ಸಮಾಜಮುಖಿ ಕಥಾ ಪುರಸ್ಕಾರ-2024 ಫಲಿತಾಂಶ ಪ್ರಕಟ

Date: 07-04-2025

Location: ಬೆಂಗಳೂರು


ಬೆಂಗಳೂರು: ಸಮಾಜಮುಖಿ ಪ್ರಕಾಶನವು 2024ನೇ ಸಾಲಿನ ವಾರ್ಷಿಕ ಕಥಾ ಸ್ಪರ್ಧೆಯ ಫಲಿತಾಂಶವನ್ನು ಘೋಷಿಸಿದೆ.

ವೀರೇಶ ಶಿವಲಿಂಗಪ್ಪ ಸಜ್ಜನ ಅವರ ‘ಕ್ಯಾನವಾಸ್, ಹಳೆಮನೆ ರಾಜಶೇಖರ ಅವರ ‘ದೇವರ ತುಪ್ಪ’, ಟಿ.ಆರ್.ಉಷಾರಾಣಿ ಅವರ ‘ಕಾಲವೆಂಬ ಕಬಂಧ ಬಾಹು’, ಡಾ.ನಾಗರಾಜ ಕೋರಿ ಅವರ ‘ಶಕುನದ ಚುಕ್ಕಿ’ ಹಾಗೂ ಫೌಝಿಯಾ ಸಲೀಂ ಅವರ ‘ಬಯಾಲಾಜಿಕಲ್ ಫಾದರ್’ ಕಥೆಗಳು ತಲಾ ರೂ.5000 ನಗದು ಒಳಗೊಂಡ ಸಮಾಜಮುಖಿ ಕಥಾ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

ಸಂಪತ್ ಸಿರಿಮನೆ, ಪ್ರವೀಣ್‌ ಕುಮಾರ್‌ ಜಿ., ಪೂರ್ಣಿಮಾ ಭಟ್ಟ ಸಣ್ಣಕೇರಿ, ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ, ಅಂದಯ್ಯ ಅರವಟಗಿಮಠ, ಹೇಮಂತ್ ಲಿಂಗಪ್ಪ, ಜಹಾನ್ ಆರಾ ಕೋಳೂರು, ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಡಾ.ಜಯದೇವಿ ಗಾಯಕವಾಡ, ಅಮರೇಶ ಗಿಣಿವಾರ ಅವರ ಕಥೆಗಳು ಸಮಾಜಮುಖಿ ವಾರ್ಷಿಕ ಕಥಾಸಂಕಲನಕ್ಕೆ ಆಯ್ಕೆಯಾಗಿವೆ.

ಸ್ಪರ್ಧೆಯಲ್ಲಿ ಒಟ್ಟು 241 ಕಥೆಗಾರರು ಭಾಗವಹಿಸಿದ್ದರು. ಲೇಖಕ, ವಿಮರ್ಶಕ ರಂಗನಾಥ ಕಂಟನಕುಂಟೆ ಸ್ಪರ್ಧೆಯ ಅಂತಿಮ ಹಂತದ ತೀರ್ಪುಗಾರರಾಗಿದ್ದರು.

MORE NEWS

ಸಂಗ ಸಾಹಿತ್ಯ ಪುರಸ್ಕಾರದ ಅಂತಿಮ ಹಂತಕ್ಕೆ ಐದು ಕಾದಂಬರಿಗಳು

06-05-2025 ಬೆಂಗಳೂರು

ಬಳ್ಳಾರಿಯ ಸಂಗಂ ಟ್ರಸ್ಟ್ ವತಿಯಿಂದ 2025ನೇ ಸಾಲಿನ ಸಂಗಂ ಸಾಹಿತ್ಯ ಕಾದಂಬರಿ ಪುರಸ್ಕಾರ ಕೃತಿಗಳನ್ನು ಆಹ್ವಾನಿಸಿದ್ದು, ಪ...

ಅಪೂರ್ಣ ಪ್ರೇಮದ ಅಪೂರ್ವ ನಿರೀಕ್ಷೆ ಮಾಂಡೋವಿ

06-05-2025 ಬೆಂಗಳೂರು

"ಯೌವ್ವನದ ಆರಂಭದಲ್ಲಾದ ಪ್ರೇಮವೊಂದು ಬದುಕಿನ ಪೂರ್ತಿ ಅದೇ ಪ್ರೇಮಕ್ಕೆ ಹಂಬಲಿಸುವ ಕಥೆ ಮಾಂಡೋವಿ. ಪ್ರೀತಿ ಒಬ್ಬ ಮನ...

ಹೆಚ್. ಶಾಂತಾರಾಮ್ ದತ್ತಿ ನಿಧಿ ಪ್ರಶಸ್ತಿಗೆ ಕಾದಂಬರಿಗಳ ಆಹ್ವಾನ

06-05-2025 ಬೆಂಗಳೂರು

ಕುಂದಾಪುರ: ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿಯಾಗಿದ್ದ ಸ್ವಪ್ನಶಿಲ್ಪಿ ಡಾ. ಹೆಚ್. ಶಾಂತಾರಾಮ್ ಅವರ ಹೆಸರಿನಲ್ಲಿ ಕುಂದಾಪು...