'ಮೂಕತೋಳ' ಎಲ್ಲೂ ಹೆಚ್ಚು ಮಾತನಾಡದಿರುವುದು ಕಾದಂಬರಿಯ ಅತಿದೊಡ್ಡ ಶಕ್ತಿ!


"ಲೇಖಕರೇ ಹೇಳಿದಂತೆ ಇದು ಕ್ರೂರ, ಸ್ವಾರ್ಥಿ, ವಿವೇಚನಾರಹಿತ ಗಂಡಸರ ಕೈಯ್ಯಲ್ಲಿ ಸಿಕ್ಕಿಕೊಂಡ ಅನೇಕ ಹೆಣ್ಣುಮಕ್ಕಳ ಕಥೆಯೂ ಹೌದು. ಓದಿ ಪುಸ್ತಕ ಕೆಳಗಿಟ್ಟ ಮೇಲೆ ವಿಷಾದದ ಪಲುಕೊಂದು ಮತ್ತೆ ಮತ್ತೆ ಹಾದು ಮನಸ್ಸನ್ನು ಭಾರವಾಗಿಸುತ್ತದೆ. 'ಮೂಕತೋಳ' ಎಲ್ಲೂ ಹೆಚ್ಚು ಮಾತನಾಡದಿರುವುದು ಕಾದಂಬರಿಯ ಅತಿದೊಡ್ಡ ಶಕ್ತಿ!," ಎನ್ನುತ್ತಾರೆ ಉಮಶಂಕರ ಕೆಳತ್ತಾಯ. ಅವರು ಕೆ. ಪ್ರಭಾಕರನ್ ಅವರ ‘ಮೂಕ ತೋಳ’ ಕಾದಂಬರಿ ಕುರಿತು ಬರೆದ ಅನಿಸಿಕೆ.

ಗುಲಾಮಗಿರಿ ಒಂದು ಅಫೀಮು ಇದ್ದಂತೆ. ಒಮ್ಮೆ ಅಭ್ಯಾಸವಾದರೆ ಮನಸ್ಸು ಅದನ್ನು ಒಪ್ಪಿ ಅಪ್ಪಿಕೊಳ್ಳುತ್ತದೆ. ಆಮೇಲೆ ಅದರಿಂದ ಹೊರಬರಲು ಭಯಂಕರ ಹೋರಾಟ ನಡೆಸಬೇಕು. ಅದು ಸಾಧ್ಯವಾಗದಿದ್ದಾಗ ಅಸಹಾಯಕತೆ ಆವರಿಸಿ ತಾನೇ ಬಲಿಯಾಗಿಬಿಡುವ ಸಂಭವ ಹೆಚ್ಚು. ಇದನ್ನು ಮಾರ್ಮಿಕವಾಗಿ ಹೇಳಿದ ಕತೆ ಮಲೆಯಾಳಂ ಸಾಹಿತಿ ಜಯಮೋಹನ್ ಅವರ ಕಿರು ಕಾದಂಬರಿ 'ಮೂಕತೋಳ'. ಲೇಖಕರೇ ಹೇಳಿದಂತೆ ಇದು ಕ್ರೂರ, ಸ್ವಾರ್ಥಿ, ವಿವೇಚನಾರಹಿತ ಗಂಡಸರ ಕೈಯ್ಯಲ್ಲಿ ಸಿಕ್ಕಿಕೊಂಡ ಅನೇಕ ಹೆಣ್ಣುಮಕ್ಕಳ ಕಥೆಯೂ ಹೌದು. ಓದಿ ಪುಸ್ತಕ ಕೆಳಗಿಟ್ಟ ಮೇಲೆ ವಿಷಾದದ ಪಲುಕೊಂದು ಮತ್ತೆ ಮತ್ತೆ ಹಾದು ಮನಸ್ಸನ್ನು ಭಾರವಾಗಿಸುತ್ತದೆ. 'ಮೂಕತೋಳ' ಎಲ್ಲೂ ಹೆಚ್ಚು ಮಾತನಾಡದಿರುವುದು ಕಾದಂಬರಿಯ ಅತಿದೊಡ್ಡ ಶಕ್ತಿ!

ಓದಿ ನೋಡಿ!

ಜಯಮೋಹನ್ ಅವರ ಬಗ್ಗೆ ತಿಳಿದದ್ದು ಕಳೆದ ವಾರವಷ್ಟೇ (ಪ್ರಶಾಂತ್ ಭಟ್ಟರ ಪೋಸ್ಟ್ ನಿಂದ). ಸಿಕ್ಕಿದ ಪುಸ್ತಕಗಳನ್ನೆಲ್ಲಾ ತರಿಸಿಕೊಂಡೆ. 'ಆನೆ ಡಾಕ್ಟರ್' ಎಂಬ ಒಂದು ಕಥೆ ಸಾಕಾಗಿತ್ತು ನನಗೆ, ಅವರ ಅಭಿಮಾನಿಯಾಗಲು!. 'ಊಟದ ಲೆಕ್ಕ' ಕಥೆ ಓದಿ ಕಣ್ಣೀರಿಳಿಸದವರು ಬಹುಶಃ ಯಾರೂ ಇರಲಿಕ್ಕಿಲ್ಲ. ಆಮೇಲೆ ಓದಿದ್ದು ಈ ಕಿರು ಕಾದಂಬರಿ 'ಮೂಕತೋಳ'. ಅದರ ಬಗ್ಗೆ ಮೇಲೆಯೇ ಹೇಳಿದ್ದೇನೆ. 2020ರಲ್ಲಿ ಮಹಾಭಾರತವನ್ನು ಆಧರಿಸಿ 22,400 ಪುಟಗಳ 'ವೆನ್ಮುರಸು' ಎಂಬ ಮಹಾಕಾದಂಬರಿ ತಮಿಳಿನಲ್ಲಿ ಬರೆದು ಮುಗಿಸಿದ್ದಾರಂತೆ. ಅದು ಕನ್ನಡಕ್ಕೆ ಅನುವಾದವಾಗಲು ಉತ್ಕಂಠತೆಯಿಂದ ಕಾಯುತ್ತಿದ್ದೇನೆ!

MORE FEATURES

ಓದುಗರಿಗೆ ಹೇಳಿಮಾಡಿಸಿದ ಕಥಾ ಸಂಕಲನ ಮಿಕ್ಸ್ ಅಂಡ್ ಮ್ಯಾಚ್

25-03-2025 ಬೆಂಗಳೂರು

"ಇಲ್ಲಿನ ಕತೆಗಳಲ್ಲಿ ಸಂಕೀರ್ಣ ನಿರೂಪಣೆ ಇಲ್ಲ. ಅವು ಸುದೀರ್ಘವೂ ಅಲ್ಲ. ಹಾಗಂದ ಮಾತ್ರಕ್ಕೆ ಅವು ಕಾವ್ಯಾತ್ಮಕ ಗುಣದ...

ಮಾಧ್ವ ಕುಟುಂಬದ ಬದುಕನ್ನು ಭುಜಂಗಾಚಾರ್ಯ ಪಾತ್ರದ ಮೂಲಕ ಸುಂದರವಾಗಿ ಚಿತ್ರಿಸಲಾಗಿದೆ

25-03-2025 ಬೆಂಗಳೂರು

"ಬಾಲ್ಯದಲ್ಲಿ ಶ್ರೀಮಂತಿಕೆಯಲ್ಲಿ ಬೆಳೆದ ಭುಜಂಗಾಚಾರ್ಯರು ತಂದೆಯ ಅಕಾಲಿಕ ಮರಣದಿಂದ ವಿಧಿ ತಂದೆಯನ್ನಲ್ಲದೇ ಶ್ರೀಮಂತ...

ಒಳ್ಳೆಯ ಮಾರ್ಗದಿಂದಲೇ ತನ್ನ ಬದುಕನ್ನು ಕಟ್ಟಿಕೊಂಡ ಹೆಣ್ಣು ಮಗಳ ಜೀವನಗಾಥೆ

25-03-2025 ಬೆಂಗಳೂರು

“ಇಲ್ಲಿ ಲೇಖಕಿಯು ವೇಶ್ಯೆಯ ಮಗಳು ಸಮಾಜದಲ್ಲಿ ಎದುರಿಸುವ ಸವಾಲು ಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಹಾಗೂ ಆ...