About the Author

ಶಿಲ್ಪಾ ಮ್ಯಾಗೇರಿ ಅವರು ಮೂಲತಃ ಗದಗ ಜಿಲ್ಲೆಯವರು, ತಾಯಿಯ ಮನೆ ಕೊಪ್ಪಳ ಅಲ್ಲಿಂದಲೇ ಸಾಹಿತ್ಯದ ನಂಟು ಬೆಸೆದುಕೊಂಡ ಶಿಲ್ಪಾ ಮ್ಯಾಗೇರಿ ಅವರು ಎಂ.ಎ. ಬಿ.ಎಡ್. ಪೂರ್ಣಗೊಳಿಸಿ ಸದ್ಯ ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆ, ಚಿತ್ರಕಲೆ, ಕಸೂತಿಕಲೆಗಳನ್ನು ತಮ್ಮ ಹವ್ಯಾಸವಾಗಿಸಿಕೊಂಡಿರುವ ಅವರು ಮೂರು ಕೃತಿಗಳನ್ನು ಪ್ರಕಟಿದ್ದಾರೆ. 

ಕೃತಿಗಳು: 

1 ಭಾರತಾಂಬೆ ಪ್ರಥಮ ಕವನ ಸಂಕಲನ 2015 ರಲ್ಲಿ. 
2 ಆಕಾಶಕ್ಕೊಂದು ಏಣಿ ಚುಟುಕು ಸಂಕಲನ.
3 ಮಾತು ಮೌನದ ನಡುವೆ ಕವನ ಸಂಕಲನ.

ಶಿಲ್ಪಾ ಮ್ಯಾಗೇರಿ