ವಚನಗಳ ಓದು

Author : ಸಿ.ಪಿ. ನಾಗರಾಜ

Pages 648

₹ 750.00




Year of Publication: 2025
Published by: ನಾಗು ಸ್ಮಾರಕ ಪ್ರಕಾಶನ
Address: ಆರ್.ವಿ.ಕಾಲೇಜು ಪೋಸ್ಟ್, ಬೆಂಗಳೂರು.
Phone: 9986347521

Synopsys

ಸಿ. ಪಿ. ನಾಗರಾಜ ಅವರು ಹನ್ನೆರಡನೆಯ ಶತಮಾನದ ಶಿವಶರಣಶರಣೆಯರ ವಚನಗಳಿಂದ ಆಯ್ದು ಪ್ರಕಟಿಸುತ್ತಿರುವ ಕೃತಿ 'ವಚನಗಳ ಓದು'. ಈ ಸಂಕಲನವನ್ನು ಓದುವಾಗ, ವಚನಗಳೆಲ್ಲಾ ಏನೋ ಕಿವಿಗೆ ಇಂಪಾದ, ಬುದ್ಧಿಗೆ ಚುರುಕನ್ನು ನೀಡುವ ಸುಭಾಷಿತಗಳೆಂದಷ್ಟೇ ನೋಡಬಾರದೆಂಬುದು ಸಿ. ಪಿ. ನಾಗರಾಜ ಅವರ ಆಶಯವಾಗಿದೆ. ವಚನಗಳಲ್ಲಿ ಸುಭಾಷಿತಗಳು ವಿಫುಲವಾಗಿವೆ, ಸೊಗಸಾಗಿವೆ. ಆದರೆ ಮನಸ್ಸಿಗೆ ಆಹ್ಲಾದ ನೀಡಿ ಮುಕ್ತಾಯವಾಗುವ ಕಾವ್ಯದ ಪರಿ ವಚನಗಳದ್ದಲ್ಲ. ಅವು ಪ್ರಾಯೋಗಿಕ ಜಗತ್ತಿನ ತಿಳಿವಳಿಕೆ ಮತ್ತು ಮುಲಾಮು. ಎರಡಕ್ಕೂ ಸಿದ್ಧಷಧ. ಇಂತಹ ಪ್ರಚೋದನಾತ್ಮಕ ಮತ್ತು ಪ್ರಯೋಜನಕಾರಿ ಕೃತಿಯೊಂದನ್ನು ರಚಿಸಿ ಹೊರತಂದಿದ್ದಾರೆ ಲೇಖಕರು.

About the Author

ಸಿ.ಪಿ. ನಾಗರಾಜ

ಬರಹಗಾರ ಸಿ.ಪಿ ನಾಗರಾಜು ಅವರು 1945ರಲ್ಲಿ ಪುಟ್ಟೇಗೌಡ-ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಜನಿಸಿದರು. ಎಂ.ಎ, ಪಿಎಚ್.ಡಿ ವ್ಯಾಸಂಗ ಮಾಡಿ ಸ್ತುತ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುದ್ರಿತ ನಾಟಕ ಕೃತಿಗಳು: ಭಾಗೀರಥಿ, ಅಂಬೆ, ಹಾವು, ಅಂಗಿಬಟ್ಟೆ, ಒಂದು ರೂಪಾಯಿ, ಕಳ್ಳರಿದ್ದಾರೆ ಎಚ್ಚರಿಕೆ, ಹೆಣದ ಹಣ, ಮೂರು ಸಾಮಾಜಿಕ ನಾಟಕಗಳು. ಮುದ್ರಿತ ಗದ್ಯ ಕೃತಿಗಳು: ಕರಿಯನ ಪುರಾಣ, ಕನಕನ ಅವ್ವ, ಹಳ್ಳಿಗಾಡಿನ ರೂವಾರಿ, ಡಾ.ಬಂದೀಗೌಡ, ಆಣೆ ಪ್ರಮಾಣಗಳು, ಬಯ್ಗುಳ, ಸರ್ವಜ್ಞ ವಚನಗಳ ಓದು, ಅಲ್ಲಮ ವಚನಗಳ ಓದು, ಶಿವಶರಣೆಯರ ವಚನಗಳ ಓದು, ಶಿವಶರಣರ ವಚನಗಳ ಓದು, ಬಸವಣ್ಣನ ...

READ MORE

Related Books