ತೂಗುತಿದೆ ನಿಜ ಬಯಲಲಿ

Author : ದಾವಲಸಾಬ ನರಗುಂದ

Pages 175

₹ 150.00




Year of Publication: 2021
Published by: ಶ್ರೀ ಸಿದ್ಧಲಿಂಗೇಶ್ವರ ಪುಸ್ತಕ ಪ್ರಕಾಶನ
Address: ಮುಖ್ಯ ರಸ್ತೆ, ಸರಸ್ವತಿ ಗೋದಾಮು,  ಸೂಪರ್ ಮಾರ್ಕೆಟ್, ಕಲಬುರಗಿ
Phone: 9448124431

Synopsys

ಶರೀಫರು ರಚಿಸಿದ ತತ್ವಪದಗಳ ಪೈಕಿ ಕೆಲವೊಂದನ್ನು ಆಯ್ದು ಲೇಖಕ ದಾವಲಸಾಬ ನರಗುಂದ ಅವರು ಸಂಪಾದಿಸಿದ ಕೃತಿ-ತೂಗುತಿದೆ ನಿಜ ಬಯಲಲಿ. ಶಿಶುನಾಳ ಶರೀಫರು  ತತ್ವಪದಕಾರರು. ಗುರು ಗೋವಿಂದ ಭಟ್ಟರ ಆಪ್ತ ಶಿಷ್ಯರಾಗಿ ತತ್ವಜ್ಞಾನದ ಔನ್ನತ್ಯವನ್ನು ಸಾಧಿಸಿದವರು. ಇವರ ತತ್ವಪದಗಳು ಧರ್ಮ ಸಾಮರಸ್ಯವನ್ನು, ಬದುಕಿನ ಸಾರ್ಥಕತೆಯನ್ನು ಸಾರುತ್ತವೆ. ಮನುಷ್ಯನ ಟೊಳ್ಳುತನ, ಬಡಿವಾರವನ್ನು, ಸೋಗಲಾಡಿತನವನ್ನು ಖಂಡಿಸುತ್ತವೆ. ಮಾನವೀಯ ಸಂವೇದನೆಯ ಇಂತಹ ತತ್ವಪದಗಳ ಆಶಯವು ಮನುಕುಲದ ಉತ್ತಮ ವಿಕಾಸವೇ ಆಗಿದೆ. ವಿದ್ಯಾರ್ಥಿ-ಬೋಧಕರಿಗೂ ಮಾತ್ರವಲ್ಲ; ಸಾಮಾನ್ಯ ಓದುಗರಿಗೂ ಈ ಕೃತಿ ಉಪಯುಕ್ತವಾಗಿದೆ.  

About the Author

ದಾವಲಸಾಬ ನರಗುಂದ

ಲೇಖಕ ದಾವಲಸಾಬ ನರಗುಂದ ಮೂಲತಃ ಗದಗ ಜಿಲ್ಲೆಯ ನರಗುಂದದವರು. 1994 ಜುಲೈ 09 ರಂದು ಜನನ. ತಂದೆ ಮೀರಾಸಾಬ ತಾಯಿ ಬೀಬಿಜಾನ್. . ಕಾವ್ಯ, ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ಅನುವಾದ, ಸಂಪಾದನೆ ಈ ಪ್ರಕಾರಗಳಲ್ಲಿ 02 ಕೃತಿಗಳನ್ನು ಪ್ರಕಟಿಸಿದ್ದಾರೆ. ತತ್ವಪದಗಳ ರಚನೆ ಇವರ ಹವ್ಯಾಸ.  'ಕಡಕೋಳ ಮಡಿವಾಳಪ್ಪ ಮತ್ತು ಶಿಶುನಾಳ ಶರೀಫ: ತೌಲನಿಕ ಅಧ್ಯಯನ' ಎಂಬ ವಿಷಯದ ಮೇಲೆ ಮಹಾಪ್ರಬಂಧ ರಚಿಸಿದ್ದಾರೆ.   ಕೃತಿಗಳು: ತೂಗುತಿದೆ ನಿಜ ಬಯಲಲಿ, ಅರಿವಿನ ಜಾಡು   ...

READ MORE

Related Books