ಭೌತವಿಜ್ಞಾನಿ ಡಾ. ಫ್ರಿಟ್ಜೋಫ್ ಕ್ಯಾಪ್ರ ಅವರು ಅರವಿಂದರನ್ನು ಕುರಿತು ಮಾಡಿದ ಉಪನ್ಯಾಸಗಳನ್ನು ಈ ಕೃತಿಯಲ್ಲಿದೆ. ಈ ಕೃತಿಯನ್ನು ಬಿ.ಎಸ್.ಮಯೂರರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಡಾ. ಫ್ರಿಟ್ಜೋಫ್ ಕ್ಯಾಪ್ರ ಅವರು ಆಧುನಿಕ ಭೌತವಿಜ್ಞಾನ ಹಾಗೂ ಪೌರ್ವಾತ್ಯದ ಅತೀಂದ್ರಿಯ ಜ್ಞಾನಗಳನ್ನು ಸಮೀಕರಿಸಿದ್ದಾರೆ. ಸಾಪೇಕ್ಷ ಸಿದ್ಧಾಂತಕ್ಕೂ ಸಮಾನಾಂತರವಾಗಿ ಭಾರತೀಯ ಜ್ಞಾನವಾಹಿನಿಯಲ್ಲಿ ಸಂದರ್ಭಗಳು ಕಾಣಸಿಗುತ್ತವೆ ಎಂಬುದನ್ನು ವೈಜ್ಞಾನಿಕವಾಗಿ ಅವರು ನಿರೂಪಿಸುತ್ತಾರೆ. ಇದೇ ಸಂದರ್ಭದಲ್ಲಿ ಅವರು ಸಮಾಜ ಮತ್ತು ಸಂಸ್ಕೃತಿಗಳ ಅಂತರಂಗಗಳ ಬಗ್ಗೆಯೂ ಆಳವಾದ ವಿವರಣೆಯನ್ನು ನೀಡಿದ್ದಾರೆ.
©2025 Book Brahma Private Limited.