ಲೇಖಕ ಡಾ. ಕೆ. ವಿ. ರಾಜೇಶ್ವರಿ ಅವರು ಅನುವಾದ ಮಾಡಿದ ಕಥೆ ಸಂಕಲನ ಕೃತಿ ʻಚಂದಮಾಮ ಕಥೆಗಳು, ಭಾಗ 1'. ಇಲ್ಲಿರುವ ಕತೆಗಳು ಮಕ್ಕಳಿಗೆ, ಹಿರಿಯರಿಗೆ ಹಾಗೂ ಎಲ್ಲರಿಗೂ ವಿಜ್ಞಾನದ ವಿನೋದವನ್ನು ಕೊಡುತ್ತವೆ. ಇವು 1970ರಿಂದ 2021ರ ನಡುವೆ ಪ್ರಕಟವಾದ ಕಥೆಗಳಾಗಿವೆ. ಪುಸ್ತಕದ ಬೆನ್ನುಡಿಯಲ್ಲಿ, “ಮಕ್ಕಳಿಗೆ ಕಥೆಗಳೆಂದರೆ ಪಂಚಪ್ರಾಣ, ಅಂತಹ ಮಕ್ಕಳ ಕಥೆಗಳು ಹೇಗಿರಬೇಕೆಂದರೆ, ಮಕ್ಕಳು ಓದುವ ಕಥೆಗಳಲ್ಲಿ ಜ್ಞಾನ, ವಿಜ್ಞಾನ, ವಿನೋದ, ಉತ್ಸಾಹ, ಉಲ್ಲಾಸ, ನೀತಿ ಇವುಗಳಿದ್ದರೆ ಅವು ಮಕ್ಕಳ ಮಾನಸಿಕ ಬೆಳವಣಿಗೆಗೆ ಬಹಳ ಸಹಾಯಕವಾಗುತ್ತವೆ. ಇಂತಹ ಕಥೆಗಳನ್ನು ಕಟ್ಟಿಕೊಡುವುದರಲ್ಲಿ ಮುಂದಿರುವುದು ಹೆಸರಾಂತ ಮಕ್ಕಳ ಪತ್ರಿಕೆ ಚಂದಮಾಮ. ಚಂದಮಾಮ ಕಥೆಗಳನ್ನು ಓದುವುದರಿಂದ ಮಕ್ಕಳಿಗೆ ಪ್ರಪಂಚದ ಪರಿಚಯವಾಗುತ್ತದೆ. ನಮ್ಮ ಸಂಪ್ರದಾಯದ ಹಿರಿಮೆ ತಿಳಿಯುತ್ತದೆ. ಅವರಲ್ಲಿ ನೀತಿ, ನಿಯಮಗಳು ಒಳ್ಳೆಯ ಶಿಕ್ಷಣವನ್ನು ತರುತ್ತವೆ.ಅವರಲ್ಲಿ ಉತ್ಸಾಹ-ಉಲ್ಲಾಸ, ಆನಂದ ಮೂಡಿಸುತ್ತವೆ.ಒಟ್ಟಿನಲ್ಲಿ ಹೇಳಬೇಕೆಂದರೆ ಚಂದಮಾಮ ಕಥೆಗಳೆಂದರೆ ಮಕ್ಕಳಿಗೆ ಬಹಳ ಇಷ್ಟ” ಎಂದು ಹೇಳಲಾಗಿದೆ.
©2025 Book Brahma Private Limited.