ಕವಿ, ಲೇಖಕ ದೇವರಾಜ್ ಹುಣಸಿಕಟ್ಟಿ ಅವರು ಮೂಲತಃ ರಾಣೇಬೆನ್ನೂರಿನ ಹುಣಸಿಕಟ್ಟಯರು. ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಓದು, ಬರಹ ಇವರ ಅಚ್ಚುಮೆಚ್ಚಿನ ಹವ್ಯಾಸ.
ನದಿಯಂತೆ ಭೋರ್ಗರೆದು
ಹರಿದಿದ್ದಲ್ಲ ನನ್ನ ಕವಿತೆ...!
ಎಂದೂ ಬತ್ತದ
ಸಣ್ಣದೊಂದು ಒರತೆ...!!
ಹೊಲಿಗೆ ಯಂತ್ರದಂತೆ
ಯಾoತ್ರಿಕವಾಗಿ ಹೊಲೆದದ್ದಲ್ಲ...
ನನ್ನ ಕವಿತೆ
ಸಣ್ಣ ಸೂಜಿಯಲಿ
ಬೆಸುಗೆಯ ದಾರ ಹಾಕಿ
ಕಂಗಳ ಒತ್ತಿ ಹಿಡಿದು
ಮೆಲ್ಲಗೆ ಹರಿದ ಮನಸುಗಳ
ಹೊಲಿದ ಕವಿತೆ...ಒಲಿದ ಕವಿತೆ...