ವಡ್ಡಮ್ಮ ತಾತನ ತತ್ವಪದಗಳ ಸಂಕಲನವೇ ‘ಒಡಲ ಜೋಗುಳ’


‘ತಂಬಾಕು ತಿನ್ನಬಾರದೆ ತಂಗ್ಯಮ್ಮ ತಂಬಾಕು ತಿನ್ನಬಾರದೆ, ತಂಬಾಕು ತಿಂದರೆ ಉಂಬಾಕ ಬಾರದೆ’ ಎನ್ನುತ್ತಾರೆ ಯಮನೂರಪ್ಪ ವಡಕಿ. ಅವರು ‘ಒಡಲ ಜೋಗುಳ’ ಕೃತಿ ಕುರಿತು ಬರೆದ ಸಂಪಾದಕರ ಮಾತು ನಿಮ್ಮ ಓದಿಗಾಗಿ…..

ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಾಟೂರಿನವರಾದ ಆದಯ್ಯಸ್ವಾಮಿ ಹಿರೇಮಠ ಅವರು ಬಾಲ್ಯದ ದಿನಗಳಿಂದಲೂ ಗಂಗಾವತಿ ನಗರದಲ್ಲಿ ವಾಸವಾಗಿದ್ದವರು. ಪ್ರಾಥಮಿಕ ಶಿಕ್ಷಣದಿಂದ ಪದವಿ ಪೂರ್ವ ಶಿಕ್ಷಣದವರೆಗೂ ಗಂಗಾವತಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ. ತಮ್ಮ ಬಾಲ್ಯದ ದಿನಗಳಿಂದಲೂ ಆಧ್ಯಾತ್ಮವನ್ನು ಮೈಗೂಡಿಸಿಕೊಂಡ ಇವರು ಸುಮಾರು ಮೂವತ್ತು ವರ್ಷಗಳಿಂದಲು ಸಮಾಜದಲ್ಲಿ ತಾವು ಕಂಡುಂಡ ಸತ್ಯ ಘಟನೆಗಳನ್ನು ಆಧರಿಸಿ ಆ ಘಟನೆಗಳನ್ನೇ ತತ್ವಪದಗಳಾಗಿ ಬರವಣೆಗೆಯಲ್ಲಿ ತೊಡಗಿದವರು ಆಧ್ಯಾತ್ಮಿಕ ಚಿಂತನೆ, ಭಜನೆ, ಸತ್ಸಂಗದಲ್ಲಿ ಭಾಗಿಯಾಗುವುದರ ಜೊತೆಗೆ ಇಂದಿಗೂ ಪ್ರತಿ ನಿತ್ಯ ತತ್ವಪದಗಳನ್ನು ಬರೆಯುತ್ತಿದ್ದಾರೆ. ಇವರ ನಿಜ ನಾಮ ಆದಯ್ಯಸ್ವಾಮಿ ಎಂಬುದಾಗಿದ್ದು, ಮೂವತ್ತು ವರ್ಷಗಳ ಹಿಂದೆ ಸಂಸಾರವನ್ನು ತೈಜೀಸಿ ರಾಂಪೂರ ಮಾಗಾಣಿಯು ಸುತ್ತಲೂ ಬೆಟ್ಟ, ಗುಡ್ಡಗಳಿಂದ ಕೂಡಿದ ಮಾಗಾಣಿ ಪ್ರದೇಶ ಭತ್ತದ ಗದ್ದೆಯಲ್ಲಿ ವಡ್ಡಮ್ಮ ದೇವಿ ನೆಲೆಸಿರುವ ಸ್ಥಳದಲ್ಲಿ ಇವರು ಒಂದು ಆಶ್ರಮವನ್ನು ನಿರ್ಮಿಸಿಕೊಂಡು ವಡ್ಡಮ್ಮ ದೇವಿಯ ಆರಾಧಕರಾಗಿ ಸೇವೆ ಸಲ್ಲಿಸುತ್ತಾ ಕಾಲ ಕಳೆಯುತ್ತಿದ್ದಾರೆ.

ಗಂಗಾವತಿಯ ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೀತಿಯ ಗುರುಗಳು ಪ್ರಾಚಾರ್ಯರಾದ ಡಾ. ಜಾಜಿ ದೇವೇಂದ್ರಪ್ಪ ಅವರನ್ನು ನನ್ನ ಪಿ.ಎಚ್.ಡಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದಂತೆ ಭೇಟಿಯಾದ ಸಂದರ್ಭದಲ್ಲಿ ಆದಯ್ಯ ತಾತನು ಎಂಬ ಹೆಸರಿನ ಬಗ್ಗೆ ನನಗೆ ಪರಿಚಯಿಸಿದರು. ಒಂದು ದಿನ ಆದಯ್ಯ ತಾತನನ್ನು ಭೇಟಿ ಮಾಡಲು ರಾಂಪೂರ ಗ್ರಾಮಕ್ಕೆ ತೆರಳಿ ಆದಯ್ಯ ತಾತ ಬಗ್ಗೆ ವಿಚಾರಿಸಿದಾಗ ಆದಯ್ಯ ತಾತ ಎನ್ನುವ ಹೆಸರಿನ ವ್ಯಕ್ತಿಗಳು ಇಲ್ಲಿ ಯಾರು ಇಲ್ಲ ಎಂದು ಗ್ರಾಮಸ್ಥರು ಪ್ರತಿಕ್ರಿಯಿಸಿದರು. ಆಗ ವಡ್ಡಮ್ಮ ದೇವಿಯ ಪೂಜಾರಿ ಎಂದು ತಿಳಿಸಿದೆ. ತಕ್ಷಣಕ್ಕೆ ಈ ಭಾಗದಲ್ಲಿ ಆದಯ್ಯಸ್ವಾಮಿವರನ್ನು ವಡ್ಡಮ್ಮತಾತನೆಂದು ಕರೆಯುವರು ಊರಿನ ಹೊರವಲಯದಲ್ಲಿರುವ ವಡ್ಡಮ್ಮ ದೇವಿ ದೇವಸ್ಥಾನದಲ್ಲಿರುವರು ಎಂದು ಗ್ರಾಮಸ್ಥರು ತಿಳಿಸಿದರು.

ವಡ್ಡಮ್ಮ ತಾತನ ಮೋದಲ ಭೇಟಿಗೆ ಹೋದಾಗ ಗುಡಿಯ ಮುಂದೆ ಏಕಾಂಗಿಯಾಗಿ ತಂಬೂರಿ ನುಡಿಸುತ್ತಾ ತತ್ವಪದಗಳನ್ನು ಹಾಡುತ್ತಾ ಕುಳಿತಿದ್ದರು. ಬಂದ ವಿಷಯ ತಿಳಿಸಿ ಅವರಿಂದ ಒಂದಿಷ್ಟು ಹಾಡುಗಳನ್ನು ಹಾಡಿಸಿಕೊಂಡು ಆಡಿಯೋ ರೇಕಾರ್ಡ್ ಮಾಡಿಕೊಂಡು ಬಂದೆ. ಅದರಲ್ಲಿ ತಂಬಾಕು ತಿನ್ನಬಾರದೆ ತಂಗ್ಯಮ್ಮ ತಂಬಾಕು ತಿನ್ನಬಾರದೆ, ತಂಬಾಕು ತಿಂದರೆ ಉಂಬಾಕ ಬಾರದೆ ಎನ್ನುವ ತತ್ವಪದವನ್ನು ಅದ್ಭುತವಾಗಿ ಹಾಡಿದ್ದರು. ನಂತರ ಎರಡನೇ ಬಾರಿಗೆ ಹೋದ ಸಂದರ್ಭದಲ್ಲಿ ನನ್ನ ಪಿಎಚ್.ಡಿ ಮಹಾಪ್ರಬಂಧವನ್ನು ತೆಗುದುಕೊಂಡು ಹೋಗಿ ಅವರಿಗೆ ತೋರಿಸಿದೆ ಮಹಾಪ್ರಬಂಧದಲ್ಲಿ ಅವರ ಕೆಲವು ವಿಷಯಗಳನ್ನು ದಾಖಲಿಸಿದ್ದನ್ನು ನೋಡಿ ಖುಷಿಯನ್ನು ವ್ಯಕ್ತಪಡಿಸಿ ನಾನು ಸಾಕಷ್ಟು ತತ್ವಪದಗಳನ್ನು ಬರೆದಿದ್ದೆನೆ. ಎಲ್ಲಿಯೂ ಪ್ರಕಟವಾಗಿಲ್ಲ ಎಂದು ಹೇಳಿ ಅವರೇ ಕೈಯ್ಯಾರೆ ಬರೆದ ತತ್ವಪದಗಳ ಹಸ್ತಪ್ರತಿಯನ್ನು ನನಗೆ ನೀಡಿದರು. ನಾನು ಈ ತತ್ವಪದಗಳನ್ನು ಸಂಪಾದಿಸಿ ಪುಸ್ತಕ ರೂಪದಲ್ಲಿ ತರುವೆ ಎಂದು ಕೇಳಿಕೊಂಡೆ ಆಗಲಿ ಎಂದು ಹಸ್ತಪ್ರತಿಯನ್ನು ನನ್ನ ಕೈಗೆ ನೀಡಿ ಆಶೀರ್ವದಿಸಿದರು. ಇದರ ಫಲವಾಗಿಯೇ ಈ ಕೃತಿ ಓದುಗರಿಗೆ ಧಕ್ಕಿದೆ. ಇದು ನನ್ನ ಮೊದಲ ಸಂಪಾದನಾ ಕೃತಿಯಾಗಿರುವುದರಿಂದ ಇದರಲ್ಲಿ ಉಳಿದ ಇನ್ನೂ ಅನೇಕ ತತ್ವಪದಗಳನ್ನು ಮುಂದಿನ ಹಂತದಲ್ಲಿ ಮತ್ತೆ ಪುಸ್ತಕ ರೂಪದಲ್ಲಿ ಪ್ರಕಟಿಸಲು ತೀರ್ಮಾನಿಸಿದ್ದೇನೆ.

ಈ ಕೃತಿಗೆ ಮುನ್ನುಡಿಯನ್ನು ಬರೆಯಲು ಡಾ. ಸಿ.ಬಿ. ಚಿಲ್ಕರಾಗಿಯವರನ್ನು ಕೇಳಿಕೊಂಡಾಗ ಅಕ್ಕರೆಯಿಂದ ಒಪ್ಪಿ ಸೋಗಸಾಗಿ, ಅರ್ಥಪೂರ್ಣವಾದ ವಿಚಾರಗಳೊಂದಿಗೆ ಮುನ್ನುಡಿಯನ್ನು ಬರೆದು ಶುಭ ಆರೈಸಿದ ಪ್ರೀತಿಯ ಗುರುಗಳಿಗೆ ಹೃದಯ ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಸಂಪಾದನಾ ಕೃತಿ ಹೊರತರಲು ದಾರಿ ತೋರಿದ ನನ್ನ ಸ್ನಾತಕೊತ್ತರ ವಿದ್ಯಾಗುರುಗಳು ಆದ ಡಾ. ಜಾಜಿ ದೇವೇಂದ್ರಪ್ಪ ಅವರಿಗೆ ವಡ್ಡಮ್ಮ ತಾತನ ತತ್ವಪದಗಳನ್ನು ಸಂಪಾದಿಸಿರುವ ಪುಸ್ತಕ ರೂಪದಲ್ಲಿ ಹೊರತರಲು ಇಚ್ಚಿಸಿದ್ದೇನೆ ಎಂದು ತಿಳಿಸಿದಾಗ ಹರ್ಷ ವ್ಯಕ್ತಪಡಿಸಿದರು. ಇದಕ್ಕೆ ನಿವೇ ಬೆನ್ನುಡಿಯನ್ನು ಬರೆಯಬೇಕು ಎಂದು ಗುರುಗಳಲ್ಲಿ ಮನವಿ ಮಾಡಿಕೊಂಡಾಗ ಒಪ್ಪಿ ತುಂಬಾ ಪ್ರೀತಿಯಂದ ಅರ್ಥಪೂರ್ಣವಾದ ಬೇನ್ನುಡಿ ಬರೆದ ಪ್ರೀತಿಯ ಗುರುಗಳಿಗೆ ಅನಂತ ಧನ್ಯವದಗಳನ್ನು ಅರ್ಪಿಸುವೆ.

ಕಷ್ಟ ಕಾಲದ ದಿನಗಳಲ್ಲಿಯೂ ತಮ್ಮ ಯಾವ ಕಷ್ಟವನ್ನು ಲೇಕ್ಕಿಸದೇ ಓದು, ಬರಹ ಗೊತ್ತಿರದೇ ಆದ ನಾವುಗಳು ನಮ್ಮ ಹಾಗೇ ನಮ್ಮ ಮಕ್ಕಳಾಗಬಾರದೆಂದು ಭಾವಿಸಿ ನಮ್ಮೆಲರನ್ನು ವಿದ್ಯಾವಂತರನ್ನಾಗಿ ಮಾಡಿದ ನಮ್ಮ ತಂದೆಯವರಾದ ದಿ॥ ಫಕೀರಪ್ಪ ನಂದಾಪೂರ, ತಾಯಿ ಅನ್ನಮ್ಮ ನಂದಾಪೂರ ಹಾಗೂ ನನ್ನ ನೇಲ್ಮೀಯ ಸಹೋದರರಾದ ಬುಡ್ಡಪ್ಪ, ಶಿವಪ್ಪ, ವಡಿಕೆಪ್ಪ, ಲಕ್ಷ್ಮೀಕಾಂತ, ನನ್ನ ಮುದ್ದಿನ ಮಡದಿ ದೇವಮ್ಮ ಯಮನೂರಪ್ಪ ಅವರಿಗೆ ಅನಂತ ಪ್ರಣಾಮಗಳನ್ನು ಅರ್ಪಿಸುವೆ.

ಪಿಎಚ್.ಡಿ. ಪದವಿ ಸಂದರ್ಭದಲ್ಲಿ ಪ್ರತಿಯೊಂದು ಹಂತದಲ್ಲಿ ಸದಾ ನನಗೆ ಶ್ರೇಯಸ್ಸನ್ನು ಬಯಸುವ ವ್ಯಕ್ತಿ ಆಗಿದ್ದವರು ಕನ್ನಡ ವಿಶ್ವವಿದ್ಯಾಲಯ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಮಂಜುನಾಥ ಬೇವಿನಕಟ್ಟಿ ಮೇಷ್ಟ್ರಿಗೆ ಸಂಶೋಧನಾ ಮಾರ್ಗದರ್ಶಕರಾಗಿದ್ದ ಡಾ. ವೆಂಕಟೇಶ ಎಚ್ ಗುರುಗಳಿಗೆ ಹಾಗೂ ಕನ್ನಡ ವಿಶ್ವವಿದ್ಯಾಲಯ ಅಧ್ಯಯನಾಂಗದ ನಿರ್ದೇಶಕರಾದ ಡಾ. ಅಮರೇಶ ಯತಗಲ್ ಗುರುಗಳಿಗೆ, ಡಾ. ಮುಲ್ತಾಜ್ ಬೇಗಂ ಅವರಿಗೆ ಅನಂತ ಧನ್ಯವಾದಗಳು. ಈ ಕೃತಿ ಸಿದ್ಧತೆಗೆ ಡಿ.ಟಿ.ಪಿ ಮಾಡಲು ಸಹಾಯ ಮಾಡಿದ ಆತ್ಮೀಯ ಗೆಳೆಯ ಡಾ. ನಾಗೇಶ ಯರಂಗಳ್ಳಿಯವರಿಗೆ ಮತ್ತು ಜೊತೆಗಾರರಾದ ಯುವ ಬರಹಗಾರ ಡಾ. ಬಸವರಾಜಪ್ಪ ಪೂಜಾರ ಹಾಗೂ ಯುವಕಥೆಗಾರರಾದ ಡಾ. ಹನುಮಂತ ಹೇರೂರು ಅವರಿಗೆ ತುಂಬು ಹೃದಯದ ಧನ್ಯವಾದಗಳು.

ಕನ್ನಡ ವಿಶ್ವವಿದ್ಯಾಲಯದ ಆಪ್ತ ಸ್ನೇಹಿತರಾದ ಡಾ. ರಮೇಶ, ಡಾ. ಪೂಜಾರಿ ಯಲ್ಲೆಶ, ಡಾ. ಪ್ರೇಮಾ, ಡಾ. ಅಯ್ಯಪ್ಪ, ಡಾ. ರಾಮಾಂಜಿನಿ.ಕೆ. ಡಾ.ನಾಗರಾಜ ತಳವಾರ, ಡಾ. ಎಂ. ಶೃತಿ, ಡಾ. ಹನುಮಂತ ಡಿ, ಡಾ. ಕೆಂಗಯ್ಯ ಕೆ.ಓ, ಡಾ. ಉಮೇಶ ಟಿ, ಡಾ. ಹುಚ್ಚಯ್ಯ ಎಂ, ಡಾ. ಬಸಪ್ಪ ಎಸ್. ಡಾ. ಯೋಗೇಶ ಸಿ.ಎಂ, ಡಾ. ಶಿವರಾಜ್ ಪಾಟೀಲ್, ಡಾ. ರಮೇಶ ಬಿ, ಹಾಗೂ ಕನ್ನಡ ವಿಶ್ವವಿದ್ಯಾಲಯದ ಸಮಸ್ತ ಎಲ್ಲಾ ನನ್ನ ಸ್ನೇಹಿತರಿಗೆ ಕೃತಜ್ಞತೆಯನ್ನು ಸಲ್ಲಿಸುವೆ. ಈ ಕೃತಿಗೆ ಅಂದವಾಗಿ ಅಕ್ಷರ ಜೋಡಣೆ ಮಾಡಿದ ಜ್ಯೋತಿ ಅವರಿಗೆ, ಮುಖಪುಟ ವಿನ್ಯಾಸ ಮಾಡಿಕೊಟ್ಟ ನಾಗಲಕ್ಷ್ಮೀ ಹಾಗೂ ಪ್ರಕಾಶನದ ಪ್ರಕಾಶಕರಿಗೂ ಮತ್ತು ಸರ್ವ ಸದಸ್ಯರಿಗೂ ಹೃತ್ತೂರ್ವಕ ಕೃತಜ್ಞತೆಗಳು.

-ಡಾ. ಯಮನೂರಪ್ಪ ವಡಕಿ

MORE FEATURES

ಒಂದೇ ನದಿಯ ನೀರನ್ನು ಕುಡಿದರೂ, ಒಬ್ಬರು ಇನ್ನೊಬ್ಬರ ಮೇಲೆ ಆಕ್ರಮಣ ಮಾಡುತ್ತಲೇ ಇರುತ್ತಾರೆ

05-10-2024 ಬೆಂಗಳೂರು

“ರೇಷ್ಮೆ ಬಟ್ಟೆಯ ನುಣುಪಿನ ಕಾರಣಕ್ಕೆ ಸಾವಿರಾರು ಮೈಲುಗಳ ಒರಟು ದಾರಿಯೊಂದು ಯವನದಿಂದ ಚೀನಾದವರೆಗೆ ತೆರೆದುಕೊಂಡು ...

ನವೋದಯ ಲೇಖಕರ ಜೀವನಾಡಿಯಾಗಿಯೇ ಠಾಕೂರರ ಸಾಹಿತ್ಯ ಪ್ರಭಾವಿಸಿದೆ

05-10-2024 ಬೆಂಗಳೂರು

“ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಠಾಕೂರರ ಕೃತಿಗಳ ಅನುವಾದಗಳು ಅದರ ಹಿಂದಿನ ಸಾಂಸ್ಕೃತಿಕ ರಾಜಕಾರಣ ಹಾಗೂ ಅನುವಾ...

ಹೊಟ್ಟೆ ತುಂಬಿದ ಮೇಲೆಯೇ ಆಚಾರ ವಿಚಾರಗಳು ಹುಟ್ಟುವುದು

05-10-2024 ಬೆಂಗಳೂರು

"“ಅನುಭಾವ ಎನ್ನುವುದು ಅನುಭವವನ್ನು ಮೀರಿದ ಸಂಗತಿ. ತನ್ನದಲ್ಲದ ಜಗತ್ತಿನ ಸತ್ಯಗಳನ್ನು ಸುಲಭವಾಗಿ ತನ್ನದಾಗಿ...