ಎಂ.ಎ. (ಇಂಗ್ಲಿಷ್) ಮತ್ತು ಭಾಷಾಂತರ ಡಿಪ್ಲೊಮಾ ಪದವೀಧರೆ ಆಗಿರುವ ತೇಜಶ್ರೀ ಅವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ವರ್ಷ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 'ಟ್ಯಾಗೋರ್ ಪೀಠ'ದಲ್ಲಿ ಸಂಶೋಧನಾ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ತೊದಲುವುದು ವೈಕಲ್ಯವಲ್ಲ,
ಅದು ಮಾತಿನ ಬಗೆ.
ಪದ ಮತ್ತದರ ಅರ್ಥದ ನಡುವಿಗೆ
ಒದಗುವ ಮೌನ ಈ ತೊದಲು,
ಹೇಗೆ ಕುಂಟುತನವು
ಮಾತು ಮತ್ತು ಕ್ರಿಯೆಯ ನಡುವೆ
ಇರುವ ಮೌನವೋ ಹಾಗೆ ಇದು.
ತೊದಲುವಿಕೆಯು ಭಾಷೆಗಿಂತ ಮೊದಲು ಬಂತೋ
ಅಥವಾ ಭಾಷೆಯ ನಂತರವೊ?
ಅದು ಕೇವಲ ಒಳನುಡಿಯೋ
ಅಥ...