Poem

ಕರೋನಾ ಕನಸು !!  

ಶಸ್ತ್ರಗಳಿಲ್ದೆ
ವಿಶ್ವವನ್ನೆಲ್ಲಾ ಗೆದ್ದ
ಅದೃಶ್ಯ ಮಾರಿ

ದ್ವೇಷಮಾಡದೆ
ಜಗವನ್ನೆಲ್ಲ ಸುತ್ತಿ
ಸೊಂಕು ಹಂಚಿದೆ

ಜನರನ್ನೆಲ್ಲ
ಗಾಳಿಯಲಿ ಸಿಕ್ಕಿಸಿ
ಹೆಣಮಾಡಿದೆ

ಜಾತಿಮತದ
ತಾರತಮ್ಯವ ಮಾಡ್ದೆ
ಬುದ್ದಿ ಕಲ್ಸಿದೆ

ಅಹಂಕಾರವ
ಸೊಂಕಿನ ಬಂದೂಕಲಿ
ದ್ವಂಸ ಮಾಡಿದೆ

ಮನುಷ್ಯರೆಲ್ರೂ
ಸಮಾನವೆಂಬ ಮಂತ್ರ
ಮೊಳಗಿಸಿದೆ

– ಕಾಡಜ್ಜಿ ಮಂಜುನಾಥ

ಕಾಡಜ್ಜಿ ಮಂಜುನಾಥ

ಕವಿ, ಕಾಡಜ್ಜಿ ಮಂಜುನಾಥ ಮೂಲತಃ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನವರು. ಇತಿಹಾಸದಲ್ಲಿ ಎಂ. ಎ ಪದವಿ ಹೊಂದಿರುವ ಅವರು ಪ್ರಸ್ತುತ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಕತೆ, ಕವನ, ಚುಟುಕು, ಹಾಯ್ಕು ,ಲೇಖನ , ಪ್ರಬಂಧ ಬರೆಯುವುದು, ಕವಿಗೋಷ್ಠಿಗಳಲ್ಲಿ ಭಾಗವಹಿಸುವುದು, ಸಂಗೀತ ಹಾಡುವುದು, ಕೇಳುವುದು, ಪತ್ರಿಕೆಗಳನ್ನು, ಕಾದಂಬರಿ, ಸಂಶೋಧನಾ ಲೇಖನಗಳು, ಪುಸ್ತಕಗಳನ್ನು ಓದುವುದು, ಕ್ರಿಕೆಟ್ ಆಡುವುದು ಅವರ ಹವ್ಯಾಸ.

ಪ್ರಶಸ್ತಿಗಳು : ಶಿಕ್ಷಣ ಸಿರಿ, ಸಾಹಿತ್ಯ ಕೇಸರಿ ಪ್ರಶಸ್ತಿ

ಕೃತಿಗಳು : ಚೈತ್ರದ ಸಿರಿ

More About Author