About the Author

ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯವರಾದ ಉಮೇಶ ನಾಯ್ಕ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಿಕೊಂಡು ಗಮನ ಸೆಳೆದವರು. ಬರವಣಿಗೆ, ಗಾಯನ, ಶಾಸ್ತ್ರೀಯ ಸಂಗೀತ (ಹಾಡುಗಾರಿಕೆ ಮತ್ತು ತಬಲಾ ವಾದನ), ರಂಗಭೂಮಿ ಮತ್ತು ಸಾಹಿತ್ಯಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಅವರು, ವೃತ್ತಿಯಲ್ಲಿ ಉಪನ್ಯಾಸಕರು. ಕವಿತೆ ಅವರ ಅಭಿವ್ಯಕ್ತಿಯ ಮುಖ್ಯ ಮಾಧ್ಯಮವಾಗಿದ್ದರೂ, ಕವಿತೆಯೇತರ ಬರವಣಿಗೆಯಲ್ಲೂ ತೊಡಗಿಸಿಕೊಂಡಿರುವ ಉಮೇಶ ನಾಯ್ಕ, ಉತ್ತರ ಕನ್ನಡದ ನಾಮಧಾರಿ ಸಮಾಜದ ಬಗೆಗೂ ಅಧ್ಯಯನಪೂರ್ಣ ಕೃತಿ ರಚಿಸಿದ್ದಾರೆ. ಉತ್ತರ ಕನ್ನಡದ ರೈತಹೋರಾಟದ ಹಿನ್ನೆಲೆಯೊಡನೆ ತಮ್ಮ ತಂದೆಯವರ ಕುರಿತು ಅವರು ಬರೆದಿರುವ ಕೃತಿ ಒಂದು ಕಾಲಘಟ್ಟದ ಸಾಂಸ್ಕೃತಿಕ ವಿವರಗಳನ್ನೂ ದಾಖಲಿಸುವುದರೊಂದಿಗೆ ಮುಖ್ಯವಾದುದಾಗಿದೆ. ಕೃತಿಗಳು: ಪೂರ್ಣ ಸತ್ಯವಲ್ಲ ರಸ್ತೆಗಳು, ಕತ್ತಲ ಧ್ಯಾನಿಸಿದ ನಂತರ, ನಾಲ್ಕೇ ಕ್ಲಾಸು ಓದಿದವನು, ಹಳೇಪೈಕರು : ಒಂದು ಅಧ್ಯಯನ.

ಉಮೇಶ ನಾಯ್ಕ