About the Author

ಕೊಪ್ಪಳ ಜಿಲ್ಲೆಯ ವಿಜಯಲಕ್ಷ್ಮಿ ಕೊಟಗಿಯವರು ವೃತ್ತಿಯಿಂದ ಶಿಕ್ಷಕಿಯಾದರೂ ಪ್ರವೃತ್ತಿಯಿಂದ ಕವಯತ್ರಿ ಮತ್ತು ಕಲಾವಿದೆ. ವೃತ್ತಿಯೊಂದಿಗೆ ಪ್ರವೃತ್ತಿಯನ್ನು ಅಪಾರವಾಗಿ ಪ್ರೀತಿಸುವ ಇವರು ಸದಾ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಅನೇಕ ಸಾಹಿತ್ಯ ಸಮ್ಮೇಳನ ಮತ್ತು ಕವಿ ಗೋಷ್ಠಿಯಲ್ಲಿ ಭಾಗವಹಿಸಿ ಹಿರಿಯ ಸಾಹಿತಿಗಳ ಮೆಚ್ಚುಗೆ ಪಡೆದಿದ್ದಾರೆ. ಅಲ್ಲದೇ *ನನ್ನೊಳಗಿನ ನಾನು, ಕೆಂಡದ ಉಡಿಯಕ್ಕಿ, ಮುತ್ತಿನ ಕುಂಚಿಗೆ, ಮಿಂಚುಹನಿ* ಕೃತಿಗಳು ಈಗಾಗಲೇ ಪ್ರಕಟಿಸಿದ್ದಾರೆ. ಈಗ *ಶ್ರೀವಿಜಯ ಸ್ವಗತ* ಆಧುನಿಕ ವಚನಗಳು ಮತ್ತು *ಅರಳದ ಅಲರು* ಸಣ್ಣ ಕಥಾ ಸಂಕಲನ ಲೋಕಾರ್ಪಣೆಗೊಳ್ಳಬೇಕಿದೆ. ಸ್ತ್ರೀಪರ ನೆಲೆಯಲ್ಲಿ ಸೂಕ್ಷ್ಮ ಸಂವೇದಿ ಬರಹದ ಈ ಕೃತಿಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿ ಎಂದು ನಮ್ಮ ಕಡೆಯಿಂದ ಶುಭಹಾರೈಕೆಗಳು.

ವಿಜಯಲಕ್ಷ್ಮಿ ಕೊಟಗಿ

(01 Jun 1968)