ಎಂದಿಗೂ ಹೆಣ್ಣು ಉರಿಯಲ್ಲಿ ಅರಳುವ ಹೂವು..


"ಸುಮಾರು 200 ಪುಟಗಳ ಈ ಕಾದಂಬರಿಯಲ್ಲಿ ಅಕ್ಕ ಟಿಲ್ಡಾಳ ಕಥೆಯೊಂದಿಗೆ ಅವಳ ಪುಟ್ಟ ತಂಗಿಯ ಕಥೆಯನ್ನು ಸೂಕ್ಷ್ಮವಾಗಿ ಅನಾವರಣಗೊಳಿಸಲಾಗಿದೆ. ಓದುತ್ತಾ ಹೋಗುತ್ತದ್ದಂತೆ, ನನಗೆ ನಮ್ಮಲ್ಲಿನ ಮನೆಮನೆ ಕಥೆಯಂತೆಯೇ ಭಾಸವಾಗಿ, ಯಾವುದೋ ಭಾಷೆಯ ಅನುವಾದ ಎನ್ನುವ ಭಾವ ಮರೆಯಾಗಿ ಹೋಯಿತು," ಎನ್ನುತ್ತಾರೆ ಸಂಧ್ಯಾ ಯಶಸ್ವಿ. ಅವರು ಹರ್ಷ ರಘುರಾಮ್ ಅವರ ಅನುವಾದಿತ 'ನನ್ನ ತಂಗಿ ಈಡಾ' ಕೃತಿ ಕುರಿತು ಬರೆದ ವಿಮರ್ಶೆ.

ಇತ್ತೀಚೆಗೆ ಛಂದ ಪುಸ್ತಕ ಪ್ರಕಟಿಸಿದ, ಜರ್ಮನ್ ಭಾಷೆಯಿಂದ ಹರ್ಷ ರಘುರಾಮ್ ಅನುವಾದಿಸಿದ 'ನನ್ನ ತಂಗಿ ಈಡಾ' ಒಂದೊಳ್ಳೆ ಪುಸ್ತಕ ಓದಿದ ಅನುಭವ. ಕನ್ನಡಿಗರು ಕೊಂಡು ಓದಬೇಕಾದ ಪುಸ್ತಕಗಳ ಪಟ್ಟಿಗೆ ಒಂದು ಸೇರ್ಪಡೆ. ಮೂಲ ಲೇಖಕಿ ಕಾರೊಲೀನ ವಾಲ್ ಗೂ, ಅನುವಾದಕ ಹರ್ಷ ರಘುರಾಮ್ ಗೂ ಪ್ರೀತಿಯ ಅಭಿನಂದನೆಗಳು.

ಸುಮಾರು 200 ಪುಟಗಳ ಈ ಕಾದಂಬರಿಯಲ್ಲಿ ಅಕ್ಕ ಟಿಲ್ಡಾಳ ಕಥೆಯೊಂದಿಗೆ ಅವಳ ಪುಟ್ಟ ತಂಗಿಯ ಕಥೆಯನ್ನು ಸೂಕ್ಷ್ಮವಾಗಿ ಅನಾವರಣಗೊಳಿಸಲಾಗಿದೆ. ಓದುತ್ತಾ ಹೋಗುತ್ತದ್ದಂತೆ, ನನಗೆ ನಮ್ಮಲ್ಲಿನ ಮನೆಮನೆ ಕಥೆಯಂತೆಯೇ ಭಾಸವಾಗಿ, ಯಾವುದೋ ಭಾಷೆಯ ಅನುವಾದ ಎನ್ನುವ ಭಾವ ಮರೆಯಾಗಿ ಹೋಯಿತು.

ಕಾದಂಬರಿಯ ಮೂಲವು ಜರ್ಮನ್ ಭಾಷೆಯಾದರೂ, ಅಲ್ಲಿನ ಸಮಾಜದ ವಸ್ತುಸ್ಥಿತಿಯನ್ನು represent ಮಾಡಿದರೂ, ಅಲ್ಲಿನ ಹಾಗೂ ಭಾರತದ ಮಧ್ಯಮ ಮತ್ತು ಕೆಳಮಧ್ಯಮದ ಯುವ ಜನಾಂಗದ ತಲ್ಲಣ ತುಡಿತಗಳು ಬಹುತೇಕ ಒಂದೆ ತೆರನಾಗಿದ್ದು, ಆದರೆ ಅದಕ್ಕೆ ಪರಸ್ಪರ ಸಮಾಜಗಳು ಸ್ಪಂದಿಸುವ ರೀತಿ ವಿಭಿನ್ನವಾಗಿದೆ. ಸಾಮಾನ್ಯವಾಗಿ ಮನೆಯ ಹಿರಿಯ ಮಕ್ಕಳು ಮನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ನಮ್ಮ ಸಮಾಜದ ಅಲಿಖಿತ ಅಪೇಕ್ಷೆ. ಟಿಲ್ಡಾಳೂ ಸಹ ತನ್ನ ಪಾಲಕರ ಅನುಪಸ್ಥಿತಿಯಲ್ಲಿ ಸಂಸಾರದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾಳೆ. ತನ್ನ ತಂಗಿಗೆ ತನಗೊದಗಿದಂತಹ ಯಾವ ಬವಣೆಗಳ ತಾಪ ತಾಗದಂತೆ ಹೆಜ್ಜೆ ಹೆಜ್ಜೆಗೂ ಎಚ್ಚರ ವಹಿಸುತ್ತಾಳೆ. ಇನ್ನು ಪುಟ್ಟ ಈಡಾಳೊ, ವಯಸ್ಸಿಗೆ ಮೀರಿದ ಪ್ರಬುದ್ಧೆ ! ಅಕ್ಕನ ನೋವುಗಳಿಗೆ ಸ್ಪಂದಿಸುತ್ತಾ ತಾನು ವಿಕಸನಗೊಳ್ಳುವ ಪರಿ ವಿಸ್ಮಯಕಾರಿ.

ನಮ್ಮ ಎಷ್ಟು ಸಂಸಾರಗಳಲ್ಲಿ ಮದ್ಯವ್ಯಸನಿ ತಂದೆ, ಅಸಹಾಯಕ ಅನಕ್ಷರಸ್ಥ ತಾಯಿ, ಇಬ್ಬರ ನಡುವೆ ಬಳಲುವ ಮಕ್ಕಳನ್ನು ಕಾಣುವುದಿಲ್ಲ? ತಾಯಿಯಾಗಿಯೋ ಮಗಳಾಗಿಯೋ, ಹೆಚ್ಚಿನ ಪಾಲು ತಾಪದ ಬೇಗೆ ಅನುಭವಿಸುವುದು ಹೆಣ್ಣೇ ಇರಬಹುದೇನೊ!! ಪುಸ್ತಕ ಓದಿ ಮುಗಿಸಿದಾಗ ಅನ್ನಿಸಿದ್ದು - ಟಿಲ್ಡಾ-ಈಡಾರಂತೆ ಮಾನಸಿಕವಾಗಿ ತೊಳಲಾಡುತ್ತಾ, ಆ ಯಾವ ಪ್ರಭಾವಕ್ಕೂ ಒಳಗಾಗದಂತೆ ತಮ್ಮನ್ನು ತಾವು ಜೋಪಾನ ಮಾಡಿಕೊಳ್ಳುತ್ತಾ, ಸ್ವತಂತ್ರ ಅಸ್ತಿತ್ವಕ್ಕಾಗಿ ಹೋರಾಡುತ್ತಾ ಬದುಕುತ್ತಿರುವ ಹೆಣ್ಣು ಮಕ್ಕಳನ್ನು ಎಲ್ಲ ತಲೆಮಾರುಗಳಲ್ಲಿ, ಎಲ್ಲ ಸಂಸ್ಕೃತಿಗಳಲ್ಲಿ ಕಾಣುತ್ತಲೇ ಇದ್ದೇವೆ ಎನ್ನುವ ಕಹಿ ಸತ್ಯ.

ಹೆಣ್ಣಿನ ಹೃದಯದ ಸಂಸ್ಕಾರವು, ದೇಶ ಕಾಲಗಳ ಪರಿಮಿತಿಗೆ ಒಳಪಡುವುದಲ್ಲ. ಹೋರಾಟ ಅವಳ ಹುಟ್ಟುಗುಣ. ಎಂದಿಗೂ ಹೆಣ್ಣು ಉರಿಯಲ್ಲಿ ಅರಳುವ ಹೂವು.

MORE FEATURES

'ಕೂಡಿಟ್ಟ ಹಣ ಎಲ್ಲಿ ಹೋಯಿತು?'

07-09-2024 ಬೆಂಗಳೂರು

“ಒಲವ ಧಾರೆ' ಕವನ ಸಂಕಲನದಲ್ಲಿರುವ ರಾಮಕೃಷ್ಣರವರ ಬಹುತೇಕ ಕವನಗಳಲ್ಲಿ ವ್ಯಕ್ತವಾಗುವ ಕವಿಯ ಅನುಭವಗಳು ನಮ್ಮ ಅ...

ಅಂತಃಕರಣ ಎಂದರೆ ಆಂತರಿಕ ಕಾರ್ಯಗಳು

07-09-2024 ಬೆಂಗಳೂರು

"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂ...

ಕಾವ್ಯ ಪ್ರಕಾರದ ಮೂಲಕ ಸಶಕ್ತವಾಗಿ ಗುರುತಿಸಿಕೊಂಡವರು ಶೈಲಜಾ ಉಡಚಣ

07-09-2024 ಬೆಂಗಳೂರು

“ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರ...