About the Author

ಕವಿ, ಲೇಖಕ, ಪ್ರಕಾಶಕ, ಅಂಕಣಕಾರ, ಸುಗಮಸಂಗೀತ ಗಾಯಕ ಉಮೇಶ ಮುಂಡಳ್ಳಿ ಮೂಲತಃ ಭಟ್ಕಳದವರು. ಇವರು ಹತ್ತು ವರ್ಷಗಳ ಕಾಲ ಭಟ್ಕಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2016-2021 ರವರೆಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕೋಶಾಧ್ಯಕ್ಷರಾಗಿ ಸಾಹಿತ್ಯ ಕಾರ್ಯ ನಿರ್ವಹಿಸಿರುತ್ತಾರೆ. 2016ರಲ್ಲಿ ನಿನಾದ ಸಾಹಿತ್ಯ,ಸಂಚಯ ಸಂಸ್ಥೆಯನ್ನು ಹುಟ್ಟುಹಾಕಿ ಕಲಾಪೋಷಕರಾಗಿಯೂ, ಕಲಾಸೇವೆ ಮಾಡುತ್ತಿದ್ದಾರೆ.

ಕೃತಿಗಳು: ಮೌನಗೀತೆ(2003), ಭಾವಸುಮ(2005), ನಾನೂ ಶಿಲ್ಪವಾಗಬೇಕು(2003), ಕರುನಾಡು ಕುಡಿಗಳು(ಸಂಪಾದಿತ ಕೃತಿ-2003), ಬೆಂಕಿ ಬಿದ್ದಿದೆ ಹೊಳೆಗೆ!ಮತ್ತು ಇತರ ಕಥೆಗಳು(2012), ಉತ್ತರಕನ್ನಡಕ್ಕೆ ಒಂದು ಸುತ್ತು(ಪ್ರವಾಸಿ ಕಥನ-2023), ತಿಂಗಳ ಬೆಳಕು(ಹನಿಗವನ ಸಂಕಲನ)

ಪ್ರಶಸ್ತಿಗಳು: ಸುವರ್ಣ ಕರ್ನಾಟಕ ಸೇವಾಪ್ರಶಸ್ತಿ, ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕಲಾಶ್ರೀ ಪ್ರಶಸ್ತಿ, ಬಸವಚೇತನ ಪ್ರಶಸ್ತಿ, ಜಿಲ್ಲಾ ಯುವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ರತ್ನ 2022, ಚಿತ್ರನಟ ಲೋಕೇಶ ಸ್ಮರಣಾರ್ಥ ಪ್ರಶಸ್ತಿಗಳು ಸಂದಿವೆ. 

ಉಮೇಶ ಮುಂಡಳ್ಳಿ ಭಟ್ಕಳ