ಕಮಲಾ ಮೇಡಂ 'ಗುರು'ವಾಗಿದ್ದವರಾದ್ದರಿಂದ ಇವು 'ಲಘು' ವಾದವುಗಳಲ್ಲ


ಪುಸ್ತಕದ ಶೀರ್ಷಿಕೆಯ ಅಡಿಯಲ್ಲಿ 'ಹಗುರ ಪ್ರಬಂಧ'ಗಳು ಎನ್ನಲಾಗಿದೆ. ಖಂಡಿತಾ, ಕಮಲಾ ಮೇಡಂ 'ಗುರು'ವಾಗಿದ್ದವರಾದ್ದರಿಂದ ಇವು 'ಲಘು' ವಾದವುಗಳಲ್ಲ ಎನ್ನುತ್ತಾರೆ ಲೇಖಕ ಶಿವಕುಮಾರ್ ಮಾವಲಿ ಅವರು ಎಂ.ಆರ್. ಕಮಲ ಅವರ ಹೊಂಬಳ್ಳಿ ಪ್ರಬಂಧ ಸಂಕಲನಕ್ಕೆ ಬರೆದ ಆಪ್ತ ಅನಿಸಿಕೆ. 

ಕಮಲಾ ಮೇಡಂ ಅವರ ಪ್ರಬಂಧಗಳ ಸಂಕಲನ ಹೊಂಬಳ್ಳಿ ಓದುವಾಗ ನನಗೆ ಕನೆಕ್ಟ್ ಆಗುವ ಅನೇಕ ವಿಷಯಗಳು ಸಿಕ್ಕವು. ಮುಖ್ಯವಾಗಿ ಅವರ ಬರಹದ‌ ಸರಳತೆ ಮತ್ತು ಅದರಲ್ಲಿ ಪ್ರಸ್ತಾಪಿಸುವ ದರ್ಶನಗಳು ಇಷ್ಟವಾಗುತ್ತವೆ. ಹಾಗೆ ನೋಡಿದರೆ self help ವಿಭಾಗಕ್ಕೆಂದೇ ಬರೆಯುವ ಅನೇಕ‌ ಪುಸ್ತಕಗಳು ಎಷ್ಟೊಂದು ಅಸಹಜ ಮತ್ತು ಅತಾರ್ಕಿಕ ಅನ್ನಿಸುತ್ತವೆ. ಆದರೆ ಇಲ್ಲಿನ ಪ್ರಬಂಧಗಳಲ್ಲಿ ಹೇಳುವ ವಿಷಯಕ್ಕೆ ಅವರು ತೆಗೆದುಕೊಳ್ಳುವ ದೃಷ್ಟಾಂತಗಳು ತುಂಬಾ ಕನ್ ವಿನ್ಸಿಂಗ್ ಆಗಿವೆ .

ಇಲ್ಲಿನ ಅನೇಕ ಬರಹಗಳಲ್ಲಿ ಪ್ರಸ್ತಾಪಿಸುವ ಕಾವ್ಯದ ಸಾಲುಗಳಿಂದ ಆ ಬರಹಗಳಿಗೊಂದು ಅಥೆಂಟಿಸಿಟಿ‌ ಬಂದಿದೆ. ಪಿಯು ಕಾಲೇಜಿನಲ್ಲಿ ಪಾಠ‌ ಮಾಡಿದ ಕಮಲಾ ಮೇಡಂ ಪ್ರಸ್ತಾಪಿಸಿರುವ ಘಟನೆಗಳು ಹತ್ತು ವರ್ಷ ಉಪನ್ಯಾಸಕನಾಗಿದ್ದ ನನಗೂ ಅನುಭವಕ್ಕೆ ಬಂದಿವೆ. 

ಮರವೊಂದು ಬೀಜಕ್ಕೆ ಕೊಡಬೇಕಾದ ಅಗತ್ಯ ಕಾಣ್ಕೆಯನ್ನು ಕೊಡುವಲ್ಲಿ ಎಡವುತ್ತಿರುವ ಅನೇಕ ಶಿಕ್ಷಕರನ್ನು ನಾನು ಕಣ್ಣಾರೆ‌ ಕಂಡಿದ್ದೇನೆ. ಒಬ್ಬ ಪ್ರಾಂಶುಪಾಲರಾಗಿ, ಉಪನ್ಯಾಸಕಿಯಾಗಿ ಅವರು ಮಾಡಿರುವ ಪ್ರಯೋಗಗಳನ್ನು ಕಂಡು ನನ್ನ‌ ಹತ್ತು ವರ್ಷಗಳ ಉಪನ್ಯಾಸಕ ವೃತ್ತಿಯಲ್ಲಿ ಇಂಥ ಪ್ರಾಂಶುಪಾಲರು ಸಿಕ್ಕಿದ್ದರೆ‌ ತರಗತಿಗಳನ್ನು social laboratory ಆಗಿ ಮಾಡಬೇಕೆಂಬ ನನ್ನ ಆಸೆಗೆ ಇಂಬು ಸಿಗುತ್ತಿತ್ತು ಎಂದು ಯೋಚಿಸಿದೆ. 

ಅಂದಹಾಗೆ ಪುಸ್ತಕದ ಶೀರ್ಷಿಕೆಯ ಅಡಿಯಲ್ಲಿ 'ಹಗುರ ಪ್ರಬಂಧ'ಗಳು ಎನ್ನಲಾಗಿದೆ. ಖಂಡಿತಾ, ಕಮಲಾ ಮೇಡಂ 'ಗುರು'ವಾಗಿದ್ದವರಾದ್ದರಿಂದ ಇವು 'ಲಘು' ವಾದವುಗಳಲ್ಲ. ವಾರಾಂತ್ಯದಲ್ಲಿ ಮನಸ್ಸು ಪ್ರಫುಲ್ಲಗೊಳಿಸಿದ್ದಕ್ಕೆ ಥ್ಯಾಂಕ್ಯೂ ಮೇಡಂ... 

-ಶಿವಕುಮಾರ್ ಮಾವಲಿ

 

MORE FEATURES

'ಕೂಡಿಟ್ಟ ಹಣ ಎಲ್ಲಿ ಹೋಯಿತು?'

07-09-2024 ಬೆಂಗಳೂರು

“ಒಲವ ಧಾರೆ' ಕವನ ಸಂಕಲನದಲ್ಲಿರುವ ರಾಮಕೃಷ್ಣರವರ ಬಹುತೇಕ ಕವನಗಳಲ್ಲಿ ವ್ಯಕ್ತವಾಗುವ ಕವಿಯ ಅನುಭವಗಳು ನಮ್ಮ ಅ...

ಅಂತಃಕರಣ ಎಂದರೆ ಆಂತರಿಕ ಕಾರ್ಯಗಳು

07-09-2024 ಬೆಂಗಳೂರು

"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂ...

ಕಾವ್ಯ ಪ್ರಕಾರದ ಮೂಲಕ ಸಶಕ್ತವಾಗಿ ಗುರುತಿಸಿಕೊಂಡವರು ಶೈಲಜಾ ಉಡಚಣ

07-09-2024 ಬೆಂಗಳೂರು

“ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರ...