ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

Date: 20-03-2025

Location: ಬೆಂಗಳೂರು


ದಾವಣಗೆರೆ : ಕಸ್ತೂರಿ ಸಿರಿಗನ್ನಡ ವೇದಿಕೆ(ರಿ), ಬೆಳಗಾವಿ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಅಂತಾರಾಷ್ಟ್ರೀಯ ಮಟ್ಟದ ಅಂತರ್ಜಾಲ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.

ಕವಿಗೋಷ್ಠಿಯ ಜೊತೆಗೆ ಸಾಹಿತ್ಯ, ಶಿಕ್ಷಣ, ವೈದ್ಯಕೀಯ, ಚಿತ್ರಕಲೆ, ನೃತ್ಯ, ವಿಜ್ಞಾನ, ಸಮಾಜ ಸೇವೆ, ಸಂಗೀತ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಪ್ರತಿಭಾನ್ವಿತ ಬಾಲ, ಯುವ, ಹಿರಿಯ ಪ್ರತಿಭೆಗಳಿಗೆ ಗೌರವಪೂರ್ವಕವಾಗಿ ವಿವಿಧ ಪ್ರಶಸ್ತಿ / ಪುರಸ್ಕಾರಗಳನ್ನು ನೀಡಿ ಗೌರವಿಸಲಾಗುವುದು.

ಆಸಕ್ತ ಪ್ರತಿಭಾನ್ವಿತ ಸಾಧಕರು ಸ್ವ-ವಿವರವುಳ್ಳ ಪಿಡಿಎಫ್ ಅನ್ನು ವೇದಿಕೆಯ ಅಧ್ಯಕ್ಷರ ವಾಟ್ಸಪ್ 9743867298 ನಂಬರಿಗೆ ದಿನಾಂಕ 15 ಏಪ್ರಿಲ್ 2025 ರ ಒಳಗೆ ಕಳುಹಿಸಿ ಅರ್ಜಿಯನ್ನು ಸಲ್ಲಿಸಬಹುದು ಎಂದು ವೇದಿಕೆಯ ಗೌರವ ಸಲಹೆಗಾರ ಸಾಲಿಗ್ರಾಮ ಗಣೇಶ್ ಶೆಣೈ ಅವರು ತಿಳಿಸಿದ್ದಾರೆ.

MORE NEWS

'ತಲ್ಕಿ' ಎನ್ನುವ ಕರುಳು ಹಿಂಡುವ ಕಥೆ

24-03-2025 ಬೆಂಗಳೂರು

ಮಾರ್ಚ್ 22-23ರಂದು ನಡೆದ ಕರ್ನಾಟಕ ಲೇಖಕಿಯರ ಸಂಘದ 8ನೆಯ ಅಖಿಲ ಕರ್ನಾಟಕ ಸಮ್ಮೇಳನದ ಮೊದಲ ದಿನದ ಕೊನೆಯಲ್ಲಿ ರಂಗದ ಮೇಲೆ ...

'ಶಿವರಾಮ ಕಾರಂತ ಪುರಸ್ಕಾರ'ಕ್ಕೆ 2020-2024ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳ ಆಹ್ವಾನ

24-03-2025 ಮೂಡುಬಿದಿರೆ

ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನವು ಕೊಡಮಾಡುವ 28ನೇ ವರ್ಷದ 'ಶಿವರಾಮ ಕಾರಂತ ಪುರಸ್ಕಾರ'ಕ್ಕೆ ಕೃತಿಗಳ...

ಸಮಾಜದ ಪ್ರಕಾರ ಹೆಣ್ಣು ಮುಟ್ಟಬಾರದ ಮೂರು ವಿಚಾರಗಳು ಲೈಂಗಿಕ ಅಭಿವ್ಯಕ್ತಿ, ರಾಜಕಾರಣ, ಧರ್ಮ; ಬಾನು ಮುಷ್ತಾಕ್

23-03-2025 ಬೆಂಗಳೂರು

ಬೆಂಗಳೂರು: "ಸಮಾಜದಲ್ಲಿ ಮಹಿಳೆಯಾಗಿ ಮತ್ತು ಲೇಖಕಿಯಾಗಿ ಒಬ್ಬ ವ್ಯಕ್ತಿ ಮುಟ್ಟಬಾರದ ಮೂರು ವಸ್ತುಗಳಿವೆ. ಅವುಗಳೆಂದ...