ಸಿನಿಮಾದ ಮೂಲ ಧ್ಯೇಯ ಮೂಢನಂಬಿಕೆಗಳಿಂದ ದೂರವಾಗಿ ಎನ್ನುವುದು; ವೆಂಕಟೇಶ್ ರಾವ್

Date: 11-10-2024

Location: ಬೆಂಗಳೂರು


ಬೆಂಗಳೂರು: ಕೃಷ್ಣ ಸಂಕುಲ ಬ್ರಾಂಡಿಂಗ್ ಪಿಕ್ಚರ್ಸ್ ಪ್ರಸ್ತುತಪಡಿಸುತ್ತಿರುವ ಹೆಚ್.ವೆಂಕಟೇಶ್ ರಾವ್ ನಿರ್ಮಾಣದ, ವ್ಯಾನ ವರ್ಣ ಜಮ್ಮುಲ ನಿರ್ದೇಶನದ ‘ಮಾಂತ್ರಿಕ’ ಸಿನಿಮಾದ ಪತ್ರಿಕಾಗೋಷ್ಠಿಯು ಗುರುವಾರದಂದು ರೇಣುಕಾಂಬ ಪ್ರೀ ಥಿಯೇಟರ್‌ನಲ್ಲಿ ನಡೆಯಿತು.

ನಿರ್ಮಾಪಕ ಹೆಚ್. ವೆಂಕಟೇಶ್ ರಾವ್ ಮಾತನಾಡಿ, "ಮಾಂತ್ರಿಕ ಸಿನಿಮಾದಲ್ಲಿ ಮಹಾರಾಷ್ಟ್ರದ ಮಬ್ಬಿರದ ಮಾರ್ನುಡಿಯನ್ನು ಕಾಣಬಹುದು. ಈ ಸಿನಿಮಾ ನಡೆಯುವಂತಹದ್ದು ಮಹಾರಾಷ್ಟ್ರದಲ್ಲಿ. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಪ್ರದೇಶವೇ ಮಬ್ಬಿರ. ಮಬ್ಬಿರದಲ್ಲಿ ಮಾರ್ನುಡಿ ಅನ್ನುವಂತಹ ಸ್ಥಳವಿದೆ. ಶಬ್ಧ ಅನ್ನುವಂತಹ ತಂತ್ರಜ್ಞಾನವನ್ನು ನಾವು ಈ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದು, ಮಾರ್ನುಡಿಯಲ್ಲಿ ನಡೆಯುವಂತಹ ಅನೇಕ ಘಟನೆಗಳನ್ನು ಇಲ್ಲಿ ಕಾಣಬಹುದು. ಈ ಸಿನಿಮಾದ ಮೂಲ ಧ್ಯೇಯ ಮೂಢನಂಬಿಕೆಗಳಿಂದ ದೂರವಾಗಿ ಎನ್ನುವುದು. 20 ಮೂವತ್ತು ವರ್ಷಗಳ ಹಿಂದೆ ಇದ್ದಂತಹ ಮೂಢನಂಬಿಕೆಗಳಿಂದ ದೂರವಾಗಿ ಅನ್ನುವಂತಹ ಸಮಾಜಕ್ಕೆ ಬೇಕಾಗಿರುವಂತಹ ಸಂದೇಶವನ್ನು ಈ ಸಿನಿಮಾ ನೀಡುತ್ತಿದೆ," ಎಂದರು.

ಪತ್ರಿಕಾಗೋಷ್ಠಿಯಲ್ಲಿ ವ್ಯಾನ ವರ್ಣ ಜಮ್ಮುಲ, ಮೈಥಿಲಿ ನಾಯಕ್, ರಾಧಿಕಾ ಮಾಲಿಪಾಟೀಲ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

MORE NEWS

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ 2023ನೇ ಸಾಲಿನ ಪ್ರಶಸ್ತಿ ಪಟ್ಟಿ ಪ್ರಕಟ

16-10-2024 ಬೆಂಗಳೂರು

ಉತ್ತರ ಕನ್ನಡ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಡಮಾಡುವ 2023ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ...

ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕವಿತೆಗಳ ಆಹ್ವಾನ

14-10-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು, ಕರ್ನಾಟಕ ಸಂಭ್ರಮ -50 ರ ಅಭಿಮಾನದ ಅಂಗವಾಗಿ ಬೆಂಗಳೂರು, ಮೈಸೂರು, ಬೆಳಗಾವಿ ...

ಜೀವನದಲ್ಲಿ ಅಧ್ಯಾತ್ಮ ಅನ್ನುವಂತಹದ್ದು ಬಹುಮುಖ್ಯ; ಪ್ರಭಾನಂಜನಾಚಾರ್‍ಯ

13-10-2024 ಬೆಂಗಳೂರು

ಬೆಂಗಳೂರು: ಭಾರ್ಗವಿ ಪ್ರಕಾಶನದಿಂದ ಹಮ್ಮಿಕೊಂಡಿದ್ದ ವೈದ್ಯೆ ಡಾ. ಶೋಭಾ ವೆಂಕಟ್ ಅವರ ‘ಸ್ತೋತ್ರ ಸಂಗಮ’ ಕೃ...