ಅಟಲ್‌ ಬಿಹಾರಿ ವಾಜಪೇಯಿ ಕವಿತೆಗಳು

Author : ಸರಜೂ ಕಾಟ್ಕರ್‌

₹ 120.00




Published by: ಯಜಿ ಪ್ರಕಾಶನ
Address: ಭೂಮಿ, ಎಂ. ಪಿ. ಪ್ರಕಾಶ್‌ ನಗರ, ಹೊಸಪೇಟೆ- 583201
Phone: 9449922800

Synopsys

ಲೇಖಕ ಡಾ. ಸರಜೂ ಕಾಟ್ಕರ್ ಅವರು ಕನ್ನಡಕ್ಕೆ ಅನುವಾದಿಸಿದ ಪುಸ್ತಕ “ಅಟಲ್ ಬಿಹಾರಿ ವಾಜಪೇಯಿ ಕವಿತೆಗಳು”. ಭಾರತದ ಮಾಜಿ ಪ್ರದಾನಿ ವಾಜಪೇಯಿ ಅವರು ಒಬ್ಬ ಕವಿ ಕೂಡಾ. ಹಿಂದಿ, ಇಂಗ್ಲೀಷ್‌ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯಗಳಿಸಿದ್ದ ‌ಅವರು ಸಹಜವಾಗಿಯೇ ಸಾಹಿತ್ಯದ ಮೇಲೆ ಅತಿಯಾದ ಆಸಕ್ತಿಯನ್ನು ಹೊಂದಿದ್ದರು. ತಮ್ಮ ಮಾತೃಭಾಷೆ ಹಿಂದಿಯಲ್ಲಿ ಅನೇಕ ಕಥೆ, ಕವನಗಳನ್ನೂ ಬರೆದಿದ್ದಾರೆ. ಮೇರಿ ಇಕಿವಾನಾ ಕವಿತೆಮ್ (1995), ನಾಯಿ ದೀಸಾ - (ಜಗ್ಜಿತ್ ಸಿಂಗ್ ಅವರೊಂದಿಗೆ ಒಂದು ಆಲ್ಬಮ್) (1995), ಶ್ರೀತಾ ಕಬಿತಾ (1997), ಹಾಗೂ ಸಂವೇದನ ಇವರು ಬರೆದ ಕವನಗಳಾಗಿವೆ. ಈ ಕವನಗಳನ್ನು ಲೇಖಕ ಸರಜೂ ಅವರು ಕನ್ನಡ ಭಾಷೆಗೆ ಪರಿವರ್ತನೆ ಮಾಡಿ ಸೊಗಸಾಗಿ ಕೊಟ್ಟಿದ್ದಾರೆ.

About the Author

ಸರಜೂ ಕಾಟ್ಕರ್‌
(14 August 1953)

ವೃತ್ತಿಯಲ್ಲಿ ಪತ್ರಕರ್ತರು ಆಗಿರುವ ಕವಿ ಸರಜೂ ಕಾಟ್ಕರ್ ಅವರು ಜನಿಸಿದ್ದು (1953 ಆಗಸ್ಟ್‌ 14ರಂದು) ಹುಬ್ಬಳ್ಳಿಯಲ್ಲಿ . ತಂದೆ ಹಣಮಂತರಾವ್, ತಾಯಿ ಗೌರಾಬಾಯಿ.  ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ (ಕನ್ನಡ) ಪದವೀಧರರು.ಕರ್ನಾಟಕ ವಿ.ವಿ.ಯಿಂದ ‘ಕನ್ನಡ-ಮರಾಠಿ ದಲಿತ ಸಾಹಿತ್ಯ: ಒಂದು ಅಧ್ಯಯನ’ ವಿಷಯವಾಗಿ (1994) ಪಿಎಚ್ ಡಿ ಪಡೆದರು. ಸಂಯುಕ್ತ ಕರ್ನಾಟಕದಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ನಂತರ ಇಂಡಿಯನ್‌ ಎಕ್ಸ್‌ಪ್ರೆಸ್‌ ಬಳಗದ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು ಸೇರಿದಂತೆ ಸರ್ಕಾರದ ಹಲವಾರು ಅಕಾಡೆಮಿ, ಸಮಿತಿ ಹೀಗೆ ವಿವಿಧ ಜವಾಬ್ದಾರಿತ ಸ್ಥಾನಗಳನ್ನು ನಿರ್ವಹಿಸಿದ್ದಾರೆ.  ಕೃತಿಗಳು: ಬೆಂಕಿ-ನೀರು, ಹಸಿದ ನೆಲ, ಸೂರ್ಯ, ...

READ MORE

Related Books