ಕನ್ನಡ ಸಂಘದ ಉದ್ಘಾಟನೆ, ಬಹುಮಾನ ವಿತರಣೆ ಮತ್ತು ಪ್ರೊ.ಎಲ್.ಎಸ್. ಶೇಷಗಿರಿರಾವ್ ಶತಮಾನೋತ್ಸವ ಉಪನ್ಯಾಸ

Date: 25-07-2024

Location: ಬೆಂಗಳೂರು


ಬೆಂಗಳೂರು: ಜ್ಯೋತಿ ನಿವಾಸ್ ಕಾಲೇಜು ಸ್ವಾಯತ್ತದಿಂದ ಕನ್ನಡ ಗೆಳೆಯರ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಕನ್ನಡ ಸಂಘದ ಉದ್ಘಾಟನೆ, ಬಹುಮಾನ ವಿತರಣೆ ಮತ್ತು ಪ್ರೊ.ಎಲ್.ಎಸ್. ಶೇಷಗಿರಿರಾವ್ ಶತಮಾನೋತ್ಸವ ಉಪನ್ಯಾಸ’ ಕಾರ್ಯಕ್ರಮವು 2024 ಜುಲೈ 25 ಗುರುವಾರದಂದು ಕೋರಮಂಗಲದ ಜ್ಯೋತಿನಿವಾಸ್ ಕಾಲೇಜಿನ ಜ್ಯೋತಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ನಿವಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸೋ. ಮೇರಿ ಲೂಯಿಸಾ ಸೆಬಾಸ್ಟಿಯನ್ ಅವರು ವಹಿಸಿಕೊಂಡಿದ್ದರು. ಕನ್ನಡ ಸಂಘದ ಉದ್ಘಾಟನೆಯನ್ನು ಕನ್ನಡ ಹೋರಾಟಗಾರ ರಾ.ನಂ. ಚಂದ್ರಶೇಖರ್ ಅವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯಕ್ಕೆ ಪ್ರೊ.ಎಲ್.ಎಸ್.ರ ಕೊಡುಗೆ ಡಾ.ಎಸ್.ಎಲ್. ಶ್ರೀನಿವಾಸಮೂರ್ತಿ ವಿಚಾರದ ಕುರಿತು ವಿಜಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಸ್.ಎಲ್. ಶ್ರೀನಿವಾಸಮೂರ್ತಿ ಮಾತನಾಡಿದರು.

ಜ್ಯೋತಿ ನಿವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಗೂಳಪ್ಪ ವಕ್ಕುಂದ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಭಾರತಿ ಶೇಷಗಿರಿರಾವ್, ಡಾ. ಲೀಲಾವತಿ ಎಚ್.ಎಸ್, ಡಾ. ಮಂಜುನಾಥ ಜಿ. ಗೌರವ ಉಪಸ್ಥಿತಿಯನ್ನು ವಹಿಸಿಕೊಂಡಿದ್ದರು.

 

MORE NEWS

`ಮ್ಯೂಸಿಕಲ್ ವಿಡಿಯೊ ಸಾಂಗ್ ಒಂದು ವಿಶಿಷ್ಟ ಪುಸ್ತಕ' ಲೋಕಾರ್ಪಣಾ ಸಮಾರಂಭ

06-09-2024 ಬೆಂಗಳೂರು

ಬೆಂಗಳೂರು: ಶ್ರೀ ಸಾಯಿಗನ ಪ್ರೊಡಕ್ಷನ್ಸ್ ಹಾಗೂ ವಾಯ್ಸಿಂಗ್ ಸೈಲೆನ್ಸ್, ಕಾವ್ಯಸ್ಪಂದನ ಪಬ್ಲಿಕೇಷನ್ಸ್ ವತಿಯಿಂದ ಮ್ಯೂಸಿಕ...

ಶ್ರೀಧರ ತುಮರಿ ಅವರ ‘ಪಕ್ಷಿಗಳ ವಿಸ್ಮಯ ವಿಶ್ವ’ ಕೃತಿಯ ವಿನ್ಯಾಸ ಮತ್ತು ಮುದ್ರಣಕ್ಕಾಗಿ ರಾಷ್ಟ್ರ ಪ್ರಶಸ್ತಿ

06-09-2024 ಬೆಂಗಳೂರು

ಬೆಂಗಳೂರು: The Federation of Indian Publishers ಭಾರತೀಯ ಪ್ರಕಾಶಕರ ಒಕ್ಕೂಟ, ನವ ದೆಹಲಿ ಇವರ ವತಿಯಿಂದ 2023-24ನ...

ಕರ್ನಾಟಕ ನಾಟಕ ಅಕಾಡೆಮಿಯಿಂದ ‘ರಾಜ್ಯಮಟ್ಟದ ನಾಟಕ ರಚನಾ ಶಿಬಿರ’ಕ್ಕೆ ಅರ್ಜಿ ಆಹ್ವಾನ

04-09-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು “ರಾಜ್ಯಮಟ್ಟದ ನಾಟಕ ರಚನಾ ಶಿಬಿರ"ವನ್ನು 2024 ಅ.03 ರಿಂದ ಅ. 07ರವ...