ಪ್ರಕೃತಿ ಸಂಜೀವಿನಿ, ಔಷಧೀಯ ಗುಣಗಳು

Author : ಸ್ವಾಮಿ ನಾರಾಯಣ ತೀರ್ಥ

Pages 560

₹ 295.00




Year of Publication: 2013
Published by: ವಾಸನ್ ಪಬ್ಲಿಕೇಷನ್ಸ್
Address: # 25, ವಾಸನ್ ಟವರ್‍ಸ್ , ಗುಡ್ ಶೆಡ್ ರಸ್ತೆ, ಟಿಸಿಎಂ ರಾಯನ್ ರಸ್ತೆ, ಸುಭಾಶ್ ನಗರ, ಕಾಟನ್ ಪೇಟೆ, ಬೆಂಗಳೂರು-560053
Phone: 0804853 5855

Synopsys

ಲೇಖಕ ಸ್ವಾಮಿ ನಾರಾಯಣ ತೀರ್ಥ ಅವರು ಆಯುರ್ವೇದ ಪದ್ಧತಿಯಲ್ಲಿ ಆಳವಾದ ನಂಬಿಕೆಯುಳ್ಳವರು. ಗಿಡ-ಜಡಿಬೂಟಿಗಳ ಮಹತ್ವ, ಆರೋಗ್ಯ ಕಾಯ್ದುಕೊಳ್ಳುವಲ್ಲಿ ಅವುಗಳ ಪಾತ್ರ, ಭಾರತೀಯ ಆಯುರ್ವೇದ ಪರಂಪರಾಗತ ಜ್ಞಾನ ಇತ್ಯಾದಿ ಅಂಶಗಳು ಅವರ ವಿಶೇಷಾಧ್ಯಯನದ ಕ್ಷೇತ್ರಗಳು. ಆಯುರ್ವೇದ ಮತ್ತು ಪ್ರಕೃತಿ ಸಂಜೀವಿನ ಮಾಲಿಕೆಯಡಿ ಈ ಕೃತಿ ಪ್ರಕಟಿಸಲಾಗಿದೆ. ಪ್ರಕೃತಿ ಸಂಜೀವಿನಿ ಎಂಬುದು ಸ್ವಾಮಿ ನಾರಾಯಣ ತೀರ್ಥರು ರಚಿಸಿದ ಕೃತಿ. ಪಪ್ಪಾಯಿ, ನಿಂಬೆಹಣ್ಣು, ಅರಿಶಿಣ, ಬೇವು, ಬೆಳ್ಳುಳ್ಳಿ, ತುಳಸಿ, ಜೇನುತುಪ್ಪ, ಈರುಳ್ಳಿ, ನೆಲ್ಲಿಕಾಯಿ, ದಾಳಿಂಬೆ, ಶುಂಠಿ, ಇಂಗು.... ಹೀಗೆ ಆಯುರ್ವೇದ ವೈದ್ಯಪದ್ಧತಿಯ ಚಿಕಿತ್ಸಾ ಗುಣಗಳಿರುವ ಹಣ್ಣು, ಕಾಯಿ, ಸೊಪ್ಪು, ಗಿಡ ಮುಂತಾದವುಗಳ ಮಹತ್ವವನ್ನು ವಿಸ್ತೃತವಾಗಿ ವಿವರಿಸಿರುವ ಕೃತಿ ಇದು. ಔಷಧಿಯ ಗುಣಗಳು, ಜೀವಸತ್ವಗಳು, ಉಪಯೋಗಗಳು, ಆರೋಗ್ಯವರ್ಧಕ ಅಂಶಗಳು ಹಾಗೂ ಸಾಮಾನ್ಯ ರೋಗಗಳಿಗೆ ಉಪಚಾರ ಹೀಗೆ ವಿಸ್ತೃತ ಅಧ್ಯಾಯಗಳಡಿ ಇಡೀ ಪ್ರಕೃತಿಯಲ್ಲಿರುವ ಸಂಜೀವಿನಿಗಳೆಂದೇ ಲೇಖಕರು ಸಂಬೋಧಿಸಿ, ಈ ಕೃತಿಯಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ.

About the Author

ಸ್ವಾಮಿ ನಾರಾಯಣ ತೀರ್ಥ

ಸ್ವಾಮಿ ನಾರಾಯಣ ತೀರ್ಥರು ಅಧ್ಯಾತ್ಮ ಜೀವಿಗಳು. ಉತ್ತಮ ಬರಹಗಾರರು. ಉತ್ತಮ ಉಪನ್ಯಾಸಕಾರರು. ವಾರಾಣಸಿಯಲ್ಲಿ ಸ್ವಾಮಿ ನಾರಾಯಣ ತೀರ್ಥ ವೇದ ವಿದ್ಯಾ ಸಂಸ್ಕೃತಿ ಚರ್ಚಾ ಕೇಂದ್ರದಡಿ ಆಶ್ರಮ ಸ್ಥಾಪಿಸಿದ್ದಾರೆ. ಆಯುರ್ವೇದ ವೈದ್ಯಪದ್ಧತಿಯಲ್ಲಿ ತುಂಬಾ ಆಸಕ್ತರು. ಕೃತಿಗಳು: ಬೇವು, ದಾಳಿಂಬೆ, ಶುಂಠಿ, ನೆಲ್ಲಿಕಾಯಿ, ಜೇನುತುಪ್ಪ, ಅರಶಿಣ (ಈ ಎಲ್ಲ ಕೃತಿಗಳು ಆಯುರ್ವೇದ ಮತ್ತು ಪ್ರಕೃತಿ ಸಂಜೀವಿನಿ ಮಾಲೆಯಡಿ ಪ್ರಕಟಿತ), ...

READ MORE

Related Books