`ಮ್ಯೂಸಿಕಲ್ ವಿಡಿಯೊ ಸಾಂಗ್ ಒಂದು ವಿಶಿಷ್ಟ ಪುಸ್ತಕ' ಲೋಕಾರ್ಪಣಾ ಸಮಾರಂಭ

Date: 06-09-2024

Location: ಬೆಂಗಳೂರು


ಬೆಂಗಳೂರು: ಶ್ರೀ ಸಾಯಿಗನ ಪ್ರೊಡಕ್ಷನ್ಸ್ ಹಾಗೂ ವಾಯ್ಸಿಂಗ್ ಸೈಲೆನ್ಸ್, ಕಾವ್ಯಸ್ಪಂದನ ಪಬ್ಲಿಕೇಷನ್ಸ್ ವತಿಯಿಂದ ಮ್ಯೂಸಿಕಲ್ ವಿಡಿಯೊ ಸಾಂಗ್ ಒಂದು ವಿಶಿಷ್ಟ ಪುಸ್ತಕ ಲೋಕಾರ್ಪಣಾ ಸಮಾರಂಭವು 2024 ಸೆ. 06 ಶುಕ್ರವಾರದಂದು ನಗರದ ಜಿ.ಟಿ ಮಾಲ್ ನಲ್ಲಿ ನಡೆಯಿತು.

ಕೃತಿಯ ಕುರಿತು ಮಾತನಾಡಿದ ನಟ ಸುಚೇಂದ್ರ ಪ್ರಸಾದ್, "ಹಲವಾರು ಕಾರ್ಯಕ್ರಮಗಳನ್ನು ನಾವು ಆಯೋಜನೆ ಮಾಡುತ್ತೇವೆ. ಆದರೆ ಅಂತಿಮವಾಗಿ ಒಂದು ಕಾರ್ಯಕ್ರಮವನ್ನು ಯಾಕೆ ಆಯೋಜಿಸಬೇಕು, ಅದರ ರೂಪು ರೇಷೆ ಏನಾಗಿರುತ್ತದೆ ಎಂಬುವುದನ್ನು ತಿಳಿಯಬೇಕಾದರೆ ಈ ಕೃತಿಯನ್ನು ಖಂಡಿತ ಓದಬೇಕು. ಕೃತಿಯು ಒಂದು ಚಿತ್ರ ರೂಪುಗೊಳ್ಳುವ ಬಗೆಯಿಂದ ಹಿಡಿದು, ಆ ಚಿತ್ರ ರೂಪುಗೊಂಡ ನಂತರ ಅದರ ಒಳಗಿರುವ ಅಡಕ ಸೇರಿದಂತೆ ಹಲವನ್ನು ಮುಂದಿನ ಪೀಳಿಗೆಗೆ ವಿವರಿಸುತ್ತದೆ. ಒಂದು ಆಕಾರ ಗ್ರಂಥ ಇತರರಿಗೆ ಮಾದರಿ ಸ್ಥಾಪನೆ ಮಾಡಬೇಕು. ಇಂತಹ ಮಾದರಿ ಸ್ಥಾಪನೆ ಈ ಕೃತಿಯಿಂದಾಗುತ್ತದೆ ಎಂಬಂತಹ ಆಲೋಚನೆ ನಮ್ಮದು. ಇಲ್ಲಿ ಇಡೀ ಚಿತ್ರಣದ ರೂಪು ರೇಷೆಗಳನ್ನು ದಾಖಲಿಸಲಾಗಿದೆ. ಪ್ರತಿಕ್ರಿಯೆಗೆ, ಪ್ರತಿಕ್ರಿಯೆ ಹೇಗಿದೆ ಎಂಬುವುದನ್ನು ನಾವು ಈ ಕೃತಿಯ ಮುಖೇನ ಕಾಣಬಹುದು. ಈ ಕೃತಿಯ ಬೆನ್ನುಡಿಯಲ್ಲಿ ಪ್ರಮುಖ ವ್ಯಕ್ತಿಗಳ ಅಭಿಪ್ರಾಯವನ್ನು ಕೂಡ ಕಾಣಬಹುದು," ಎಂದು ತಿಳಿಸಿದರು.

ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಕವಿ ಡಾ. ದೊಡ್ಡರಂಗೇಗೌಡ, ಕಲಾವಿದೆ ತಾರಾ ಅನುರಾಧಾ, ಚಿತ್ರ ನಿರ್ದೇಶಕ ಡಾ.ಎಸ್. ನಾರಾಯಣ್, ಬೆಂಗಳೂರಿನ ಅಬಲಾಶ್ರಮದ ಡಾ. ವಿಜಯಲಕ್ಷ್ಮಿ ದೇಶಮಾನೆ, ಬರಹಗಾರ ನಿಡಸಾಲೆ ಪುಟ್ಟಸ್ವಾಮಯ್ಯ, ಲಹರಿ ಸಂಸ್ಥೆಯ ಶ್ರೀವೇಲು ಉಪಸ್ಥಿತರಿದ್ದರು.

MORE NEWS

ಸಮಗ್ರ ಕರ್ನಾಟಕದ ಕಲೆಯೊಂದಿದ್ದರೆ ಅದು ಯಕ್ಷಗಾನ ಮಾತ್ರ: ನರಹಳ್ಳಿ

16-09-2024 ಬೆಂಗಳೂರು

ಬೆಂಗಳೂರು: ಯಕ್ಷವಾಹಿನಿ ಪ್ರತಿಷ್ಠಾನ ಮತ್ತು ಹೆಗ್ಗೋಡಿನ ಯಕ್ಷ ದುರ್ಗ ಕಲಾ ಬಳಗ ಜಂಟಿಯಾಗಿ ಹಮ್ಮಿಕೊಂಡಿದ್ದ ಪಿ. ಚಂದ್ರಿ...

ಎಸ್.ಎಲ್.ಭೈರಪ್ಪ ಅವರಿಗೆ ‘ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ’

16-09-2024 ಬೆಂಗಳೂರು

ಬೀದರ್: ಹಾರಕೂಡ ಹಿರೇಮಠ ಸಂಸ್ಥಾನದ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿಗೆ ನಾಡಿನ ಹಿರಿಯ ...

ಸಣ್ಣ ಕತೆಗಾರ್ತಿ, ರಂಗಕಲಾವಿದೆ ಮನೋರಮಾ ಎಂ.ಭಟ್ ಇನ್ನಿಲ್ಲ

16-09-2024 ಬೆಂಗಳೂರು

ಬೆಂಗಳೂರು: ಸಣ್ಣ ಕತೆಗಾರ್ತಿ, ಆಕಾಶವಾಣಿ ಕಲಾವಿದೆ, ಅಂಕಣಗಾರ್ತಿ, ರಂಗಕಲಾವಿದೆ, ಕವಯಿತ್ರಿ, ಲೇಖಕಿಯಾಗಿ ಗುರುತಿಸಿಕೊಂಡ...