ಶಿಕ್ಶಣ: ಕೆಲವು ಜನರಲ್ಲಾದ ಮಾತುಗಳು

Date: 27-03-2025

Location: ಬೆಂಗಳೂರು


"ಶಿಕ್ಶಣವನ್ನು ಕೊಡುವುದು ಮಕ್ಕಳಿಗೆ. ಹಾಗಾಗಿ ಒಟ್ಟು ಶಿಕ್ಶಣ ವ್ಯವಸ್ತೆಯ ಕೇಂದ್ರ ಬಿಂದು ಮಗು. ಆದ್ದರಿಂದ ಎಲ್ಲ ಆಯಾಮಗಳಿಂದಲೂ ಮಗುವನ್ನು ಗಮನದಲ್ಲಿ ಇಟ್ಟುಕೊಂಡು ಒಟ್ಟು ವ್ಯವಸ್ತೆಯನ್ನು ರೂಪಿಸಬೇಕಾದ ಅನಿವರ‍್ಯತೆ ಇರುತ್ತದೆ. ಮಗುವಿನ ಮಾನಸಿಕ, ಸಾಮಾಜಿಕ ಮತ್ತು ಬಾಶಿಕ ಆಯಾಮಗಳನ್ನು ಬಹುಮುಕ್ಯವಾಗಿ ಇಲ್ಲಿ ಪರಿಗಣಿಸಬೇಕಾದ ಅವಶ್ಯಕತೆ ಇರುತ್ತದೆ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಶಿಕ್ಶಣ: ಕೆಲವು ಜನರಲ್ಲಾದ ಮಾತುಗಳು’ ಕುರಿತು ಬರೆದಿದ್ದಾರೆ.

ಶಿಕ್ಶಣ ಎಂಬುದು ಕಾಲಾಂತರದಲ್ಲಿ ಸಹಜವಾಗಿ ಇತರೆಲ್ಲ ಸಾಮಾಜಿಕ ಪರಿಕಲ್ಪನೆಗಳಂತೆ ಬದಲಾಗುತ್ತಾ ಬಂದಿದೆ. ಇಂದಿನ ಕಾಲಮಾನದಲ್ಲಿ ಶಿಕ್ಶಣ ಹೆಚ್ಚು ವ್ಯಾಪಕತೆಯನ್ನು ಪಡೆದುಕೊಂಡಿದೆ. ಬದುಕಿನ ಅನಿವರ‍್ಯ ಬಾಗವಾಗಿ ಶಿಕ್ಶಣ ಇಂದು ಬೆಳೆದಿದೆ. ಹಿಂದೆ ಶಿಕ್ಶಣ ಎನ್ನುವುದು ಬಿನ್ನವಾದ ಪರಿಕಲ್ಪನೆಯನ್ನು ಹೊಂದಿದ್ದಿತು. ಅಕ್ಶರ ಕಲಿಕೆಯ ಅನಿವರ‍್ಯತೆ ಹಿಂದೆ ಇರಲಿಲ್ಲ. ಆದ್ದರಿಂದ ಶಿಕ್ಶಣ ಎನ್ನುವುದು ಸಹಜವಾಗಿಯೆ ಇಂದಿನ ಪರಿಕಲ್ಪನೆಯನ್ನು ಹೊಂದಿರಲಿಲ್ಲ. ಇಂದು ಶಿಕ್ಶಣ ಅಕ್ಶರ ಕಲಿಯುವುದಕ್ಕೆ, ಬದುಕು, ಸಮಾಜವನ್ನು ತಿಳಿದುಕೊಳ್ಳುವುದಕ್ಕೆ, ಉದ್ಯೋಗ ಪಡೆಯುವುದಕ್ಕೆ ಹೀಗೆ ಹಲವಾರು ಜವಾಬ್ದಾರಿಗಳನ್ನು ಅದು ಹೊಂದಿದೆ. ಅಲ್ಲದೆ ಆದುನಿಕ ಸಮಾಜ ದೊಡ್ಡ ಪ್ರಮಾಣದಲ್ಲಿ ತಾಂತ್ರಿಕತೆಯನ್ನು ಅವಲಂಬಿಸಿದೆ. ಅಕ್ಶರವು ಇಡಿಯಾಗಿ ಸಮಾಜವನ್ನು ನಿಯಂತ್ರಿಸುತ್ತಿದೆ. ಹೀಗೆ ಹಲವಾರು ಕಾರಣಗಳು ಶಿಕ್ಶಣದ ಇಂದಿನ ಮಹತ್ವವನ್ನು ಹೆಚ್ಚಿಸಿವೆ. ಇವುಗಳನ್ನು ಇಲ್ಲಿ ರ‍್ಚಿಸಬೇಕಾದ ಅವಶ್ಯಕತೆಯೂ ಇಲ್ಲ. ನಾವಿಲ್ಲಿ ಗಮನಿಸಬೇಕಿರುವುದು ಶಿಕ್ಶಣ ಮತ್ತು ಬಾಶೆ ಇವುಗಳ ನಡುವಿನ ನಂಟನ್ನು ಮಾತ್ರ. ಅದಕ್ಕೆ ಪೂರಕವಾಗಿ ಶಿಕ್ಶಣವನ್ನು ಯಾರಿಗೆ ಕೊಡಲಾಗುವುದು ಎಂಬ ಮೂಲಬೂತ ಪ್ರಶ್ನೆಯನ್ನು ಮತ್ತು ಇತರ ಕೆಲವು ಮಹತ್ವದ ವಿಚಾರಗಳನ್ನು ಇಲ್ಲಿ ಸಣ್ಣದಾದ ರ‍್ಚೆಗೆ ತರಲಾಗುವುದು.

ಶಿಕ್ಶಣವನ್ನು ಕೊಡುವುದು ಮಕ್ಕಳಿಗೆ. ಹಾಗಾಗಿ ಒಟ್ಟು ಶಿಕ್ಶಣ ವ್ಯವಸ್ತೆಯ ಕೇಂದ್ರ ಬಿಂದು ಮಗು. ಆದ್ದರಿಂದ ಎಲ್ಲ ಆಯಾಮಗಳಿಂದಲೂ ಮಗುವನ್ನು ಗಮನದಲ್ಲಿ ಇಟ್ಟುಕೊಂಡು ಒಟ್ಟು ವ್ಯವಸ್ತೆಯನ್ನು ರೂಪಿಸಬೇಕಾದ ಅನಿವರ‍್ಯತೆ ಇರುತ್ತದೆ. ಮಗುವಿನ ಮಾನಸಿಕ, ಸಾಮಾಜಿಕ ಮತ್ತು ಬಾಶಿಕ ಆಯಾಮಗಳನ್ನು ಬಹುಮುಕ್ಯವಾಗಿ ಇಲ್ಲಿ ಪರಿಗಣಿಸಬೇಕಾದ ಅವಶ್ಯಕತೆ ಇರುತ್ತದೆ. ಇವುಗಳನ್ನು ಪರಿಗಣಿಸಿಯೆ ಮಗುಕೇಂದ್ರಿತ ಶಿಕ್ಶಣ ವ್ಯವಸ್ತೆಯನ್ನು ರೂಪಿಸಬೇಕಾಗುತ್ತದೆ. ಇದರಲ್ಲಿ ಪಟ್ಯ, ಶಿಕ್ಶಕ, ಬೋದನ ಸಾಮಗ್ರಿ, ಪೂರಕ ಪಟ್ಯ, ಇತರ ಚಟುವಟಿಕೆಗಳು, ಶಾಲಾ ಪರಿಸರ ಈ ಎಲ್ಲವನ್ನೂ ಮಗುಕೇಂದ್ರಿತವಾಗಿ ಮತ್ತು ಮಗುವಿನ ಮಾನಸಿಕ, ಸಾಮಾಜಿಕ ಮತ್ತು ಬಾಶಿಕ ಆಯಾಮಗಳ ಒಟ್ಟುರೂಪಿತ ನೆಲೆಯನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಬೇಕಾಗುತ್ತದೆ.

ಶಿಕ್ಶಣವನ್ನು ಮಗುವಿಗೆ ಯಾಕೆ ಕೊಡುತ್ತೇವೆ ಎಂಬುದರ ಬಗೆಗೆ ಇಲ್ಲಿ ಒಂದೆರಡು ಸಾಮಾನ್ಯ ಅಂಶಗಳನ್ನು ಮಾತನಾಡಬಹುದು. ಮಗುವೊಂದು ಬದುಕುವುದನ್ನು ಕಲಿಯುವುದು, ಬದುಕುವುದಕ್ಕೆ ಅವಶ್ಯವಾಗಿರುವಶ್ಟು ಪರಿಸರವನ್ನು ಕಲಿಯುವುದು ಶಿಕ್ಶಣದ ಪ್ರದಾನ ಆಶಯ. ಈ ಎರಡೂ ನೆಲೆಯಲ್ಲಿ ಮಗು ಕಲಿಯಬೇಕಾದ ಮಹತ್ವದ ವಿಶಯಗಳಲ್ಲಿ ಬಾಶೆಯೂ ಒಂದು. ಹಾಗಾಗಿ ಬಾಶೆಯನ್ನು ಕಲಿಸುವುದು ಅವಶ್ಯ. ಈಗಿನ ಬರವಣಿಗೆ ಬಾಶಾ ಮಾದ್ಯಮವನ್ನು ಗಮನದಲ್ಲಿ ಇರಿಸಿಕೊಂಡಿರುವುದರಿAದ ಬಾಶೆಯನ್ನು ಬಾಶೆಯಾಗಿ ಕಲಿಸುವುದರ ಬಗೆಗೆ ಹೆಚ್ಚು ಮಾತನಾಡುವುದಿಲ್ಲ. ಶಿಕ್ಶಣದ ಗುರಿಸಾದನೆಗೆ ಇರುವ ಅತ್ಯಂತ ಪ್ರದಾನವಾದ ಸಾದನ ಬಾಶೆ. ಯಾಕೆಂದರೆ ಯಾವುದೆ ಶಿಕ್ಶಣವನ್ನು ಒಂದು ಬಾಶೆಯ ಮೂಲಕ ಕೊಡಬೇಕಾದ ಅನಿವರ‍್ಯತೆ ಇರುತ್ತದೆ. ಹಾಗಾದರೆ ಯಾವ ಬಾಶೆಯಲ್ಲಿ ಶಿಕ್ಶಣವನ್ನು ಕೊಟ್ಟರೆ ಶಿಕ್ಶಣದ ಗುರಿಸಾದನೆಗೆ ಹೆಚ್ಚು ಸಹಾಯಕ ಎಂಬುದನ್ನು ಗಮನಿಸಬೇಕಾಗುತ್ತದೆ. ಬಾಶೆ ಎಂದಕೂಡಲೆ ವ್ಯಕ್ತಿಯ ಮಾನಸಿಕ ಮತ್ತು ಸಾಮಾಜಿಕ ನೆಲೆಗಳೊಂದಿಗೆ ರಾಚನಿಕವಾಗಿ ಬೆರೆತುಕೊಂಡಿರುವುದು ಎಂಬುದನ್ನು ಈ ಮೇಲೆ ನೋಡಿದೆವು. ಬಾಶೆಯ, ಅದರ ರಚನೆ ಮತ್ತು ಬಳಕೆ ಬಗೆಗೆ ಈ ಮೇಲೆ ತುಸು ಸುದರ‍್ಗವಾಗಿ ಮಾತನಾಡುವುದಕ್ಕೆ ಇದುವೆ ಕಾರಣ.

ಯಾವುದೆ ಒಂದು ವಿಶಯವನ್ನು, ವಿಚಾರವನ್ನು ಒಬ್ಬ ವ್ಯಕ್ತಿಗೆ ಮುಟ್ಟಿಸಬೇಕಾದರೆ ಸಹಜವಾಗಿಯೆ ಆ ವ್ಯಕ್ತಿಗೆ ತಿಳಿದಿರುವ ಬಾಶೆಯಲ್ಲಿ ಅದನ್ನು ಮುಟ್ಟಿಸಬೇಕು. ಇಲ್ಲದಿದ್ದರೆ ಆ ವಿಶಯವನ್ನು ಮುಟ್ಟಿಸುವ ಉದ್ದೇಶದಲ್ಲಿ ಯಶ ಸಿಗುವುದಿಲ್ಲ. ಅದು ಒಂದು ಸಣ್ಣ ಮಾಹಿತಿ ಆಗಿರಬಹುದು, ಜಾಹಿರಾತು ಆಗಿರಬಹುದು, ಮನರಂಜನೆ ಆಗಿರಬಹುದು. ಹೀಗೆ ಅದು ಬದುಕಿನ ಯಾವುದೆ ಸಣ್ಣ ಸಣ್ಣ ವಿಚಾರಗಳಿಗೂ ಸಂಬAದಪಟ್ಟಿರಬಹುದು. ಅವರ ಬಾಶೆಯಲ್ಲಿ ವಿಶಯವನ್ನು ಕೊಟ್ಟರೆ ಅದು ಆ ವ್ಯಕ್ತಿಗೆ ಮುಟ್ಟುವುದಕ್ಕೆ ಸಾದ್ಯ. ಅವರಿಗೆ ಗೊತ್ತಿಲ್ಲದ ಬಾಶೆಯಲ್ಲಿ ಆ ವಿಶಯವನ್ನು ಕೊಟ್ಟಾಗ ಸಹಜವಾಗಿಯೆ ಅದು ತನ್ನ ಉದ್ದೇಶದಲ್ಲಿ ಸೋಲುತ್ತದೆ. ಹಾಗಾಗಿ ವ್ಯಕ್ತಿಯ ಬಾಶೆಯಲ್ಲಿ ಕೊಡುವುದು ಮುಕ್ಯ.

ಇನ್ನು ಕೆಲ ಸಂರ‍್ಬಗಳಲ್ಲಿ ಒಬ್ಬ ವ್ಯಕ್ತಿಗೆ ಒಂದಕ್ಕಿAತ ಹೆಚ್ಚು ಬಾಶೆಗಳು ತಿಳಿದಿದ್ದರೆ ಬಾಶೆಯ ಆಯ್ಕೆಯ ಪ್ರಶ್ನೆ ಬರಬಹುದು. ಆಗ, ಒಬ್ಬ ವ್ಯಕ್ತಿ ಯಾಕೆ ಒಂದಕ್ಕಿAತ ಹೆಚ್ಚು ಬಾಶೆಗಳನ್ನು ತಿಳಿದಿರುತ್ತಾರೆ ಮತ್ತು ಯಾವ ಯಾವ ಪರಿಸರದಲ್ಲಿ ಅವುಗಳನ್ನು ಬಳಸುತ್ತಾರೆ ಮತ್ತು ತಿಳಿದಿರುವ ಎಲ್ಲ ಬಾಶೆಗಳಲ್ಲಿಯೂ ಸಮಾನ ಸಾರ‍್ತö್ಯವನ್ನು ಹೊಂದಿರುತ್ತಾರೆಯೆ ಎಂಬ ಮೊದಲಾದ ವಿಚಾರಗಳನ್ನು ಗಮನಿಸಬೇಕು. ಈ ಎಲ್ಲ ನೆಲೆಗಳಲ್ಲಿಯೂ ಹಲವಾರು ವಿಬಿನ್ನ ಹಿನ್ನೆಲೆಗಳು ಇರುತ್ತವೆ. ಅದರಲ್ಲೂ ಬಾರತದಂತಾ ಬಹುಬಾಶಿಕ ಪರಿಸರದಲ್ಲಿ ಈ ಹಿನ್ನೆಲೆಗಳು ಇನ್ನೂ ಹೆಚ್ಚಿನ ಆಯಾಮಗಳನ್ನು ಹೊಂದಿರುತ್ತವೆ. ಇಂತಾ ಸಂರ‍್ಬದಲ್ಲಿ ಒಬ್ಬ ವ್ಯಕ್ತಿಗೆ ಒಂದು ವಿಶಯವನ್ನು ಮುಟ್ಟಿಸುವ ಸಂರ‍್ಬದಲ್ಲಿ ಆ ವ್ಯಕ್ತಿಗೆ ತಿಳಿದ ಯಾವ ಬಾಶೆಯಲ್ಲಿ ಮುಟ್ಟಿಸಿದರೆ ಉದ್ದೇಶ ಹೆಚ್ಚು ಯಶಸ್ಸನ್ನು ಕಾಣುತ್ತದೆ ಎಂಬುದನ್ನು ಯೋಚಿಸಬೇಕು. ಈ ಮೇಲೆ ಬಾಶೆ ಮತ್ತು ವ್ಯಕ್ತಿ, ವ್ಯಕ್ತಿಯ ವ್ಯಕ್ತಿತ್ವಗಳ ನಡುವಿನ ನಂಟನ್ನು ಮಾತನಾಡಿದ್ದೇವೆ. ಹಾಗಾದರೆ ವ್ಯಕ್ತಿಯ ಈ ವ್ಯಕ್ತಿತ್ವವನ್ನು ರೂಪಿಸಿರುವ ಬಾಶೆಯಲ್ಲಿ ಆ ವಿಶಯವನ್ನು ಒದಗಿಸಿದರೆ ಉದ್ದೇಶವು ಸಹಜವಾಗಿಯೆ ಹೆಚ್ಚು ಯಶಸ್ಸು ಪಡೆಯುತ್ತದೆ. ವ್ಯಕ್ತಿಯ ತಾಯ್ಮಾತು ಹೀಗೆ ಆ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ. ಪ್ರತಿ ವ್ಯಕ್ತಿ ತನ್ನ ತಾಯ್ಮಾತಿನಲ್ಲಿ ಹೆಚ್ಚು ಗ್ರಹಿಸಲು ಸಾದ್ಯ, ಅದರಂತೆ ಹೆಚ್ಚು ಮಾತನಾಡಲೂ ಕೂಡ. ಒಬ್ಬರೊಂದಿಗೆ ನನ್ನ ಬಾಶೆಯಲ್ಲಿ ಮಾತನಾಡಿದರೆ ಅವರ ಮಿದುಳಿನ ಜೊತೆಗೆ ಮಾತನಾಡಬಹುದು, ಆದರೆ ಅವರ ಬಾಶೆಯಲ್ಲಿ ಮಾತನಾಡಿದರೆ ಅವರ ಕರುಳಿನೊಂದಿಗೆ ಮಾತನಾಡಬಹುದು ಎಂಬ ಒಂದು ಸಾಲನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಶಿಕ್ಶಣವನ್ನು ಮಗುಕೇಂದ್ರಿತವಾಗಿ ರ‍್ಚಿಸುವಾಗ ಬಾಶೆ ಮಾತ್ರವಲ್ಲದೆ ಇನ್ನೂ ಹಲವಾರು ಅಂಶಗಳನ್ನು ರ‍್ಚಿಸಬೇಕಾಗುತ್ತದೆ. ಅದು ಈಗಿನ ಬರವಣಿಗೆಯ ವ್ಯಾಪ್ತಿಯೊಳಗೆ ಬರುವುದಿಲ್ಲ. ಬಾಶೆಯದಲ್ಲದ ಮಾಹಿತಿಯನ್ನು ಅವಶ್ಯವೆನಿಸಿದಲ್ಲೆಲ್ಲ ಅವಶ್ಯವಾದಶ್ಟು ಮಾತಿಗೆ ಬಳಸಿಕೊಳ್ಳಬಹುದು. ಇಲ್ಲಿ ಶಿಕ್ಶಣದ ಮೂಲಕ ಮಗುವೊಂದಕ್ಕೆ ಕೊಡಬಹುದಾದ ಇಲ್ಲವೆ ಕಲಿಸಬಹುದಾದವುಗಳನ್ನು ಅತ್ಯಂತ ಸಾಮಾನ್ಯವಾಗಿ ಒಂದೆರಡು ಸಾಲಿನಲ್ಲಿ ನೋಡಬಹುದು. ಈ ಕಲಿಸುವ ಪ್ರಕ್ರಿಯೆ ಎಶ್ಟು ಮಹತ್ವದ್ದು, ಅದು ಎಶ್ಟು ಸೂಕ್ಶö್ಮತೆಯನ್ನು ಪಡೆದುಕೊಂಡಿರುತ್ತದೆ, ಎಶ್ಟು ವಿಸ್ತಾರವಾಗಿರುತ್ತದೆ ಎಂಬ ವಿಚಾರಗಳನ್ನು ನಾವು ಮೊದಲು ತಿಳಿದುಕೊಂಡಿರಬೇಕಾಗುತ್ತದೆ.

ಶಿಕ್ಶಣ ಕೊಡುವುದು ಮಗು ಬದುಕನ್ನು ಕಲಿಯುವುದಕ್ಕೆ ಎಂಬ ವಿಸ್ತಾರನೆಲೆಯ ತಾತ್ವಿಕತೆಯನ್ನು ಈ ಮೇಲೆ ಉಲ್ಲೇಕಿಸಲಾಯಿತು. ಮೂಲಬೂತವಾಗಿ ಮಗು ಸ್ರುಜನಾತ್ಮಕ ಮತ್ತು ತರ‍್ಕಿಕ ಗುಣವನ್ನು ಬೆಳೆಸಿಕೊಳ್ಳಬೇಕು. ಈ ಎರಡೂ ಬದುಕಿನ ಬಿನ್ನ ಆಯಾಮಗಳಲ್ಲಿ ಮಗುವೊಂದು ಮುನ್ನಡೆಯಲು ಸಹಾಯಕವಾಗುತ್ತವೆ. ಸಾಹಿತ್ಯ, ಕಲೆ, ಸಂಗೀತ ಮೊದಲಾದವನ್ನು ಕಲಿಸುವ ಮೂಲಕ ಮಕ್ಕಳಲ್ಲಿ ಸ್ರುಜನಾತ್ಮಕ ಗುಣವನ್ನು ಬೆಳೆಸುವುದು, ಗಣಿತ, ವಿಗ್ನಾನ, ರ‍್ತಿಕತೆ ಇವುಗಳನ್ನು ಕಲಿಸುವ ಮೂಲಕ ತರ‍್ಕಿಕತೆಯನ್ನು ಕಲಿಸಲಾಗುವುದು. ಆದರೆ ಶಿಕ್ಶಣ ಹೀಗೆ ಎರಡು ಗುಂಪುಗಳಾಗಿ ಒಡೆದುಕೊಂಡಿರುವುದಿಲ್ಲ. ಬದಲಿಗೆ ಅವೆರಡೂ ಪರಸ್ಪರ ಒಂದು ಇನ್ನೊಂದರೊAದಿಗೆ ಕೋದುಕೊಂಡಿರುತ್ತವೆ. ಬದುಕಿನಲ್ಲಿಯೂ ಹೀಗೆಯೆ ಪ್ರತಿಯೊಂದು ಕೋದುಕೊಂಡಿರುತ್ತವೆಯಲ್ಲವೆ, ಹಾಗೆ.

ಮಗುವಿಗೆ ಸ್ರುಜನ ಗುಣವನ್ನು ಕಲಿಸುವುದರಿಂದ ಮಕ್ಕಳಲ್ಲಿ ಹೆಚ್ಚು ಸ್ರುಜನಾತ್ಮಕತೆ ಬೆಳೆಯಲು ಕಾರಣವಾಗುತ್ತದೆ. ಮಾನಸಿಕ ಸಾರ‍್ತö್ಯವನ್ನು ಹಿಗ್ಗಿಸಿಕೊಳ್ಳುತ್ತವೆ, ಸಂಬAದ, ಸಮಾಜ ಮೊದಲಾದವುಗಳ ಮವುಲ್ಯವನ್ನು ಅನುಬವಿಸುತ್ತವೆ. ಅದರಂತೆಯೆ ತರ‍್ಕಿಕತೆಯಿಂದ ಮಕ್ಕಳು ಹೆಚ್ಚು ಆಲೋಚನೆ ಮಾಡುವಂತವರೂ, ವಿರ‍್ಶೆ ಮಾಡುವಂತವರೂ, ಚಾಕಚಕ್ಯತೆಯನ್ನು ಬೆಳೆಸಿಕೊಳ್ಳುವಂತವರೂ ಆಗಿ ಬೆಳೆಯಬಹುದು. ಒಂದು ಬದುಕಿಗೆ ಇವೆರಡೂ ಅವಶ್ಯ. ವಾಸ್ತವದಲ್ಲಿ ಇವೆರಡನ್ನೂ ಮಗು ತನ್ನ ಎಳವೆಯಲ್ಲಿ ಮನೆ ವಾತಾವರಣದಲ್ಲಿ ಕಂಡಿತವಾಗಿಯೂ ಕಲಿಯುತ್ತದೆ. ಅದನ್ನು ಮುಂದುವರೆಸುವ, ಗಟ್ಟಿಗೊಳಿಸುವ ಮತ್ತು ಅದನ್ನು ಸೂಕ್ತ ರೀತಿಯಲ್ಲಿ ಬೆಳೆಸಿಕೊಳ್ಳುವಂತೆ ಮಕ್ಕಳನ್ನು ತಯಾರಿಸುವ ಜವಾಬ್ದಾರಿ ಶಿಕ್ಶಣದ್ದು ಎಂದು ಹೇಳಬಹುದು. ಹಾಗಾದರೆ ಈ ಎಲ್ಲವೂ ಮಗುವೊಂದು ಶಾಲೆಗೆ ಬರುವ ಮೊದಲು ಮನೆಯಲ್ಲಿ ಕಲಿಯುತ್ತಿದ್ದುದರ ಮುಂದುವರಿಕೆಯೆ ಆಗಿರುತ್ತದೆ.

ಈ ಅಂಕಣದ ಹಿಂದಿನ ಬರಹಗಳು:
ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು
ತಾಯ್ಮಾತಿನ ಶಿಕ್ಶಣ: ಕೆಲವು ಸವಾಲುಗಳು-ಮುಂದುವರೆದುದು

ತಾಯ್ಮಾತಿನ ಶಿಕ್ಶಣ: ಕೆಲವು ಸವಾಲುಗಳು
ತಾಯ್ಮಾತಿನ ಶಿಕ್ಶಣ-ಕೆಲವು ಮಾದರಿಗಳು
ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಬದುಕಿನಲ್ಲಿ ಸೋಲು
ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಶಿಕ್ಶಣದಲ್ಲಿ ಸೋಲು
ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ವಿಶಯದಲ್ಲಿ ಸೋಲು
ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ (ಮುಂದುವರೆದುದು)
ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ
ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ
ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ
ತಾಯ್ಮಾತಿನ ಶಿಕ್ಶಣ ಯಾಕೆ?
ತಾಯ್ಮಾತಿನ ಶಿಕ್ಶಣ: ಎಲ್ಲಿತನಕ
ಮಗುವಿನ ಮನೋವಿಕಾಸ, ಸಾಮಾಜಿಕತೆ ಮತ್ತು ಕಲಿಕೆ
ಮಗು ಮತ್ತು ಬಾಶಾಗಳಿಕೆ
ತಾಯ್ಮಾತು-ತಾಯಿ ಮಾತು-ಗುರ‍್ತಿಕೆ
ಮನುಶ್ಯ ದೇಹರಚನೆ ಮತ್ತು ಬಾಶಾ ಗಳಿಕೆ
ಬಾಶೆ ಮತ್ತು ಮಾತು
ಲಂಬಾಣಿ ಮತ್ತು ಇತರ ಉತ್ತರ ಬಾರತದ ಬಾಶೆಗಳ ಸಹಸಂಬಂದ
ಮಲಯಾಳಂ, ಕೊಡವ ಮತ್ತು ಇತರ ದ್ರಾವಿಡ ಬಾಶೆಗಳೊಂದಿಗನ ಸಹಸಂಬಂದ
ಮರಾಟಿ, ಉರ‍್ದು ಮತ್ತು ಇತರ ದಕ್ಶಿಣದ ಬಾಶೆಗಳೊಡನೆಯ ಸಹಸಂಬಂದ
ಕನ್ನಡ ಮತ್ತು ತಮಿಳು ಸಹಸಂಬಂದ
ತುಳುವಿನೊಡನೆ ಸಹಸಂಬಂದ
ಕನ್ನಡ ಮತ್ತು ತೆಲುಗು ಸಹಸಂಬಂದ
ಬಾರತೀಯ ಇಂಗ್ಲೀಶು
ಇಂಗ್ಲೀಶು ಕನ್ನಡ ಬದುಕಿನೊಳಗೆ
ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?
ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

MORE NEWS

ಕಿರುತೆರೆಯ ಶೀಘ್ರಸ್ಖಲನದ ಕಾಮೆಡಿ ಸ್ಕಿಟ್ ಗಳು

28-03-2025 ಬೆಂಗಳೂರು

"ಮನರಂಜನೆ ನೀಡುವ ಇಲ್ಲವೇ ಆಮದಾನಿ ನಿರೀಕ್ಷೆಯ ಭರದಲ್ಲಿ ಸ್ಕಿಟ್ ಗಳಿಗೆ ಆಯ್ಕೆ ಮಾಡಿಕೊಳ್ಳುವ ಅವರ ಬಹುಪಾಲು ನಾಟಕ ...

ಸಂಬಂಧ ಕಥೆಯಲ್ಲಿ ಕಾಣುವ ಜಾತಿ ಮತ್ತು ಲಿಂಗರಾಜಕಾರಣ

26-03-2025 ಬೆಂಗಳೂರು

"“ತಪ್ತ, ಫಿನಿಕ್ಸ್, ಗಿಜ್ಜಗನಗೂಡು”, ಇವು ಇವರ ಕಥಾಸಂಕಲನಗಳು. “ಪರಸಂಗದ ಗೆಂಡೆತಿಮ್ಮ, ಭುಜಂ...

ಕನ್ನಡ ವಿಮರ್ಶೆ -5 

24-03-2025 ಬೆಂಗಳೂರು

"ನಮ್ಮಲ್ಲಿ ಡಿ. ಆರ್. ನಾಗರಾಜರ ಬರವಣಿಗೆಗಳನ್ನು ದಾರ್ಶನಿಕ - ತತ್ವಜ್ಞಾನಿಕ ಮಾರ್ಗದಲ್ಲಿಯೂ, ಸಬಾಲ್ಟರ್ನ್ ಮಾರ್ಗದ...