ನಟರಾಜ್ ಹುಳಿಯಾರ್ ಮತ್ತು ಬಂಜಗೆರೆ ಜಯಪ್ರಕಾಶ್ ಗೆ ಡಾ. ಜಿ.ಎಸ್ ಶಿವರುದ್ರಪ್ಪ ವಿಮರ್ಶಾ ಪ್ರಶಸ್ತಿ

Date: 18-11-2022

Location: ಬೆಂಗಳೂರು


ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಹೆಸರಿನಲ್ಲಿ ನೀಡುವ 2022ನೇ ಸಾಲಿನ ಜಿ.ಎಸ್.ಎಸ್ ವಿಮರ್ಶಾ ಪ್ರಶಸ್ತಿಗಾಗಿ ವಿಮರ್ಶಕರಾದ ನಟರಾಜ್ ಹುಳಿಯಾರ್ ಮತ್ತು ಬಂಜಗೆರೆ ಜಯಪ್ರಕಾಶ್ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 15,000 ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿ ಗೌರವಗಳನ್ನು ಒಳಗೊಂಡಿದೆ. 

‘ಜಿ.ಎಸ್.ಎಸ್ ವಿಶ್ವಸ್ಥ ಮಂಡಳಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದು ಪ್ರತಿಷ್ಠಾನದ ಅಧ್ಯಕರು ಎಸ್. ನಟರಾಜ ಬೂದಾಳು ಹಾಗೂ ಕಾರ್ಯದರ್ಶಿ ಬಸವರಾಜ ಕಲ್ಗುಡಿ ತಿಳಿಸಿದ್ದಾರೆ.

2021ನೇ ಸಾಲಿನಲ್ಲಿ ವಿಮರ್ಶಕರಾದ ಗುರುಲಿಂಗ ಕಾಪಸೆ ಹಾಗೂ ಎಚ್.ಎಸ್ ಶ್ರೀಮತಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದರು. ಡಾ. ಜಿ.ಎಸ್.ಶಿವರುದ್ರಪ್ಪ ಅವರ ಜನ್ಮದಿನ ಫೆ. 7, 2023ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

MORE NEWS

ಅವಕಾಶವಂಚಿತ ರಾದಾಗಲೇ ಬದುಕು ಹೊಸ ಹುಟ್ಟು ಪಡೆಯುತ್ತದೆ; ವಸುಧೇಂದ್ರ

06-04-2025 ಬೆಂಗಳೂರು

ಬೆಂಗಳೂರು: ಛಂದ ಪುಸ್ತಕ ಪ್ರಕಾಶನದ ವತಿಯಿಂದ ಪುಸ್ತಕ ಬಹುಮಾನ ಕಾರ್ಯಕ್ರಮವನ್ನು 2025 ಎ. 06 ಭಾನುವಾರದಂದು ನಗರದಲ್ಲಿ ಹ...

ನಾಗಮಣಿ ಎಸ್ ರಾವ್ ಅವರ ‘ಸುದ್ದಿ ಸಂಗಾತಿ ಸ್ವಗತ’ ಆತ್ಮಕಥನ ಬಿಡುಗಡೆ ಸಮಾರಂಭ

06-04-2025 ಬೆಂಗಳೂರು

ಬೆಂಗಳೂರು: ಮಾಧ್ಯಮ ಚಿಂತನ ವೇದಿಕೆಯಿಂದ ವಿಕಾಸ ಪ್ರಕಾಶನದಿಂದ ಪ್ರಕಟವಾದ ನಾಗಮಣಿ ಎಸ್.ರಾವ್ ಅವರ ‘ಸುದ್ದಿ ಸಂಗಾತ...

ರಾಷ್ಟ್ರೀಯ ಜಾನಪದ ಅಕಾಡೆಮಿ ಸ್ಥಾಪನೆಗೆ ಡಾ. ಪುರುಷೋತ್ತಮ ಬಿಳಿಮಲೆ ಅಗ್ರಹ

05-04-2025 ಬೆಂಗಳೂರು

ಬೆಂಗಳೂರು: ಕರ್ನಾಟಕ ಮಾತ್ರವಲ್ಲ ಇಡೀ ಭಾರತದೇಶ ಜಾನಪದ ಸಂಸ್ಕೃತಿಯ ಆಡುಂಬಲವಾಗಿದ್ದು ಬಹುತ್ವ, ಬಹುರೂಪಿ ಜಾನಪದವನ್ನು ಸ...