ಭೌತವಾದೀಯ ಚಿಂತನೆಗಳು-ಕೃತಿಯನ್ನು ಕೆ.ಎಲ್. ಗೋಪಾಲಕೃಷ್ಣಯ್ಯ ಅವರು ರಚಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ. ಎಚ್.ಎನ್.ದತ್ತಿನಿಧಿ ಪ್ರಶಸ್ತಿ’ (2008) ಪೆಡೆದಿದೆ. ಬೇರೆ ಬೇರೆ ಸಂದರ್ಭದಲ್ಲಿ ಬರೆದಿರುವ ಲೇಖನಗಳ ಸಂಗ್ರಹವಿದು. ಕೃತಿಯ ಮೊದಲ ಮೂರು ಲೇಖನಗಳು ಭೌತವಾದ ಕುರಿತು ಚರ್ಚಿಸುತ್ತವೆ. ಉಳಿದವು ಬೇರೆ ಬೇರೆ ಸನ್ನಿವೇಶಗಳಿಗೆ ಭೌತವಾದಿಯೊಬ್ಬರು ನೀಡಿದ ಪ್ರತಿಕ್ರಿಯೆಗಳಾಗಿವೆ. ವಿದ್ವತ್ ಪೂರ್ಣ ಮಂಡನೆ ಹಾಗೂ ವೈಚಾರಿಕತೆಯಿಂದ ಈ ಕೃತಿ ಮಹತ್ವದ್ದಾಗಿದೆ.
©2025 Book Brahma Private Limited.