About the Author

ಕವಿ, ಹೋರಾಟಗಾರ್ತಿ, ಕಲಾವಿದೆ ದೀಪಾ ಕೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಹಳ್ಳಿಯಲ್ಲಿ ಜನಿಸಿದರು. 'ದೀಪದಮಲ್ಲಿ' ಕಾವ್ಯನಾಮದಲ್ಲಿ ಬರವಣಿಗೆಯಲ್ಲಿ ತೊಡಗಿರುವ ಅವರು, ಸಾಹಿತ್ಯ, ರಂಗಭೂಮಿ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿದವರು. ಹಲವಾರು ಸಾಮಾಜಿಕ ಸಂಘಟನೆಗಳ ಮೂಲಕ ಮಹಿಳೆಯರು, ಮಕ್ಕಳು, ಯುವಜನರು, ಲೈಂಗಿಕ ಅಲ್ಪಸಂಖ್ಯಾತರು ಹಾಗೂ ರೈತರ ಬಲವರ್ಧನೆಗಾಗಿ ಕೆಲಸ ಮಾಡಿದ್ದಾರೆ.

ಇವರ ʼಅಸ್ಮಿತಾʼ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2015ರಲ್ಲಿ ಚೊಚ್ಚಲ ಪುಸ್ತಕ ಬಹುಮಾನ ಲಭಿಸಿದ್ದು, ಅದೇ ಕೃತಿಗೆ ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ʼಶ್ರೀಲೇಖಾ ದತ್ತಿ ಪ್ರಶಸ್ತಿʼಯೂ ದೊರಕಿದೆ. ಬೆಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಬಿ.ಎಸ್ಸಿ ಫ್ಯಾಡ್ ತರಗತಿಗೆ ಇವರ ಲೇಖನ ಪಠ್ಯವಾಗಿದೆ. ʼನರೋ ವಾʼ ನಾಟಕ ಮತ್ತು ʼಸುಂದರಭಾಗ್‌ ಬೀದಿಯಲ್ಲಿ ನಡೆಯಿತೊಂದು ವಿಸ್ಮಯʼ ಮಕ್ಕಳ ಕತೆಯನ್ನು ಇಂಗ್ಲೀಷಿನಿಂದ ಅನುವಾದ ಮಾಡಿದ್ದಾರೆ. ʼಸುರಗಿ ಸೀರೆಗಳುʼ ಸೀರೆಗಳ ಕುರಿತ ಕನ್ನಡ ಕವಿತೆಗಳನ್ನು ಸಂಗ್ರಹಿಸಿದ್ದಾರೆ. 2024ರಲ್ಲಿ ಇವರ ‘ಹುಣಸೇ ಚಿಗುರು’ ಮತ್ತು ಇತರ ಕತೆಗಳು ಪ್ರಕಟಗೊಂಡಿದೆ.

ದೀಪದ ಮಲ್ಲಿ (ದೀಪಾ ಕೆ)