Date: 17-09-2024
Location: ಬೆಂಗಳೂರು
ಬೆಂಗಳೂರು: ಕನ್ನಡದ ಖ್ಯಾತ ಕತೆಗಾರ ದಿವಂಗತ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಸ್ಮರಣಾರ್ಥವಾಗಿ ಆರಂಭವಾಗಿರುವ ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ವತಿಯಿಂದ ಸಮಕಾಲೀನ ಸಾಮಾಜಿಕ ವಿಚಾರಗಳನ್ನು ಕುರಿತ ಮೂರು ದಿನಗಳ "ವಿಚಾರ ಕಮ್ಮಟ" ಸಂವಾದ ಕಾರ್ಯಾಗಾರವನ್ನು ಖ್ಯಾತ ಭಾಷಾತಜ್ಞ ಡಾ. ಕೆ.ವಿ.ನಾರಾಯಣ ಅವರ ನಿರ್ದೇಶನದಲ್ಲಿ ಆಯೋಜಿಸಲಾಗಿದೆ.
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಭಾಗಿತ್ವದೊಡನೆ ನಡೆಯಲಿರುವ ಈ ಕಮ್ಮಟವನ್ನು ಕುವೆಂಪು ಅವರ ಜನ್ಮಸ್ಥಳ ಕುಪ್ಪಳಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ. ನವೆಂಬರ್ 22, 23 ಮತ್ತು 24ನೇ 2024 ರಂದು ನಡೆಯಲಿರುವ ಮೂರು ದಿನದ ಈ ಕಮ್ಮಟದಲ್ಲಿ ಸಾಮಾಜಿಕ ಚಿಂತನೆಗಳಲ್ಲಿ ಆಸಕ್ತಿಯಿರುವ, 25-55 ವಯೋಮಾನದವರು ಭಾಗವಹಿಸಬಹುದು. ಆಯ್ಕೆಯಾದ ಶಿಬಿರಾರ್ಥಿಗಳಿಗೆ ಉಚಿತ ಊಟ, ವಸತಿ ವ್ಯವಸ್ಥೆ ಇರುತ್ತದೆ. ಯಾವುದೇ ಶುಲ್ಕವಿಲ್ಲ. ಆಸಕ್ತಿಯಿರುವವರು ತಮ್ಮ ವಿವರಗಳನ್ನು (ಹೆಸರು, ವಯಸ್ಸು, ವಿಳಾಸ, ವ್ಯಾಸಂಗ/ಉದ್ಯೋಗ, ಆಸಕ್ತಿಗಳನ್ನ ಒಳಗೊಂಡಂತೆ) ಅಧ್ಯಕ್ಷರು, ಡಾ.ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್, 15, 2ನೇ ಅಡ್ಡರಸ್ತೆ, ನಿಸರ್ಗ ಬಡಾವಣೆ, ಉಲ್ಲಾಳ ಆರ್ಟಿಓ ಕಚೇರಿ ಹತ್ತಿರ, ಬೆಂಗಳೂರು-560 091 ಇವರಿಗೆ ದಿನಾಂಕ 05.10.2024 ರೊಳಗೆ ಕಳುಹಿಸಲು ಕೋರಿದೆ. ಅಥವಾ drbitrust@gmail.com ಈ ಮೇಲ್ ಮೂಲಕವೂ ಕಳುಹಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9980305837 ಅಥವಾ 9739007127 ಸಂಪರ್ಕಿಸಬಹುದು.
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೋಟಗೋಡಿ, ಹಾವೇರಿ ಜಿಲ್ಲೆ ಇವರ ಸಹಯೋಗದಲ್ಲ...
ಬೆಂಗಳೂರು: ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಕನ್ನಡ ಸಂಘದ ಸುವರ್ಣ ಮಹೋತ್ಸವ 2024ರ ಅಂಗವಾಗಿ ಏರ್ಪಡಿಸಿದ್ದ ಎರಡು ದಿನಗಳ ...
ಬೆಂಗಳೂರು: ಯಕ್ಷವಾಹಿನಿ ಪ್ರತಿಷ್ಠಾನ ಮತ್ತು ಹೆಗ್ಗೋಡಿನ ಯಕ್ಷ ದುರ್ಗ ಕಲಾ ಬಳಗ ಜಂಟಿಯಾಗಿ ಹಮ್ಮಿಕೊಂಡಿದ್ದ ಪಿ. ಚಂದ್ರಿ...
©2024 Book Brahma Private Limited.