ಜೀವನದಲ್ಲಿ ಅಧ್ಯಾತ್ಮ ಅನ್ನುವಂತಹದ್ದು ಬಹುಮುಖ್ಯ; ಪ್ರಭಾನಂಜನಾಚಾರ್‍ಯ

Date: 13-10-2024

Location: ಬೆಂಗಳೂರು


ಬೆಂಗಳೂರು: ಭಾರ್ಗವಿ ಪ್ರಕಾಶನದಿಂದ ಹಮ್ಮಿಕೊಂಡಿದ್ದ ವೈದ್ಯೆ ಡಾ. ಶೋಭಾ ವೆಂಕಟ್ ಅವರ ‘ಸ್ತೋತ್ರ ಸಂಗಮ’ ಕೃತಿಯ ಲೋಕಾರ್ಪಣಾ ಸಮಾರಂಭವು 2024 ಅ.13 ಭಾನುವಾರದಂದು ನಗರದ ರಾಜರಾಜೇಶ್ವರಿ ನಗರದ ಕೈಲಾಸ ಆಶ್ರಮ ಮಹಾಸಂಸ್ಥಾನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಕೃತ ವಿದ್ವಾಂಸ ವಿದ್ಯಾವಾಚಸ್ಪತಿ ಡಾ. ವ್ಯಾಸನಕೆರೆ ಪ್ರಭಾನಂಜನಾಚಾರ್‍ಯ ಅವರು ಮಾತನಾಡಿ,"ಇದೊಂದು ಪವಿತ್ರವಾದ ಸಮಾರಂಭವಾಗಿದೆ. ನಮ್ಮ ಸಮಾಜದಲ್ಲಿ ಎಲ್ಲವೂ ಕೂಡ ನಮಗೆ ಸಿಗುತ್ತದೆ. ಆದರೆ ಇಂತಹದ್ದೇ ತೆಗೆದುಕೋ ಎಂದು ಹೇಳಬೇಕಾದರೆ ಗುರು ಇರಬೇಕು. ಅದರಲ್ಲಿಯೇ ನಾವು ಬದುಕಿರುವಂತಹದ್ದು. ಜೀವನದಲ್ಲಿ ಅಧ್ಯಾತ್ಮ ಅನ್ನುವಂತಹದ್ದು ಬಹುಮುಖ್ಯವಾದುದು. ಆತ್ಮ ಇಲ್ಲದೇ ಹೋದರೆ ದೇಹಕ್ಕೆ ಬೆಲೆಯಿಲ್ಲ. ಅಧ್ಯಾತ್ಮಯಿಲ್ಲದೇ ಇದ್ದರೆ ವಿದ್ಯೆಗೆ ಬೆಲೆಯಿಲ್ಲ. ಇವತ್ತು ನಾವು ಬೆಲೆಯಿಲ್ಲದ ವಿದ್ಯೆಗಳನ್ನು ಓದುತ್ತಾ ಇದ್ದೇವೆ," ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಸಗೋಡು ಜಯಸಿಂಹ ಅವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಹಲವಾರು ಗಣ್ಯರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

 

MORE NEWS

ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕವಿತೆಗಳ ಆಹ್ವಾನ

14-10-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು, ಕರ್ನಾಟಕ ಸಂಭ್ರಮ -50 ರ ಅಭಿಮಾನದ ಅಂಗವಾಗಿ ಬೆಂಗಳೂರು, ಮೈಸೂರು, ಬೆಳಗಾವಿ ...

ಸಿನಿಮಾದ ಮೂಲ ಧ್ಯೇಯ ಮೂಢನಂಬಿಕೆಗಳಿಂದ ದೂರವಾಗಿ ಎನ್ನುವುದು; ವೆಂಕಟೇಶ್ ರಾವ್

11-10-2024 ಬೆಂಗಳೂರು

ಬೆಂಗಳೂರು: ಕೃಷ್ಣ ಸಂಕುಲ ಬ್ರಾಂಡಿಂಗ್ ಪಿಕ್ಚರ್ಸ್ ಪ್ರಸ್ತುತಪಡಿಸುತ್ತಿರುವ ಹೆಚ್.ವೆಂಕಟೇಶ್ ರಾವ್ ನಿರ್ಮಾಣದ, ವ್ಯಾನ ವ...

ಕನ್ನಡವನ್ನು ಕರುಳಿನ ಭಾಷೆಯಾನ್ನಾಗಿಸಿ ಬದುಕಿದ ವ್ಯಕ್ತಿ ಬಿಳಿಮಲೆ; ಹಂಪನಾ

10-10-2024 ಬೆಂಗಳೂರು

ಬೆಂಗಳೂರು: ಚಿರಂತ್ ಪ್ರಕಾಶನ ವತಿಯಿಂದ ಡಾ. ಪುರುಷೋತ್ತಮ ಬಿಳಿಮಲೆಯವರ ‘ಹುಡುಕಾಟ’ ಸಂಶೋಧನಾ ಗ್ರಂಥ ಬಿಡುಗ...