‘ಜೀವನದಲ್ಲಿ ಮರೆಯಾಗುತ್ತಿರುವ, ಮುಂದೆದುರಿಸಲು ಸಿದ್ಧವಾಗುತ್ತಿರುವ ಸಂದರ್ಭಗಳೇ ಈ ಕಥಾಸಂಕಲನದ ಕಥೆಗಳು’ ಎನ್ನುತ್ತಾರೆ ಪ್ರಸಾದ್. ಅವರು ಕಾರ್ತಿಕಾದಿತ್ಯ ಬೆಳ್ಗೋಡು ಅವರ ‘ಕಾಡು ಹಾದಿಯ ಜಾಡು ಹತ್ತಿ’ ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.
ಕೃತಿ: ಕಾಡು ಹಾದಿಯ ಜಾಡು ಹತ್ತಿ
ಲೇಖಕ: ಕಾರ್ತಿಕಾದಿತ್ಯ ಬೆಳ್ಗೋಡು
ಕಥಾ ಸಂಕಲನದ ದಂಗೆಯ ದಿನಗಳ ಹೆಸರಿಲ್ಲದ ಭವಿಷ್ಯತ್ತಿನ ಕನಸಿನ ವಾಸ್ತವದ ಕಥೆ ಬಹಳ ಇಷ್ಟವಾಯಿತು. ಊರು ಮಳೆ ಶಾಲೆ ಊರವರು ಅನ್ನೋ ಪದಗಳು ಊರು ಬಿಟ್ಟು ದೂರ ಬಂದವರಿಗೆ ಅದು ಹೇಗೆ ಅನುಭವಕ್ಕೆ ಬರುತ್ತವೆ ಅಂತ ಹೇಳಬೇಕಾಗಿಲ್ಲ. ಊರಿಗೆ ಮರಳಿದಾಗ ಬದಲಾದ ಸ್ಥಿತಿಗೆ ಹೊಂದಿಕೊಳ್ಳೋದರ ಕಷ್ಟದ ಜೊತೆ ಹಳೆ ನೆನಪುಗಳು ಕಾಡುವುದು ಹೆಚ್ಚು. ಎಲ್ಲ ಇದ್ದು ಎಲ್ಲವನ್ನು ಕಳೆದುಕೊಂಡೆನಾ ಅನ್ನೋ ಭಾವ.
ಅಂತಹದೇ ಕಳೆದುಕೊಂಡ, ಮರೆಯಾಗುತ್ತಿರುವ, ಮುಂದೆದುರಿಸಲು ಸಿದ್ಧವಾಗುತ್ತಿರುವ ಸಂದರ್ಭಗಳೇ ಈ ಕಥಾಸಂಕಲನದ ಕಥೆಗಳು. ಚಿಕ್ಕದಾಗಿ ಚೊಕ್ಕದಾಗಿ ರಪ ರಪ ಓದಿಸಿಕೊಳ್ಳುವ 16 ಕಥೆಗಳು. ಮಲೆನಾಡ ಪರಿಸರದ ಸುಂದರ, ಕಠೋರ, ಕಾರ್ಪಣ್ಯದ ಜೀವನಗಳನ್ನು ಹೇಳುವ ಕೃತಿಗಳಲ್ಲಿ ಇದು ಒಂದು.
-ಪ್ರಸಾದ್
“ಕುಂ.ವೀರಭದ್ರಪ್ಪ ಅವರ ಸೃಷ್ಟಿ ಪ್ರತಿಭಟನಾತ್ಮಕ ಸಾಹಿತ್ಯವಾಗಿ ಸಹಜ ಬಂಡಾಯದ ಧ್ವನಿಯಾಗಿದೆ. ಎಪ್ಪತ್ತೊಂದು ವರ್ಷದ...
"ನನ್ನ ಗಸ್ತಿಗೆ ಬಂದ ಹೊಸತರಲ್ಲಿ ವಾಚರುಗಳಿಬ್ಬರು ನನ್ಮುಂದೆ "ಈ ಗಸ್ತಿನ ವ್ಯಾಪ್ತಿಯಲ್ಲಿ ಮೊಸಳೆ ಕಾಟ ಜಾಸ್ತ...
"ಈ ಕಾದಂಬರಿಯಲ್ಲಿ ನನ್ನ ಮನಸ್ಸಿಗೆ ತೀರಾ ಹತ್ತಿರವಾದ ಸಾಲು "ರೂಪವೋ ಗುಣವೋ ಸಂಸ್ಕಾರವೋ ಬುದ್ಧಿಯೋ ರಕ್ತಸಂಬಧ...
©2024 Book Brahma Private Limited.