ಅಂತರ್ಯಾನ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 192

₹ 200.00




Year of Publication: 2023
Published by: ಕವಿತಾ ಪ್ರಕಾಶನ
Address: ಸೃಷ್ಟಿ ಅನ್‌ಮೋಲ್‌ ಅರ್ಪಾಟ್‌ಮೆಂಟ್‌, ಜಯಲಕ್ಷ್ಮಿ ರೋಡ್‌, ಚಾಮರಾಜ ಪುರಮ್‌, ಮೈಸೂರು 570005
Phone: 9880105526

Synopsys

ಅಂತರ್ಯಾನ  ಕನ್ನಡದ ಪ್ರಸಿದ್ಧ ಲೇಖಕ ಜಿ.ಎನ್. ರಂಗನಾಥ ರಾವ್‌ ಅವರ ಬದುಕು-ಬರಹ-ಸಾಧನೆಗಳನ್ನು ಪರಾಮರ್ಶಿಸುವ ಒಂದು ವಿಶಿಷ್ಟ ಕೃತಿ, ಟಿ.ವಿ.ವೆಂಕಟಾಚಲ ಶಾಸ್ತ್ರಿ, ಜಿ.ಎಸ್.ಆಮೂರ, 'ಯು.ಆರ್.ಅನಂತ ಮೂರ್ತಿ, ಎಲ್.ಎಸ್.ಶೇಷಗಿರಿ ರಾವ್, ಸಿ.ಎನ್.ರಾಮಚಂದ್ರನ್ ಮುಂತಾದ ಹಿರಿಯರಿಂದ ಹಿಡಿದು, ಜಿ.ಎನ್‌.ಆರ್ ಅವರ ಗೆಳೆಯರು, ಸರೀಕರು, ಕಿರಿಯ ಸಮಕಾಲೀನರು ಆಸೆಯಿಂದ ಬರೆದ ಬರಹಗಳು ಈ ಸಂಪುಟದಲ್ಲಿ ಸಂಗ್ರಹಿತವಾಗಿವೆ. ರಂಗನಾಥರಾಯರಿಗೆ ವೃತ್ತಿ ಮತ್ತು ಪ್ರವೃತ್ತಿಗಳನ್ನು ಪ್ರತಿನಿಧಿಸುವಂತಹ ಎರಡು ಮುಖಗಳಿವೆ; ಅವು ಪರಸ್ಪರ ಪೂರಕವಾಗಿವೆ ಕೂಡ. ಪತ್ರಿಕೋದ್ಯಮದಲ್ಲಿ ಇರುವವರು ತಮ್ಮ ಸಾಹಿತ್ಯಕ ಬರವಣಿಗೆಯನ್ನು ನಡೆಸಲಾರರು ಎಂಬ ಅಪವ್ಯಾಖ್ಯೆಯನ್ನು ಜಿ.ಎನ್‌.ಆರ್. ಹುಸಿಮಾಡಿದ್ದಾರೆ. ನಮ್ಮ ಹಳೆಯ ಪೀಳಿಗೆಯ ಕಡೆಂಗೋಡ್ಲು, ಆನಂದಕಂದ, ವೀರಕೇಸರಿ, ಡಿವಿಜಿಯವರಂತೆ ವೃತ್ತಿಗೆ ಮತ್ತು ಪ್ರವೃತ್ತಿಗೆ ಸಂಬಂಧಿಸಿ ಸಮಾಸಮ ತೂಕದ ಮೌಲ್ಯಾನ್ವಿತ ಬರಹಗಳನ್ನು ಜಿ.ಎನ್‌.ಆರ್. ಮಾಡಿದ್ದಾರೆ. ಪ್ರಚಾರ, ಪ್ರಸಿದ್ಧಿ, ಪ್ರಶಸ್ತಿಗಳಿಗೆ ಹಾತೊರೆಯದ ಜಿಎನ್‌ಆರ್' ಎಂದೇ ಪರಿಚಿತರಾದವರು ಜಿ.ಎನ್‌.ರಂಗನಾಥ ರಾವ್, ಮೂವತ್ತಕ್ಕೂ ಅಧಿಕ ವರ್ಷಗಳವರೆಗೆ ಪ್ರಜಾವಾಣಿ, ಸುಧಾ, ಮಯೂರ ಪತ್ರಿಕೆಗಳಿಗೆ ದುಡಿದು ನಿವೃತ್ತರಾದ ನಂತರ ಅಧ್ಯಾಪಕರಾಗಿ ಜೊತೆಗೆ ಕಸ್ತೂರಿ ಮಾಸಪತ್ರಿಕೆಗೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಕೇವಲ ಪತ್ರಕರ್ತರಾಗಿ ದುಡಿಯದ ಅವರು ಸಾಹಿತ್ಯ ವಿದ್ಯಾರ್ಥಿಯಾದ ಪರಿಣಾಮ ತಾವೂ ಬರೆಯುತ್ತ, ಇತರರನ್ನು ಬೆಳೆಸಿದರು. ಅವರ ಒಲವಿನ ಸಾಹಿತ್ಯ, ರಂಗಭೂಮಿ, ಸಿನಿಮಾ ಕುರಿತು ಬರೆಯುವವರನ್ನು ಕಂಡರೆ ಅವರಿಗೆ ಪ್ರೀತಿ, ಹಾಗೆ ಬರೆಯುವವರಿಗೆ ಉತ್ತೇಜನ ನೀಡಿದರು. ಸದಾ ಶ್ರಮ ವಹಿಸಿ ದುಡಿಯುತ್ತಿದ್ದ ಅವರು, ತಮ್ಮಂತೆ ದುಡಿಯುವವರನ್ನು ಪ್ರೋತ್ಸಾಹಿಸಿದರು. ಇದರ ಪರಿಣಾಮ ನನ್ನಂಥ ನೂರಾರು ಪತ್ರಕರ್ತರನ್ನು ಬೆಳೆಸಿದ ಹೆಗ್ಗಳಿಕೆ ಅವರದು. ಎಂಬತ್ತೊಂದರ ಹರೆಯದಲ್ಲೂ ಓದುವ, ಬರೆಯುವ ಉತ್ಸಾಹಿ ಅವರು. ಇಂಥ ಜಿಎನ್‌ಆರ್‌ ಅವರ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕುರಿತ ಪರಾಮರ್ಶನ ಗ್ರಂಥವನ್ನು ಹೆಸರಾಂತ ಸಾಹಿತಿ ಡಾ.ಎಚ್.ಎಸ್‌. ವೆಂಕಟೇಶ ಮೂರ್ತಿ ಸಂಪಾದಿಸಿಕೊಟ್ಟಿದ್ದಾರೆ ಎಂದು ಗಣೇಶ ಅಮೀನಗಡ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ. 

 

 

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books