ವಿಶ್ವವು ಸಂತೋಷ ಮತ್ತು ಶಾಂತಿಯಿಂದ ಬಾಳಬೇಕಾದರೆ ಮಾನವನ ಜೀವನವನ್ನು ಉದಾತ್ತವನ್ನಾಗಿ ಮಾಡಿ ಅವನ ಆತ್ಮವನ್ನು ಬೆಳಗುವಂತೆ ಮಾಡಬೇಕು ಎಂಬುವುದು ಯೋಗೇಶ್ವರ್ ಅವರ ಕವಿತೆಗಳ ಮೂಲ ಆಶಯವಾಗಿದೆ. ನಮ್ಮ ಮನಸ್ಸನ್ನು ಪರಮೋದಾತ್ತ ಹಂತಕ್ಕೆ ಕೊಂಡೊಯ್ದರೆ ನಮ್ಮ ಅನೇಕ ರೀತಿಯ ತೊಂದರೆಗಳು, ಅನೇಕ ದುಃಖಗಳು ಕಡಿಮೆಯಾಗುತ್ತವೆ. ಈ ಹಾದಿಯಲ್ಲಿ ಈ ಕೃತಿಯು ಸಾಧಕರಿಗೆ ಸಹಾಯವಾಗುತ್ತದೆ ಎಂಬ ನಂಬಿಕೆಯಿಂದ ಹೊರತಂದ ಈ ಸಂಕಲನಕ್ಕೆ ಯೋಗೇಶ್ವರ್ ಅವರ ಜೀವನಾನುಭವಗಳೇ ಮುಖ್ಯ ತಳಹದಿಯಾಗಿದೆ.
©2025 Book Brahma Private Limited.