ಶಾರೀರಿಕ ಕಾಮದ ಬಗ್ಗೆ ಒಂದು ಸಾಲು ಇಲ್ಲದ ಕೃತಿ


“ತೇರು-ಶೀರ್ಷಿಕೆಯನ್ನು ನೋಡಿ ಕೈಗೆತ್ತುಕೊಂಡಾಗ ಇದಕ್ಕಾಗಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ಎಂದು ನೋಡಿ ಸಂತಸದ ಜೊತೆ ಆಕರ್ಷಣೆಯೂ ಹೆಚ್ಚಾಗತೊಡಗಿತು,” ಎನ್ನುತ್ತಾರೆ ಭರತ್ ಎಂ. ಅವರು ರಾಘವೇಂದ್ರ ಪಾಟೀಲ ಅವರ “ತೇರು” ಕೃತಿ ಕುರಿತು ಬರೆದ ವಿಮರ್ಶೆ.

“ತೇರು-ಶೀರ್ಷಿಕೆಯನ್ನು ನೋಡಿ ಕೈಗೆತ್ತುಕೊಂಡಾಗ ಇದಕ್ಕಾಗಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ಎಂದು ನೋಡಿ ಸಂತಸದ ಜೊತೆ ಆಕರ್ಷಣೆಯೂ ಹೆಚ್ಚಾಗತೊಡಗಿತು. ಓದಿದ ನಂತರ ಲೇಖಕರ ಮೇಲೆ ನಿಜಕ್ಕೂ ಗೌರವ ಹೆಚ್ಚಾಯ್ತು ಎಂದರೆ ಅತಿಶಯೋಕ್ತಿಯಲ್ಲ.

“ದೇಸಾಯಿಯವರು ದೇವರ ಸೇವೆಯ ಉತ್ಸವಕ್ಕೆ ತೇರನ್ನು ಕಟ್ಟಿಸಿ ಧರಮನಟ್ಟಿ ಊರಿನ ಏಳಿಗೆಗಾಗಿ ಅದನ್ನು ವಿಜೃಂಭಣೆಯಿಂದ ಉರುಳಿಸಲು ಹೊರಟಾಗ ಅದು ಒಂದಿಂಚೂ ಮುಂದೆ ಅಲುಗಾಡುವುದಿಲ್ಲ, ಮುಖ್ಯ ತೊಂದರೆಗೆ ಪುರೋಹಿತರನ್ನು ಕೇಳಿದಾಗ ಕೆಳವರ್ಗದ ನರಬಲಿಯನ್ನು ಬೇಡುತ್ತಿದೆ ಎಂದು ಹೇಳಿದಾಗ ಬಲಿಯಾಗುವುದು ದ್ಯಾವಪ್ಪನ ಮಗ ಚಂದ್ರಾಮ.

ಸೂರ್ಯ-ಚಂದ್ರರಿರುವ ತನಕ ದ್ಯಾವಪ್ಪ ಕುಟುಂಬದವರ ರಕ್ತ ತೇರನ್ನು ಸೋಕಿದಮೇಲೆಯೇ ಮುಂದೆ ಹೋಗಬೇಕು ಎನ್ನುವದನ್ನು ದೇಸಾಯಿಯವರು ಆಜ್ಞಾಪಿಸುತ್ತಾರೆ. ಮುಂದೆ ದ್ಯಾವಪ್ಪ ತನ್ನ ಪ್ರಾಯಶ್ಚಿತ್ತಕ್ಕೆ ಗಂಟಾಳ ಸ್ವಾಮಿಗಳನ್ನು ಕೇಳಿದಾಗ ರಕ್ತ ಶುದ್ಧಿಯನ್ನು ಸೂಚಿಸುತ್ತಾರೆ. ಮುಂದೆ ತಲೆಮಾರು ಕಳೆದಂತೆ ಇದರಬಗ್ಗೆಯೇ ವಿಚಾರವಂತಿಕೆಯಲ್ಲಿ ಮುಳುಗಿದಾಗ ಎಲ್ಲವೂ ನಶ್ವರವೆನುಸುತ್ತದೆ. ದ್ಯಾವಪ್ಪ ಹಾಗೂ ಸ್ವಾಯಜ್ಜನ ಪಾತ್ರ ಬಿಡದಂತೆ ಕಾಡುತ್ತದೆ.”

“ದಲಿತವರ್ಗದ ಮೇಲೆ ಹಿಂದೆ ನಡೆದ ದಬ್ಬಾಳಿಕೆಯ ಪರಮಾವಧಿ, ಧಾರ್ಮಿಕ ಭಕ್ತಿಯಲ್ಲಿನ ಪೊಳ್ಳುತನ, ಜನಗಳ ಅಂಧಕಾರತೆ, ಮುಗ್ಧತೆ ಎಲ್ಲವೂ ತೆರೆದುಕೊಳ್ಳುತ್ತದೆ.”

“ಶಾರೀರಿಕ ಕಾಮದ ಬಗ್ಗೆ ಒಂದು ಸಾಲು ಇಲ್ಲದ ಕೃತಿ.

ಇಂಥ ಕೃತಿ ರಚಿಸಿದ “ರಾಘವೇಂದ್ರ ಪಾಟೀಲ”ರಿಗೆ ಧನ್ಯೋಸ್ಮಿ.!”

“ನಾ ಓದಿದ ಅತ್ಯುತ್ತಮ ಕೃತಿಯ ಸಾಲಿಗೆ ಹೊಸ ಸೇರ್ಪಡೆ“

MORE FEATURES

ಪ್ರಯೋಗಾತ್ಮಕ ಹಾಗು ಸಹಜ ಹರಿವಿನ ಕಥೆಗಳ ನಡುವೆ 

11-04-2025 ಬೆಂಗಳೂರು

"ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮತ್ತೆ ಮತ್ತೆ ಕಾಣಸಿಗುವ ಹೆಣ್ಣಿನ ಪಾವಿತ್ಯ್ರತೆಯ ಪ್ರಶ್ನೆ ಹಾಗೂ ಅಸಮ ದಾಂಪತ್ಯದಲ್...

ಹೃದಯದಾಳಕ್ಕೆ ಇಳಿಯುವ ಚಿಗುರೊಡೆದ ಬೇರು

11-04-2025 ಬೆಂಗಳೂರು

"ಮೂಲತಃ ಸಂಶೋಧಕ ಪ್ರವೃತ್ತಿಯ ಕೃತಿಕಾರರು, ಒಂದು ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವುದರ ಜೊತೆ ಜೊತೆಗೆ ಒಂದು ಕೌಟ...

ಪ್ರಧಾನವಾಗಿ ಇದು ಭಾವ ಪರಿವಶತೆಯ ಉದ್ದೀಪನ ಕಾವ್ಯ

10-04-2025 ಬೆಂಗಳೂರು

“ಈ ಕಾವ್ಯ ಅನುಸರಿಸಿದ್ದು ಸರಳ ಮಾದರಿಯ ತಂತ್ರವನ್ನೇ ಆಯ್ಕೆ ಮಾಡಿಕೊಂಡಿದೆ. ವೈಯಕ್ತಿಕ ಬದುಕಿನ ನಿಷೇಧಗಳು, ಪಾಪ ಪ...