Back To Top

ಮಾನವೀಯತೆ ಮೊಳಕೆಯೊಡೆಯಲಿ | ನಾಗರಾಜ ಕುಟುಮರಿ

ಮಾನವೀಯತೆ ಮೊಳಕೆಯೊಡೆಯಲಿ | ನಾಗರಾಜ ಕುಟುಮರಿ

ಅನ್ನಿಸುವುದು ಕೆಲವೊಮ್ಮೆ ಕಲ್ಲಗೋಡೆಯಾಗಬೇಕಿತ್ತು ಪಶುಪಕ್ಷಿಯಾಗಬೇಕಿತ್ತು ಗಿಡಮರಗಳಾಗಬೇಕಿತ್ತು ಸಾಕಾಗಿದೆ ಮಾನವ ಜನ್ಮ, ನೆಮ್ಮದಿಯಿಲ್ಲ ನಾಡಿನಲಿ ಒಡನಾಡಿಗಳಲಿ ದ್ವೇಷ, ಅಸೂಯೆ ಹೆಚ್ಚಾಗಿದೆ ಮಾನವನಲಿ ಪ್ರೀತಿಯು ಗೈರಾಗಿಬಿಟ್ಟಿದೆ ಮಮತೆ-ವಾತ್ಸಲ್ಯ ಮರೆತುಹೋಗಿದೆ ಸ್ನೇಹವು ಅಡಗಿಕೊಂಡು ಬಿಟ್ಟಿದೆ ಸ್ವಾರ್ಥವು ಪರಮಾರ್ಥವಾಗಿಬಿಟ್ಟಿದೆ ಬೀಳುವುದು ಅದೊಮ್ಮೆ ಬರಗಾಲ ಸ್ನೇಹ-ಪ್ರೀತಿಯದು ಮಮತೆ-ವಾತ್ಸಲ್ಯದ್ದು ಆಗ ನರನೆದೆಯಲಿ ಮಾನವವೀಯತೆ ಮೊಳಕೆಯೊಡೆದು ಹಸಿರಾಗುವುದು ನಾಗರಾಜ ಕುಟುಮರಿ ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
  • 304
  • 0
  • 0
ಕಟ್ಟುಪಾಡುಗಳ ಅಣೆಕಟ್ಟನೊಡೆದು | ದಿವ್ಯಾ ಕರಬಸಪ್ಪ

ಕಟ್ಟುಪಾಡುಗಳ ಅಣೆಕಟ್ಟನೊಡೆದು | ದಿವ್ಯಾ ಕರಬಸಪ್ಪ

ನಾ ಅವಳು, ನೀವು ಆದರ್ಶವೆಂದು ಹೇಳೋ ರಾಮನ ಕಾಲದಲ್ಲೂ ಗೆರೆ ದಾಟದೀರೆಂದು ಅಪ್ಪಣೆಗೊಳಗಾದವಳು ಅಪ್ಪಣೆಗೊಳಗಾಗಿ ನನ್ನ ರೆಕ್ಕೆಗಳ ಮುದುರಿ ಕುಳಿತವಳು ಆತನಾತ್ಮಕೆ ಸಿಕ್ಕು ಆರ್ತನಾದವಾದವಳು ನಾ ಅವಳು,.. ಆತನೆಲ್ಲ ಸುಖಕೆ ಬೇಕಾದ ಹಲವುಗಳಲಿ ಹುಟ್ಟು ಮೂಕವಾಗಿ ಮಾತು ಹೊಲೆದ ಸುಂದರತೆ ಬಳಿದ ಬರಿಯ ಸ್ವತ್ತು ‘ಅವನ’ ಸ್ವತ್ತು, ಯುಗಯುಗಗಳಿಂದ.. ರೆಕ್ಕೆ ಒಣಗಿವೆ, ಒಡಲ ಮಾತು ಕಣ್ಣ
  • 538
  • 0
  • 0