ಜಿತ್ವರೀ : ಇದು ಕಾಶಿ

Author : ಸದ್ಯೋಜಾತ ಭಟ್ಟ

Pages 228

₹ 220.00




Year of Publication: 2023
Published by: ಸಮನ್ವಿತ ಪ್ರಕಾಶನ

Synopsys

ಜಿತ್ವರೀ : ಇದು ಕಾಶಿ ಸದ್ಯೋಜಾತ ಭಟ್ಟರ ಕೃತಿಯಾಗಿದೆ. ಸೆಪ್ಟೆಂಬರ್ 2, 1669 ರಂದು ಕಾಶಿಯ ವಿಶ್ವನಾಥನ ದೇವಾಲಯವನ್ನು ಕೆಡವಿದರು ಎಂಬ ಸುದ್ದಿಯನ್ನು ಔರಂಗಾಜೇಬ್ ಪಡೆದ. ಕೇವಲ ದೇವಾಲಯವನ್ನು ಕೆಡವಿದ್ದು ಮಾತ್ರವಲ್ಲ ಜ್ಞಾನವಾಪಿ ಮಸೀದಿಯನ್ನು ಸಹ ಅಲ್ಲಿಯೇ ನಿರ್ಮಿಸಲಾಯಿತು. ಮಸೀದಿಯ ನಿರ್ಮಾಣ ಮಾಡಿದವರು ಹಳೆಯ ದೇವಾಲಯದ ಪಶ್ಚಿಮ ಗೋಡೆಯನ್ನು ಕೆಡವಿದರು. ಕೆಲವು ಚಿಕ್ಕ ಮಂದಿರಗಳನ್ನೂ ಕೆಡವಿದರು. ಪಶ್ಚಿಮ, ಉತ್ತರ ಮತ್ತು ದಕ್ಷಿಣ ದ್ವಾರಗಳನ್ನು ಸಹ ಮುಚ್ಚಲಾಯಿತು, ದ್ವಾರಗಳ ಮೇಲಿನ ಶಿಖರಗಳನ್ನು ನಾಶಗೊಳಿಸಲಾಯಿತು. ಅವುಗಳ ಸ್ಥಳದಲ್ಲಿ ಗುಮ್ಮಟಗಳನ್ನು ನಿರ್ಮಿಸಲಾಯಿತು. ವಿಶ್ವನಾಥನ ಗರ್ಭಗುಡಿಯು ಮಸೀದಿಯ ಮುಖ್ಯ ಸಭಾಂಗಣವಾಯಿತು. ನಾಲ್ಕು ಅಂತರ್‌ಗೃಹಗಳನ್ನು ಉಳಿಸಿದರು. ದೇವಾಲಯದ ಪೂರ್ವ ಭಾಗವನ್ನು ಕೆಡವಿ ಅದನ್ನು ಜಗುಲಿಯಾಗಿ ಪರಿವರ್ತಿಸಿದರು ಎಂದು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಲಾಗಿದೆ.

About the Author

ಸದ್ಯೋಜಾತ ಭಟ್ಟ

ಲೇಖಕ, ಸಂಶೋಧಕ ಸದ್ಯೋಜಾತ ಭಟ್ಟ ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನವರು. ಕನ್ನಡ ಪಂಡಿತರಾದ ಅವರು ಶಾಸನಗಳ ಅಧ್ಯಯನ ಮತ್ತು ಶಾಸನಗಳ ಪದಕೋಶಗಳ ರಚನೆಯ ಜೊತೆಗೆ ಶಾಸನಗಳಲ್ಲಿ ಬಳಸಲ್ಪಟ್ಟ ಲಿಪಿಗಳ ಅಧ್ಯಯನ ನಡೆಸಿದ್ದಾರೆ. ಖರೋಷ್ಟಿ, ಬ್ರಾಹ್ಮಿ, ಶಾರದಾ, ನಾಗರೀ ನಂದಿನಾಗರೀ ಮತ್ತು ಕನ್ನಡ ಲಿಪಿಗಳ ಲಿಪ್ಯಂತರಣ. ಪ್ರಸ್ತುತ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆರಂಭಗೊಂಡ ಪಾಲಿಯೋಗ್ರಾಫಿ ಮತ್ತು ಮ್ಯಾನ್ಯುಸ್ಕ್ರಿಪ್ಟಾಲಜಿಯಲ್ಲಿ ಬೋಧಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ’ಶಿಲೆಗಳಲ್ಲಡಗಿದ ಸತ್ಯ’, ’ನಾಸತ್ಯಾ’ ಅವರ ಕೃತಿಗಳು. ’ಕಾಲಯಾನ’ ಅವರ ಇತ್ತಿಚಿನ ಕೃತಿ. ...

READ MORE

Related Books