Story/Poem

ಅನಿತಾ ಪಿ. ತಾಕೊಡೆ

ಅನಿತಾ ಪಿ. ತಾಕೊಡೆ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಸಮೀಪದ ತಾಕೊಡೆಯವರು. ಪ್ರಸ್ತುತ ಮುಂಬಯಿ ನಿವಾಸಿ. ಇವರು ಕವಿಯಾಗಿ, ಕಥೆಗಾರರಾಗಿ, ಅಂಕಣಕಾರರಾಗಿ  ಹೆಸರು ಮಾಡಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ್ಯಾಂಕ್‍ನೊಂದಿಗೆ  ಪಡೆಯುವುದರ ಮೂಲಕ ಎಂ.ಬಿ.ಕುಕ್ಯಾನ್ ಬಂಗಾರದ ಪದಕದ ಅರ್ಹತೆಯನ್ನು ಸಾಧಿಸಿದ್ದಾರೆ. ಇವರು 2019ರಲ್ಲಿ  ಮೈಸೂರು ಅರಮನೆಯ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ. ಇವರ ಎಂಟು ಕೃತಿಗಳು ಲೋಕಾರ್ಪಣೆಗೊಂಡಿವೆ. ಪಿಎಚ್.ಡಿ ಕೋರ್ಸ್‍ವರ್ಕ್‍ನ ಸಲುವಾಗಿ ಜಯ ಸಿ. ಸುವರ್ಣರ ಕುರಿತು ಸಿದ್ಧಪಡಿಸಿದ ‘ಸುವರ್ಣಯುಗ’ ಶೋಧ ಪ್ರಬಂಧಕ್ಕೆ ಮುಂಬಯಿ ವಿಶ್ವವಿದ್ಯಾಲಯದ ವತಿಯಿದ ಸಂಶೋಧಕಿ ಡಾ.ಲೀಲಾ ಬಿ. ಅವರು ಕೊಡಮಾಡುವ ‘ಶೋಧಸಿರಿ’ ಪುರಸ್ಕಾರ ಮತ್ತು ಡಾ.ವಿಶ್ವನಾಥ ಪ್ರತಿಷ್ಠಾನದ ವತಿಯಿಂದ ‘ವಿಕಾಸ ಪುಸ್ತಕ’ ಬಹುಮಾನ ಲಭಿಸಿದೆ.  ನಿವಾಳಿಸಿಬಿಟ್ಟ ಕೋಳಿ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಡಮಾಡುವ 2022ನೆಯ ಸಾಲಿನ ಕೆ. ವಸುದೇವಾಚಾರ್ಯ ದತ್ತಿ ಪ್ರಶಸ್ತಿ, ಮಾಣಿಕ್ಯ ಪ್ರಕಾಶನ ಹಾಸನದಿಂದ ‘ಪದ್ಮಾವತಿ ವೆಂಕಟೇಶ ದತ್ತಿ ಪುರಸ್ಕಾರ’ ಲಭಿಸಿದೆ. ‘ಮೋಹನ ತರಂಗ’ ಕೃತಿಗೆ 2019-20ನೆಯ ಸಾಲಿನ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಗದು ಪುರಸ್ಕಾರ ಪ್ರಾಪ್ತಿಯಾಗಿದೆ. 

More About Author

Story/Poem

ರಾಮ ನವಮಿಗೆ ಬಂದ ರಾಮ

ರಾಮ ನವಮಿಯ ದಿವಸ ಶ್ರೀರಾಮ ಬರುವ ಹಾಗೆ ಬಂದೆಯಾ ನೀ ಬಳಿಗೆ ರಘುರಾಮನಂತಿಹ ರಾಮ ಕಾದ ಗಳಿಗೆಯ ಮೊದಲೇ ಇರುಳು ಹಗಲಿನ ನಡುವೆ ಹೇಗೆ ಬೆರೆತೆವು ನಾವು ಪೂರ್ಣವಾಗದ ಬಿಂದು ಹೋಳಿಯಾಡದ ರಂಗು ಹೇಗೆ ತಿಳಿಯಿತೊ ಕಾಲ ನಿನ್ನ ಪ್ರೇಮದ ಒಸಗೆ ಮಾತು ಮಾತಿನ ಸಲುಗೆ ಹೇಗೆ ಅರಿಯಿತು ಮನಸ್...

Read More...

ಬೇರೆ ದೂರುಗಳಿಲ್ಲ

ನೀ ಬಂದ ಗಳಿಗೆಯಿಂದ ಒಡಗೂಡಿದ ನಿನ್ನ ರೂಪು ತಿಳಿಯಾಗಸದಂಗಳದಲಿ ನೂರಾರು ನಕ್ಷತ್ರಗಳ ನಡುವೆ ಪಡಿಮೂಡಿವೆಯೇ ಎಂದು ಆಗಾಗ ತಲಾಶೆಗಿಳಿಯುತ್ತೇನೆ ಹೇಗಿರುವೆ... ಎಲ್ಲಿರುವೆ ನೀನು ನನ್ನ ನೆನೆಯುವೆಯೇನು? ನನ್ನೆದೆಯಾಳದಲಿ ಭಾರವಾದ ನಿನ್ನುಸಿರಿನ ಹೆಜ್ಜೆ ಕಡು ನೀಲಿಯಾಗಿ ಎಷ್ಟು ಗಾ...

Read More...

ಮೇಣಕ್ಕಂಟಿದ ಬತ್ತಿ

ನಾನು ನೀನಾಗಿ ನೀನು ನಾನಾಗಿ ಒಲುಮೆಯೊಳಾಡುವುದು ಗಾಢವಾಗಿ ಬೆಸೆಯುವುದು ನೀನಿರದೆ ನಾನಿರಲಾಗದ ಬಂಧದಲಿ ನೂರ್ದನಿಗಳು ಮಾರ್ದನಿಸಿ ಒಂದೇ ಜೀವಾತ್ಮದಂತೆ ಒಮ್ಮನಸ್ಸಿನಿಂದ ಕೂಡಿ ನಡೆಯುವುದು ನಮ್ಮೊಳಗಿನ ಭಾವ ವಿನಿಮಯದೊಳು ಮಾತು ಪುಟಗಳ ಮೀರಿ ಸಂಪುಟವಾಗುವುದು ನಿಶೆಯ ಹಿರಿಮೆ ಗರಿಮೆಗ...

Read More...

ಕಣ್ಣ ಕಾವಲಿನಲಿ...

ಕಂಡೂ ಕಾಣದಂತಿರುವ ಕತ್ತಲ ಮುಸುಕಿನ ಇರುಳುಗನ್ನಡಿಯಲಿ ನಿಂತಿರುವ ನಿಲುವನ್ನೊಮ್ಮೆ ನೋಡಬೇಕು ಇಣುಕಿ ಮರೆಯಾಗುವ ಮಾತನೆಳೆಯಬೇಕು ಮೌನ ಕ್ರಾಂತಿಯೊಳಗೆ ಮೌನಿಯಾಗಬೇಕು... ಒಂದಷ್ಟು ಹೊತ್ತು ಆಚೆಗೆ ನಿಂತು ಬಿಡು ಮಾತು ಆಡಿದಷ್ಟು ಹೊತ್ತು , ಕೇಳಲೆಳಸುವ ತನನದ ಮೋಡಿಗೋ, ಕಾಯುವಿಕ...

Read More...

ಜೀವನ ಮೀಮಾಂಸೆ

ಯಾರ ಆಸೆ ಆಮಿಷಗಳಿಗೂ ಸೊಪ್ಪು ಹಾಕದೆ ಎಷ್ಟು ಓಲೈಸಿದರೂ ಎಲ್ಲೂ ನಿಲ್ಲಲೊಲ್ಲದ ಹಕ್ಕಿಯೊಂದು ಹಾರಿ ಬಂದು ಅಂಗಳದ ಮುಂದಿನ ಮರದ ಗೆಲ್ಲಿನಲಿ ಕೂತು ಗುಸುಗುಸು ಪಿಸಪಿಸೆಂದು ನುಲಿಯುತ್ತಿತ್ತು. ಹಕ್ಕಿ ಬಂದಾಗಲೆಲ್ಲ ನನ್ನದೊಂದೇ ರಾಗ ‘ನಿನ್ನೆಯ ಸುಖ ಮತ್ತೆ ಮರಳೀತೇ? ಇಂದಿನ ದುಃಖ ...

Read More...