂ. ಪರಮಶಿವಯ್ಯ ಅವರ ಕೃತಿ-ಕನ್ನಡ ಜನಪದ ಕಥೆಗಳು. ಜಾನಪದ ಸಾಹಿತ್ಯವು ಎಂದಿಗೂ ಅಳಿಯದಂತಿರುವ ಶಾಶ್ವತ ಸಾಹಿತ್ಯ. ಇದರಲ್ಲಿ ಜೀವನ ಮೌಲ್ಯಗಳಿವೆ. ಅನುಭವದ ಗಟ್ಟಿತನವಿದೆ. ಅದರಂತೆ ಕಥೆಗಳು ಸಹ ಮಾನವೀಯ ಮುಖವನ್ನು ಪರಿಚಯಿಸುತ್ತವೆ. ಬದುಕಿನ ಅರ್ಥ, ಸಾರ್ಥಕತೆ ತಿಳಿಸುವ ಜಾನಪದ ಕಥೆಗಳು ಸತ್ಯವನ್ನು ಹುಡುಕುವಲ್ಲಿ ತರ್ಕದ ಮಹತ್ವವನ್ನೂ ತಿಳಿಸುತ್ತವೆ. ಇಂತಹ ಜನಪದ ಕಥೆಗಳ ಸಂಗ್ರಹವೇ ಈ ಕೃತಿ.
©2025 Book Brahma Private Limited.