‘ಜೀವನದಲ್ಲಿ ಮರೆಯಾಗುತ್ತಿರುವ, ಮುಂದೆದುರಿಸಲು ಸಿದ್ಧವಾಗುತ್ತಿರುವ ಸಂದರ್ಭಗಳೇ ಈ ಕಥಾಸಂಕಲನದ ಕಥೆಗಳು’ ಎನ್ನುತ್ತಾರೆ ಪ್ರಸಾದ್. ಅವರು ಕಾರ್ತಿಕಾದಿತ್ಯ ಬೆಳ್ಗೋಡು ಅವರ ‘ಕಾಡು ಹಾದಿಯ ಜಾಡು ಹತ್ತಿ’ ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.
ಕೃತಿ: ಕಾಡು ಹಾದಿಯ ಜಾಡು ಹತ್ತಿ
ಲೇಖಕ: ಕಾರ್ತಿಕಾದಿತ್ಯ ಬೆಳ್ಗೋಡು
ಕಥಾ ಸಂಕಲನದ ದಂಗೆಯ ದಿನಗಳ ಹೆಸರಿಲ್ಲದ ಭವಿಷ್ಯತ್ತಿನ ಕನಸಿನ ವಾಸ್ತವದ ಕಥೆ ಬಹಳ ಇಷ್ಟವಾಯಿತು. ಊರು ಮಳೆ ಶಾಲೆ ಊರವರು ಅನ್ನೋ ಪದಗಳು ಊರು ಬಿಟ್ಟು ದೂರ ಬಂದವರಿಗೆ ಅದು ಹೇಗೆ ಅನುಭವಕ್ಕೆ ಬರುತ್ತವೆ ಅಂತ ಹೇಳಬೇಕಾಗಿಲ್ಲ. ಊರಿಗೆ ಮರಳಿದಾಗ ಬದಲಾದ ಸ್ಥಿತಿಗೆ ಹೊಂದಿಕೊಳ್ಳೋದರ ಕಷ್ಟದ ಜೊತೆ ಹಳೆ ನೆನಪುಗಳು ಕಾಡುವುದು ಹೆಚ್ಚು. ಎಲ್ಲ ಇದ್ದು ಎಲ್ಲವನ್ನು ಕಳೆದುಕೊಂಡೆನಾ ಅನ್ನೋ ಭಾವ.
ಅಂತಹದೇ ಕಳೆದುಕೊಂಡ, ಮರೆಯಾಗುತ್ತಿರುವ, ಮುಂದೆದುರಿಸಲು ಸಿದ್ಧವಾಗುತ್ತಿರುವ ಸಂದರ್ಭಗಳೇ ಈ ಕಥಾಸಂಕಲನದ ಕಥೆಗಳು. ಚಿಕ್ಕದಾಗಿ ಚೊಕ್ಕದಾಗಿ ರಪ ರಪ ಓದಿಸಿಕೊಳ್ಳುವ 16 ಕಥೆಗಳು. ಮಲೆನಾಡ ಪರಿಸರದ ಸುಂದರ, ಕಠೋರ, ಕಾರ್ಪಣ್ಯದ ಜೀವನಗಳನ್ನು ಹೇಳುವ ಕೃತಿಗಳಲ್ಲಿ ಇದು ಒಂದು.
-ಪ್ರಸಾದ್
"ಮಹಾಭಾರತ ಎಂಬ ಮಹಾಕಾವ್ಯಕ್ಕೆ 'ಭಾರತ' ಎಂದೂ ಸಂಕ್ಷಿಪ್ತವಾಗಿ ಕರೆಯುತ್ತಾರೆ. ವ್ಯಾಸರು ರಚಿಸಿದ ಈ ಮಹಾಭಾ...
“ಪ್ರವಾಸ ಸಾಹಿತ್ಯ ಬರಹಗಾರನ ಕೌಶಲ್ಯತೆಯಿಂದ ಇಲ್ಲಿಯವರೆಗೆ ಏಕತಾನತೆಯ ಏಕಮುಖದ ದಿಕ್ಕನ್ನು ತಪ್ಪಿಸಿ ಎಲ್ಲಾ ದಿಕ್ಕ...
"ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಮುನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದರು. ಅನೇಕ ವಿಜ್ಞಾ...
©2024 Book Brahma Private Limited.