Date: 01-08-2024
Location: ಬೆಂಗಳೂರು
ಬೆಂಗಳೂರು: ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಲೇಖಕರಿಗೆ, ಕಲಾವಿದರಿಗೆ ಹಾಗೂ ಪ್ರಕಾಶಕರಿಗೆ ನವೆಂಬರ್ ನಲ್ಲಿ ನೀಡುವ 2023ನೇ ಸಾಲಿನ ಗೌರವಧನಕ್ಕಾಗಿ ಅರ್ಜಿ ಹಾಗೂ ಕೃತಿಗಳನ್ನು ಮತ್ತು ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಗೆ ಸಣ್ಣ ಕಥೆಗಳನ್ನು ಆಹ್ವಾನಿಸಿದೆ.
ಕಲ್ಯಾಣ ಕರ್ನಾಟಕ ಭಾಗದ ಸೃಜನ, ಸೃಜನೇತರ, ಲೇಖಕರು, ಚಿತ್ರಕಲಾವಿದರು, ಶಿಲ್ಪಕಲೆ(ಮೂರು), ಪ್ರಕಾಶಕರು(ಎರಡು), ಜನಪದ ಕಲಾವಿದರು, ವಚನ, ಅನುವಾದ, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್, ತೆಲುಗು ಹಾಗೂ ಗಡಿನಾಡ ಲೇಖಕರ ಕೃತಿ ತಲಾ ಒಬ್ಬ ಲೇಖಕರಿಗೆ(ಒಟ್ಟು ಹದಿನೈದು) ತಲಾ 5 ಸಾವಿರ ಪ್ರೋತ್ಸಾಹಧನ ನೀಡುವುದಲ್ಲದೇ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು.
ದಿ. ಜಯತೀರ್ಥ ರಾಜಪುರೋಹಿತ ಸ್ಮರಣಾರ್ಥ ಸ್ಮಾರಕ ಸತ್ತಿ ರಾಜ್ಯ ಮಟ್ಟದ ಕಥಾ ಸ್ಪರ್ಧೆ: ಈ ಸ್ಪರ್ಧೆಯಲ್ಲಿ ಭಾಗವಹಿಸಿ ಅತಿ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಕಥೆಗೆ ಚಿನ್ನದ ಪದಕದೊಂದಿಗೆ 5,000 ನಗದು, ದ್ವಿತೀಯ ಸ್ಥಾನಗಳಿಸಿದ ಕಥೆಗೆ ಬೆಳ್ಳಿ ಪದಕ 3,000 ನಗದು, ಪ್ರಶಸ್ತಿ ಫಲಕಗಳನ್ನು ನೀಡಿ ಸನ್ಮಾನಿಸಲಾಗುವುದು.
ವಿಜ್ಞಾನ ಪುಸ್ತಕ್ಕೆ ರಾಜ್ಯಮಟ್ಟದ ಪ್ರಶಸ್ತಿ: ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪುಸ್ತಕವನ್ನು ಕನ್ನಡದಲ್ಲಿ ಬರೆದು ಪ್ರಕಟಿಸಿರಬೇಕು. ರಾಜ್ಯದ ಯಾವುದೇ ಜಿಲ್ಲೆಯ ಲೇಖಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಪ್ರಶಸ್ತಿಯು ಐದು ಸಾವಿರ ನಗದು ಪ್ರಶಸ್ತಿ ಫಲಕ ನೀಇಡಿ ಸನ್ಮಾನಿಸಲಾಗುವುದು.
ಡಾ.ಬಿ.ಆರ್. ಅಂಬೇಡ್ಕರ್ ಕೃತಿಗೆ ರಾಜ್ಯಮಟ್ಟದ ಪ್ರಶಸ್ತಿ; ಕರ್ನಾಟಕ ರಾಜ್ಯ ಗ್ರಂಥಾಲಯ ಇಲಾಖೆಯ ನಿರ್ದೇಶಕರಾಗಿದ್ದ ಸತೀಶಕುಮಾರ ಹೊಸಮನಿ ಅವರು ತಮ್ಮ ತಾಯಿಯರ ಸ್ಮರಣಾರ್ಥ 1 ಲಕ್ಷ್ಮ ಇಡುಗಂಟಿನ ರೂಪದಲ್ಲಿ ವಿಶ್ವವಿದ್ಯಾಲಯಕ್ಕೆ ಪಾವತಿ ಮಾಡಿದ್ದಾರೆ. ಆದ್ದರಿಂದ ಮಾಪಮ್ಮ ಶಂಭುಲಿಂಗ ಹೊಸಮನಿ ಅವರ ಸ್ಮರಣಾರ್ತ ಕನ್ನಡದಲ್ಲಿ ಅಂಬೇಡ್ಕರ್ ಅವರ ಕುರಿತು ಬರೆದು ಪ್ರಕಟಿಸಿದ ಗ್ರಂಥವೊಂದಕ್ಕೆ 5000 ನಗದು ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು.
ಲೇಖಕರು, ಪ್ರಕಾಶಕರು ತಮ್ಮ ಅರ್ಜಿ, ಪುಸ್ತಕ ಹಾಗೂ ಕಲಾಕೃತಿಗಳನ್ನು ಆಗಸ್ಟ್ 31ರ ಒಳಗಾಗಿ
ನಿರ್ದೇಶಕರು,
ಪ್ರಸಾರಾಂಗ,
ಗುಲಬರ್ಗಾ ವಿಶ್ವವಿದ್ಯಾಲಯ-585106 ಕಲಬುರಗಿ
ವಿಳಾಸಕ್ಕೆ ಕಳುಹಿಸಬೇಕು ಎಂದು ಪ್ರಸಾರಾಂಗದ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9880088643 ಅನ್ನು ಸಂಪರ್ಕಿಸಬಹುದು.
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಜನಶಕ್ತಿ ಕೇಂದ್ರ ಹಾಗೂ ನಾಡೋಜ ಡಾ. ಕಮಲಾ ಹಂಪನಾ ಸಾಹಿತ್ಯ ವೇದಿಕೆ, ಕನ್ನಡ ...
ವಿಜಯಪುರ: ಚೆನ್ನಮ್ಮ ವಿಜಯೋತ್ಯೋತ್ಸವದ ಸಹಯೋಗದಿಂದ ವಿಜಯಪುರ ಆಶ್ರಮ ರಸ್ತೆಯಲ್ಲಿನ ಶಾಂತಿನಿಕೇತನ ಪ್ರಾಥಮಿಕ ಪ್ರೌಢಶಾಲೆ ...
ಮೂಡುಬಿದರೆ: 2024ನೇ ಸಾಲಿನ 'ಆಳ್ವಾಸ್ ವಿರಾಸತ್' ಪ್ರಶಸ್ತಿಗೆ' ಹಿಂದೂಸ್ಥಾನಿ ಗಾಯಕ ಪಂಡಿತ್ ಎಂ. ವೆಂಕಟೇ...
©2024 Book Brahma Private Limited.